ಕೋವಿಡ್ ವಾರಿಯರ್ಸ್ ಗಳ ಸೇವೆ ಅನನ್ಯ: ಗೋಪಾಲ ಕಾರಜೋಳ
Team Udayavani, May 25, 2020, 4:08 PM IST
ಸಾಂದರ್ಭಿಕ ಚಿತ್ರ
ಇಂಡಿ: ಕೋವಿಡ್ ಮಾಹಾಮಾರಿ ರೋಗ ತಡೆಗಟ್ಟಲು ತಮ್ಮ ಜೀವವನ್ನು ಮುಡಿಪಾಗಿಟ್ಟು ಸಮಾಜದ ಹಿತಕಾಪಾಡಲು ಹಗಲು ರಾತ್ರಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಕೋವಿಡ್ ಯೋಧರಿಗೆ ಅಭಿನಂದಿಸುವುದಾಗಿ ಬಿಜೆಪಿ ಮುಖಂಡ ಗೋಪಾಲ ಕಾರಜೋಳ ಹೇಳಿದರು.
ತಾಲೂಕಿನ ಕರ್ನಾಟಕ ಗಡಿಭಾಗದಲ್ಲಿರುವ ಧೂಳಖೇಡ ಗ್ರಾಮದಲ್ಲಿರುವ ಕೋವಿಡ್ ಚೆಕ್ಪೋಸ್ಟ್ ನಲ್ಲಿ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಮತ್ತು ಕಂದಾಯ, ಆರೋಗ್ಯ ಇಲಾಖೆ, ಆಶಾ ಸಿಬ್ಬಂದಿಗಳಿಗೆ ಸನ್ಮಾನಿಸಿ ಮಾತನಾಡಿದರು. ಮಾಹಾಮಾರಿ ಹೆಚ್ಚು ಹಬ್ಬಿರುವ ಗಡಿ ರಾಜ್ಯ ಮಾಹಾರಾಷ್ಟ್ರ ಸಂಪರ್ಕ ಹೊಂದಿರುವ ರಾಷ್ಟೀಯ ಹೆದ್ದಾರಿ ಮೇಲೆ ಕೆಲಸ ಮಾಡುವುದು ಸುಲಭದ ಮಾತಲ್ಲ. ಎಲ್ಲರಿಗೂ ತಮ್ಮದೆ ಆದ ಜೀವನ ಇರುತ್ತೆ. ಆದರೆ, ಇಂತಹ ಸಂದರ್ಭದಲ್ಲಿ ಕುಟುಂಬ ಎನ್ನುವುದನ್ನು ಮರೆತು ಕರ್ತವ್ಯ ಪಾಲನೆ ಮಾಡುತ್ತಿರುವ ಸೈನಿಕರನ್ನು ಪ್ರತಿಯೊಬ್ಬರು ಗೌರವಿಸಬೇಕಿದೆ. ಅವರಿಗೆ ಅಭಿನಂದಿಸಬೇಕಿದೆ ಎಂದರು.
ಚಡಚಣ ತಹಶೀಲ್ದಾರ್ ಎನ್.ಬಿ.ಗೆಜ್ಜಿ, ಡಿವೈಎಸ್ಪಿ ತುಳಜಪ್ಪಾ ಸುಲಪಿ, ಪಿಎಸ್ಐ ಪರಶುರಾಮ ಮನಗೂಳಿ, ಡಾ| ಉದಯ ಕಾರಜೋಳ, ನಿವರಗಿ ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ನಾಗೇಂದ್ರ ಬಿರಾದಾರ (ಶಿರನಾಳ), ಅಪ್ಪುಗೌಡ ಪಾಟೀಲ (ಗೋಳಗಿ), ರಾಜುಗೌಡ ಪಾಟೀಲ, ಭೀಮು ವಾಲಿಕಾರ, ಗೌಡೇಶ ಪಾಟೀಲ, ಸಂಗಮೇಶ ಗೋರೆ, ಸಿದ್ದುಗೌಡ ಪಾಟೀಲ, ಹಸನ್ ಮಕಾಂದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ