ಸರ್ಕಾರಿ ಯೋಜನೆ ಪ್ರತಿ ಗ್ರಾಮದ ವ್ಯಕ್ತಿಗೂ ತಲುಪಲಿ


Team Udayavani, Jan 2, 2021, 3:54 PM IST

ಸರ್ಕಾರಿ ಯೋಜನೆ ಪ್ರತಿ ಗ್ರಾಮದ ವ್ಯಕ್ತಿಗೂ ತಲುಪಲಿ

ಮುದ್ದೇಬಿಹಾಳ: ಸೋಲು ಗೆಲುವು ಶಾಶ್ವತವಲ್ಲ, ಎಲ್ಲರೂ ಒಂದೇ ಎನ್ನುವ ಭಾವ ಎಲ್ಲರಲ್ಲಿ ಬರಬೇಕು. ಚುನಾವಣೆಯಲ್ಲಿ ಭಿನ್ನವಾಗಿದ್ದರೂ ಅದು ಮುಗಿದ ಮೇಲೆ ಎಲ್ಲರೂ ಅಭಿವೃದ್ಧಿಗಾಗಿ ಒಂದಾಗಿ ಇರಬೇಕು. ನಿಮ್ಮಿಂದ ಯಾರಿಗೂ ಕೆಡುಕಾಗದಂತೆ ನಡೆದುಕೊಳ್ಳಬೇಕು ಎಂದು ಚನ್ನವೀರ ಸ್ವಾಮೀಜಿ ಗ್ರಾಪಂ ನೂತನ ಸದಸ್ಯರಿಗೆ ಸಲಹೆ ನೀಡಿದ್ದಾರೆ.

ಕುಂಟೋಜಿ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಶ್ರೀಮಠ, ಸ್ವಾಮೀಜಿ ಹಾಗೂ ಗ್ರಾಮಸ್ಥರವತಿಯಿಂದ ಏರ್ಪಡಿಸಿದ್ದ ಸ್ಥಳೀಯವಾಗಿಗ್ರಾಪಂಗೆ ಆಯ್ಕೆಗೊಂಡ ನೂತನ ಸದಸ್ಯರ ಸನ್ಮಾನಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು  ಮಾತನಾಡಿದರು. ಗ್ರಾಪಂ ನೂತನ ಚುನಾಯಿತ ಜನ ಪ್ರತಿನಿ ಧಿಗಳು ಸರ್ಕಾರದ ಯೋಜನೆಗಳನ್ನುಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡಬೇಕು. ಮಠಮಾನ್ಯಗಳ ಏಳ್ಗೆಗೆಶ್ರಮಿಸಿ. ಎಲ್ಲರೊಂದಿಗೂ ಪ್ರೀತಿ, ವಿಶ್ವಾಸದಿಂದನಡೆದುಕೊಳ್ಳಬೇಕು. ಚುನಾವಣೆ ಸಂದರ್ಭ ತಲೆದೋರಿರಬಹುದಾದ ಸಣ್ಣ ಪುಟ್ಟ ಕಹಿಘಟನೆಗಳನ್ನು ಮರೆತು ಸೌಹಾರ್ದದಿಂದ ಬದುಕು ಸಾಗಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕೊಪ್ಪಳ ಗವಿಮಠದ ಸಿದ್ಧಲಿಂಗ ದೇವರು ಮಾತನಾಡಿ, ನಿಜವಾದ ಭಾರತಹಳ್ಳಿಗಳಲ್ಲಿದೆ ಎನ್ನುವುದನ್ನು ಕುಂಟೋಜಿ ಶ್ರೀಮಠ ಸಾಧಿಸಿ ತೋರಿಸಿದೆ. ಕಾಯಕವೇ ನಮ್ಮ ನಾಯಕ ಆಗಬೇಕೇ ಹೊರತು ನಮ್ಮ ಕುರ್ಚಿ, ಹುದ್ದೆಗಳಲ್ಲ. ಜನರ ಹೃದಯದಲ್ಲಿರುವುದು ಬಹು ದೊಡ್ಡ ಕುರ್ಚಿ. ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸೇವೆಯ ಸುಯೋಗ ದೊರೆತಿದ್ದು ಮಾತ್ರವಲ್ಲದೆ ಮೊದಲನೇ ಸನ್ಮಾನ ಗುರುಗಳಿಂದಲೇ ಆರಂಭವಾಗಿರುವುದು ಶುಭದ ಸಂಕೇತ.ಊರಿನ ಎಲ್ಲ ಸಮಸ್ಯೆಗಳನ್ನು ಹೊಡೆದೋಡಿಸಿಗ್ರಾಮವನ್ನು ಸುರಾಜ್ಯ ಮಾಡಲು ಶ್ರಮಿಸಬೇಕು.ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಿಮ್ಮ ಸೇವೆ ಇತರರಿಗೆ ಗೊತ್ತಾಗದಂತೆ ಇರಬೇಕು ಎಂದರು.

ಇದೇ ವೇಳೆ ಸ್ಥಳೀಯ ಗ್ರಾಪಂಗೆ ಆಯ್ಕೆಗೊಂಡಕುಂಟೋಜಿಯ ಜನ ಪ್ರತಿನಿಧಿ ಗಳಾದ ಶಿವಬಸಪ್ಪ ಸಜ್ಜನ, ಚಂದ್ರಶೇಖರ ಒಣರೊಟ್ಟಿ, ಮಹಿಬೂಸಾನಿಡಗುಂದಿ, ಜಗದೀಶ ಲಮಾಣಿ, ಶೋಭಾಬಿರಾದಾರ, ನಂದಾ ಬಾಗೇವಾಡಿ, ಗುರುಬಾಯಿಹುಲಗಣ್ಣಿ, ಮಂಜುಳಾ ಹುಲಗಣ್ಣಿ, ಸುಮಂಗಲಾ ಬಿರಾದಾರ, ಭೀಮವ್ವ ಭಜಂತ್ರಿ ಹಾಗೂ ಸ್ಥಳೀಯಧುರೀಣ ಮಹಿಬೂಬ ದಖನಿ ಅವರನ್ನು ಚನ್ನವೀರಸ್ವಾಮೀಜಿ, ಸಿದ್ದಲಿಂಗ ದೇವರು, ಸಂಗನಗೌಡಪಾಟೀಲ ಎಲ್ಲರ ಪರವಾಗಿ ಸನ್ಮಾನಿಸಿದರು.ಪ್ರಮುಖರಾದ ಸುರೇಶ ಸಜ್ಜನ, ಲಿಂಗಪ್ಪಉಣ್ಣಿಭಾವಿ, ಸಂಗನಗೌಡ ಬಿರಾದಾರ, ಶಿವಲಿಂಗಪ್ಪ ಗಸ್ತಿಗಾರ, ತಿಪ್ಪಣ್ಣ ರಾಮೋಡಗಿ, ಸಂಗಪ್ಪ ಸಜ್ಜನ,ಮಲ್ಲನಗೌಡ ಬಿರಾದಾರ, ಶ್ರೀಶೈಲ ಸಜ್ಜನ, ಶೇಖು ಬಿಳೇಬಾವಿ, ಎಸ್‌.ಎಂ. ಪಾಟೀಲ ವಕೀಲರು,ಬಸನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಚಂದ್ರಶೇಖರ ಪಾಟೀಲ, ಯಮನಪ್ಪ ಹುಲಗಣ್ಣಿ, ಬಸವರಾಜ ಹುಲಗಣ್ಣಿ, ಗುರುಪಾದ ಹೆಬ್ಟಾಳ,

ತಿಪ್ಪಣ್ಣ ರಾಮೋಡಗಿ, ಗುರು ಅಗಸರ, ಮುತ್ತುಮದರಿ ಇದ್ದರು. ಸಿದ್ದು ಹೆಬ್ಟಾಳ ನಿರೂಪಿಸಿದರು.ಕಾರ್ಯಕ್ರಮಕ್ಕೂ ಮುನ್ನ ಎಲ್ಲರೂ ಹಿರಿಯಶ್ರೀಗಳ ಗದ್ದುಗೆಗೆ ಹಾಗೂ ಇರ್ವರೂ ಶ್ರೀಗಳಿಗೆ ನಮಿಸಿ ಶಭಾಶೀರ್ವಾದ ಪಡೆದುಕೊಂಡರು.

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.