ಮುದ್ದೇಬಿಹಾಳ : ಸಿಡಿಲು ಬಡಿದು ಆಕಳು ಸಾವು, ಕಂಗಾಲಾದ ರೈತ
Team Udayavani, Oct 2, 2022, 10:54 AM IST
ಮುದ್ದೇಬಿಹಾಳ : ಸಿಡಿಲು ಬಡಿದು ಆಕಳುವೊಂದು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಸಮೀಪದ ಕೆಸಾಪೂರ ಗ್ರಾಮದಲ್ಲಿ ನಡೆದಿದೆ.
ರೈತ ಶರಣಪ್ಪ ಜಲಕಮದಿನ್ನಿ ಎಂಬುವರಿಗೆ ಸೇರಿ ಆಕಳು ಕಳೆದ ಶನಿವಾರ ತಡರಾತ್ರಿ ಭಾರಿ ಮಳೆ, ಗಾಳಿಯೊಂದಿಗೆ ಸಿಡಿಲು ಆರಂಭವಾಗಿದೆ. ಈ ವೇಳೆಯಲ್ಲಿ ಮನೆಯ ಎದುರು ಕಟ್ಟಿರುವ ಆಕಳಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದೆ.
ಪ್ರಕೃತಿ ವಿಕೋಪ ಅಡಿಯಲ್ಲಿ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಶರಣಪ್ಪ ಮನವಿ ಮಾಡಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ : ಗಾಂಧಿ ಜಯಂತಿ; ಪೊರಕೆ ಹಿಡಿದು ಕಸ ಗುಡಿಸಿದ ಕಲಬುರಗಿ ಜಿ.ಪಂ. ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ