ಜಾನಪದ ಶೈಲಿಯಲಿ ಒಡ್ಡೋಲಗದ ಆಮಂತ್ರಣ


Team Udayavani, Oct 24, 2021, 2:30 PM IST

15folk

ಮುದ್ದೇಬಿಹಾಳ: ತಾಲೂಕಿನ ಹಾಲುಮತ ಮೂಲ ಗುರುಪೀಠ ಇರುವ ಸುಕ್ಷೇತ್ರ ಸರೂರ ಗ್ರಾಮದಲ್ಲಿ ಅ. 24ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಅಖೀಲ ಭಾರತೀಯ ಪಶುಪಾಲಕ ಕ್ಷತ್ರೀಯರ ಟ್ರಸ್ಟ್‌ ಮತ್ತು ಕುರುಬರ ಚಿಂತನ ಮಂಥನ ಚಾವಡಿ ಆಶ್ರಯದಲ್ಲಿ ನಡೆಯಲಿರುವ ಒಡ್ಡೋಲಗ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆ ಹಂಚುವ ವಿನೂತನ ಪ್ರಯತ್ನ ಗದಗ ಮತ್ತು ವಿಜಯಪುರ ಜಿಲ್ಲೆಗಳ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗತೊಡಗಿದೆ.

1996ರಲ್ಲಿ ಡಾ| ಶಿವರಾಜಕುಮಾರ ಅಭಿನಯದ ಜನುಮದ ಜೋಡಿ ಚಲನಚಿತ್ರ ಬಿಡುಗಡೆಗೊಂಡು ಭಾರೀ ಸದ್ದು ಮಾಡಿತ್ತು. ಅದರಲ್ಲಿ ಶಿವರಾಜಕುಮಾರ ಮತ್ತು ಸಂಗಡಿಗರು ನಟಿಸಿದ್ದ ಜಾನಪದ ಶೈಲಿಯ ಉಘೇ ಮಾತ್‌ ಮಲ್ಲಯ್ಯ…ಕೋಲು ಮಂಡೆ ಜಂಗಮ ದೇವ ಗುರುವೇ ಕ್ವಾರುಣ್ಯಕ್ಕೆ ದಯ ಮಾಡವ್ರೆ.. ಹಾಡು ಸಾಕಷ್ಟು ಜನಪ್ರೀಯಗೊಂಡು ಎಲ್ಲೆಡೆ ಪ್ರಚಾರದಲ್ಲಿತ್ತು.

ಅದೇ ಜಾನಪದ ಹಾಡಿನ ಶೈಲಿಯಲ್ಲಿ ಉಘೇ ಮಾತ್‌ ಮಲ್ಲಯ್ಯ…ಕೋಲು ಮಂಡೆ ಜಂಗಮ ದೇವ ಆಮಂತ್ರಣ ನೀಡಲು ಬಂದವ್ರೆ ಮಾದೇವಾ.. ಸಾಹಿತ್ಯಕ್ಕೆ ಬದಲಾಯಿಸಿ ಜಾನಪದ ವಾದ್ಯಗಳನ್ನು ಬಳಸಿಕೊಂಡು ಸುಶ್ರಾವ್ಯವಾಗಿ ಹಾಡುವ ಮೂಲಕ ಹಾಲುಮತ ಸಮಾಜದವರ ಮನೆಮನೆಗೆ ತೆರಳಿ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಬಿನ್ನವಿಸಿಕೊಳ್ಳುವ ಸನ್ನಿವೇಶದ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿರುವುದು ವಿನೂತನ ಪ್ರಯೋಗವನ್ನು ಹೊರಜಗತ್ತಿಗೆ ತಿಳಿಸಿಕೊಟ್ಟಂತಾಗಿದೆ.

ಗದಗ ಕೆಎಸ್‌ಎಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಜಾನಪದ ತಜ್ಞ ಡಾ| ಸಿದ್ದಣ್ಣ ಜಕಬಾಳ ಅವರ ತಂಡ ಈ ವಿನೂತನ ಆಮಂತ್ರಣದ ರೂವಾರಿಗಳಾಗಿದ್ದು ತಮ್ಮ ಇಬ್ಬರು ಸಹಪಾಠಿಗಳೊಂದಿಗೆ ತಾವೇ ಧ್ವನಿ ಕೊಟ್ಟು ಹಾಡಿರುವ ಮತ್ತು ಕುಟುಂಬದ ಸದಸ್ಯರಿಗೆ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಬರಬೇಕು ಎಂದು ಜಾನಪದ ಹಾಡಿನ ಶೈಲಿಯಲ್ಲೇ ಆಮಂತ್ರಿಸುವ ವಿಭಿನ್ನ ಆಲೋಚನೆ ಹರಿಬಿಟ್ಟು ಭೇಷ್‌ ಎನ್ನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

1 ಗಂಟೆ 56 ನಿಮಿಷ ಅವಧಿಯ ವಿಡಿಯೋದಲ್ಲಿ ಉಘೇ ಮಾತ್‌ ಮಲ್ಲಯ್ಯ ಎನ್ನುವ ಜಯಘೋಷದೊಂದಿಗೆ ಪ್ರಾರಂಭಗೊಳ್ಳುವ ಗಾಯನವು ಕೋಲು ಮಂಡೆ ಜಂಗಮ ದೇವ ಆಮಂತ್ರಣ ನೀಡಲು ಬಂದವ್ರೆ ಮಾದೇವಾ.. ಅಖೀಲ ಭಾರತೀಯ ಪಶುಪಾಲಕ ಕ್ಷತ್ರೀಯರ ಹುಡುಗರು ಶಿವಾ…ಕುರುಬರ ಚಿಂತನ ಮಂಥನ ಚಾವಡಿಯ ವಿಧ್ವಾಂಸರು ಶಿವಾ.. ಒಡ್ಡೋಲಗ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಅಂದಾನೆ ಮಾದೇವಾ.. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಶಿವಾ.. ಸರುರು ರೇವಣ ಸಿದ್ದೇಶ್ವರ ಮಠದ ಆವರಣ ಶಿವಾ.. ಇದೇ ತಿಂಗಳು 24 ರವಿವಾರ 11 ಗಂಟೆಗೆ ಅಂದಾನೆ ಮಾದೇವಾ.. ಸಿದ್ದಯ್ಯ ಒಡೆಯರು ಮಹಾಸ್ವಾಮಿಗಳು ಶಿವಾ.. ಸಹದೇವಯ್ಯ ಒಡೆಯರು ಮಹಾಸ್ವಾಮಿಗಳು ಶಿವಾ.. ಕಾಡಯ್ಯ ಒಡೆಯರು ಮಹಾಸ್ವಾಮಿಗಳು ಶಿವಾ.. ಈ ಸ್ವಾಮಿಗಳ ಸಾನ್ನಿಧ್ಯ ಎಂದಾನೆ ಮಾದೇವಾ.. ಆಮಂತ್ರಣ ಸ್ವೀಕರಿಸಬೇಕಂದಾನೆ ಶಿವಾ.. ಇಬ್ಬರೂ ಕೂಡಿ ಸ್ವೀಕರಿಸಬೇಕಂದಾನೆ ಶಿವಾ.. ಈ ಹುಡುಗನ್ನೂ ಸಮಾರಂಭಕ್ಕೆ ಕರ್ಕೊಂಡು ಬಾ ಅಂದಾನೆ ಮಾದೇವಾ.. ಫಲವಾಗತೈತವ್ವೋ ಶುಭವಾಗತೈತವ್ವೋ… ಮಾತ್‌ ಮಲ್ಲಯ್ಯ, ಉಘೇ ಮಾತ್‌ ಮಲ್ಲಯ್ಯ? ಎಂದು ಪ್ರಾಸಬದ್ಧವಾಗಿರುವ ಹಾಡಿನ ಮಧ್ಯೆ ಮಧ್ಯೆ ಪಲ್ಲವಿಯನ್ನು ಎರಡೆರಡು ಬಾರಿ ಉತ್ಛರಿಸಿ ಮನ ಸೆಳೆಯುವಂತೆ, ಕಿವಿಗೆ ಇಂಪು ನೀಡುವಂತೆ ಮಾಡಲಾಗಿದೆ.

ಸುಶ್ರಾವ್ಯ ಕಂಠಸಿರಿ, ವಾದ್ಯಗಳ ಮೇಳ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ. ಜಾನಪದ ಶೈಲಿಯ ಈ ವಿನೂತನ ಆಮಂತ್ರಣ ನೀಡುವಿಕೆ ಜಾನಪದ ವಲಯದಲ್ಲಿ ಹೊಸದೊಂದು ಸಂದರ್ಭ, ಸಾಂಗತ್ಯಕ್ಕೆ ನಾಂದಿ ಹಾಡಿದಂತಾಗಿದ್ದು ಮುಂದಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗಬೇಕು ಎನ್ನುವುದು ಜಾನಪದ ವಿಧ್ವಾಂಸರ ಅಪೇಕ್ಷೆಯಾಗಿದೆ.

-ಡಿ.ಬಿ. ವಡವಡಗಿ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.