ಯುವಕರಿಂದ ಕೃಷ್ಣಾ ನದಿ ತೀರ ಸ್ವಚ್ಛತಾ ಕಾರ್ಯ
Team Udayavani, Feb 15, 2022, 6:01 PM IST
ಆಲಮಟಿ: ಈ ಭಾಗದ ಆರಾಧ್ಯ ದೈವ ಯಲಗೂರ ಗ್ರಾಮದ ಯಲಗೂರೇಶ್ವರ ದೇವಸ್ಥಾನದ ಜಾತ್ರೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ದಂಡೆಯಲ್ಲಿನ ಕಲ್ಮಷವನ್ನು ತೆಗೆದು ನದಿ ತೀರ ಸ್ವಚ್ಛಗೊಳಿಸಲಾಯಿತು.
ಬಾಗಲಕೋಟೆಯ ಸಂಕಲ್ಪ ಸೇವಾ ಪ್ರತಿಷ್ಠಾನ ಹಾಗೂ ಯಲಗೂರದ ಹರಿದಾಸ ಸಾಹಿತ್ಯ ಸಂಗೀತ ವೇದಿಕೆಯ ವತಿಯಿಂದ ಸ್ವಚ್ಛತಾ ಕಾರ್ಯಹಮ್ಮಿಕೊಳ್ಳಲಾಗಿತ್ತು.
ಫೆ. 19ರಂದು ಆಂಜನೇಯ ಕಾರ್ತಿಕೋತ್ಸವ ನಡೆಯಲಿದೆ. ಯಲಗೂರೇಶ್ವರ ದೇವಸ್ಥಾನದ ಭಕ್ತರು ರಾಜ್ಯ, ಅಂತಾರಾಜ್ಯ ಸೇರಿದಂತೆ ವಿವಿಧೆಡೆ ಭಕ್ತರು ಆಗಮಿಸಿ ಕೃಷ್ಣಾ ನದಿಯಲ್ಲಿ ಮಿಂದೆದ್ದು ನದಿಯಿಂದ ದೇವಸ್ಥಾನದವರೆಗೆ ದೀಡ ನಮಸ್ಕಾರ ಹಾಕುತ್ತಾರೆ. ಭಕ್ತರ ಅನುಕೂಲಕ್ಕಾಗಿ ನದಿ ತೀರವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ನದಿ ತೀರವನ್ನು ಸ್ವತ್ಛಗೊಳಿಸಲಾಗಿದ್ದರೂ ಮತ್ತೆ ನದಿಯಲ್ಲಿ ಹರಿದು ಬಂದಿರುವ ಕಸ ಕಡ್ಡಿಗಳು, ಭಕ್ತರು ಬೀಸಾಡಿದ ಬಟ್ಟೆಗಳು ಜಮೆಯಾಗಿದ್ದವು. ನದಿ ದಡದಲ್ಲಿರುವ ಬಟ್ಟೆ ಬದಲಾಯಿಸುವ ಕೋಣೆಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ಬಣ್ಣ ಹಚ್ಚಲಾಯಿತು.
ಕೆಲವು ಕಡೆಗಳಲ್ಲಿ ಡಸ್ಟ್ ಬಿನ್ಗಳನ್ನು ಇಟ್ಟು ಜಾಗೃತಿ ಮೂಡಿಸುವ ನಾಮಫಲಕಗಳನ್ನು ಅಳವಡಿಸಲಾಯಿತು. ಕೃಷ್ಣೆಯಲ್ಲಿ ಸ್ನಾನ ಮಾಡಿ ಪಾಪವನ್ನಷ್ಟೇ ಬಿಟ್ಟು ಹೋಗಿ, ಬಟ್ಟೆಯನ್ನಲ್ಲ ಎಂಬಿತ್ಯಾದಿ ಜಾಗೃತಿಯ ನಾಮಫಲಕವನ್ನು ಅಳವಡಿಸಲಾಯಿತು. ಬಾಗಲಕೋಟೆಯ ನರಸಿಂಹ ಆಲೂರ, ಭಾಸ್ಕರ ಮನಗೂಳಿ, ಕಿರಣ ಕುಲಕರ್ಣಿ, ಶಿವಾನಂದ ಕೆಂಚಣ್ಣವರ, ಭೀಮಾಶಂಕರ ನಾಡಗೌಡ, ಸುನೀಲ ನಾಗರಾಳ, ಯಲಗೂರದ ಬದರಿನಾಥ ಚಿಮ್ಮಲಗಿ, ಗೋಪಾಲ ಗದ್ದನಕೇರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್