ಕಸಗುಡಿಸಿ ರಂಗೋಲಿ ಬಿಡಿಸಿದ ಪುರಸಭೆ ಅಧಿಕಾರಿಗಳು
Team Udayavani, May 29, 2022, 3:24 PM IST
ತಾಳಿಕೋಟೆ: ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಪುರಸಭೆ ಅಧಿಕಾರಿಗಳು ವಿನೂತನ ದಾರಿಯೊಂದನ್ನು ಕಂಡುಕೊಂಡಿದ್ದು ರಸ್ತೆ ಮೇಲೆ ಮತ್ತು ರಸ್ತೆ ಬದಿಯಲ್ಲಿ ಹಾಕಲಾದ ಕಸಗೂಡಿಸಿ ರಂಗೋಲಿ ಬಿಡಿಸುವುದರೊಂದಿಗೆ ವಿನೂತನವಾದ ಹೆಜ್ಜೆಯೊಂದನ್ನು ಇಟ್ಟಿದ್ದಾರೆ.
ಶನಿವಾರರಂದು ನೈರ್ಮಲ್ಯ ದಿನಾಚರಣೆ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರ ಸಲಹೆ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಳಗ್ಗೆ ರಾಜವಾಡೆಯ ಅಗಸಿಯ ಹತ್ತಿರ ರಸ್ತೆಯ ಮದ್ಯ ಹಾಕಲಾಗಿದ್ದ ಕಸವನ್ನು ಗೂಡಿಸಿ ಸ್ವತಃ ತಾವೇ ರಂಗೋಲಿ ಬಿಡಿಸಿ ಸ್ವತ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಇದರ ಜೊತೆಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಪುರಸಭೆಯ ಆರೋಗ್ಯ ಕಿರಿಯ ನಿರೀಕ್ಷಕ ಶಿವಾನಂದ ಜುಮನಾಳ, ಬಸ್ಸು ಖಾಜಿಬಿಳಗಿ ಅವರು, ಪಟ್ಟಣದ ಸ್ವತ್ಛತೆಗಾಗಿ ಪುರಸಭೆ ಸಿಬ್ಬಂದಿಗಳು ನಿತ್ಯ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಅದರ ಜೊತೆಗೆ ಜನರಿಗೆ ಸ್ವಚ್ಚತೆ ಬಗ್ಗೆ ತಿಳಿವಳಿಕೆ ನೀಡುವಂತಹ ಕಾರ್ಯ ಮಾಡುತ್ತ ಸಾಗಿದ್ದೇವೆ. ಆದರೂ ಕೂಡಾ ಚರಂಡಿಯಲ್ಲಿ ಕಸ ಹಾಕುವದು ರಸ್ತೆಯ ಮದ್ಯವೇ ಕಸ ಬಿಸಾಕುವುದು ಕೆಲವು ಕಡೆಗಳಲ್ಲಿ ನಿಲ್ಲುತ್ತಿಲ್ಲ. ಅಂತಹ ಸ್ಥಳಗಳನ್ನು ಆಯ್ಕೆ ಮಾಡಿ ಸ್ವಚ್ಛತೆಯ ಜೊತೆಗೆ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಜನರು ಸ್ಪಂದಿಸುವ ಇಚ್ಛೆಯಲ್ಲಿದ್ದೇವೆ. ನಗರ ಸ್ವಚ್ಛವಾಗಿದ್ದರೆ ಯಾವುದೇ ರೋಗ ರುಜುಗಳು ಬರಲ್ಲ. ಸ್ವಚ್ಛತೆಯ ಕೆಲಸ ಪುರಸಭೆಯದ್ದಾಗಿದ್ದರೂ ಕೂಡಾ ಜನರ ಸಹಕಾರವೆಂಬುದು ಬಹಳೇ ಮುಖ್ಯವಾಗಿದೆ. ಒಣ ಕಸ ಹಸಿ ಕಸ ಬೇರ್ಪಡಿಸಿ ಮನೆಯಲ್ಲಿಯೇ ಇಟ್ಟುಕೊಳ್ಳಿ. ಬೆಳಗ್ಗೆ ಮನೆ ಬಾಗಿಲಿಗೆ ಬರುವ ಕಸ ವಿಲೇವಾರಿ ವಾಹನದಲ್ಲಿ ಹಾಕಬೇಕೆಂದು ಮನವಿ ಮಾಡುವದಾಗಿ ಹೇಳಿದರು.
ಪುರಸಭೆ ಸದಸ್ಯರುಗಳಾದ ಅಣ್ಣಾಜಿ ಜಗತಾಪ, ಡಿ.ವಿ. ಪಾಟೀಲ, ಮುದಕಣ್ಣ ಬಡಿಗೇರ, ಪೌರ ಕಾರ್ಮಿಕರಾದ ಸಿದ್ದಪ್ಪ ಕೊಳ್ಳಿ, ರಾಜು ಚಿತ್ತಾಪುರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ