ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡಲು ಚಿಂತನೆ: ಸಿಎಂ ಬೊಮ್ಮಾಯಿ


Team Udayavani, Feb 4, 2023, 5:21 PM IST

Thinking of giving bus pass to rural journalists: CM Bommai

ವಿಜಯಪುರ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡಲು ಅಗತ್ಯದ ಅನುದಾನ ನೀಡುತ್ತೇನೆ. ನಿವೃತ್ತ ಪತ್ರಕರ್ತರ ಮಾಸಾಶನ ಹೆಚ್ಚಳಕ್ಕೂ ಕ್ರಮ‌ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಶನಿವಾರ ಐತಿಹಾಸಿಕ ವಿಜಯಪುರ ಮಹಾನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ರಾಜ್ಯ ಮಟ್ಟದ 37ನೇ ಸಮ್ಮೇಳನಕ್ಕೆ ಚಾಲನೆ ಮಾತನಾಡಿದ ಅವರು, ಆದರೆ ನಕಲಿ ಪತ್ರಕರ್ತರಿಗೆ ಕಡಿವಾಣ ಅಗತ್ಯ ಎಂದರು.

ಪತ್ರಕರ್ತರನ್ನು ಕಾರ್ಮಿಕರನ್ನಾಗಿ ಪರಿಗಣಿಸಿ ಕಾರ್ಮಿಕ ಇಲಾಖೆಯ ಮೂಲಕ ಸೌಲಭ್ಯ ಕಲ್ಪಿಸುವುದು ಹಾಗೂ ಜಾಹೀರಾತು ದರ ಹೆಚ್ಚಳದ ಕುರಿತು ಪತ್ರಕರ್ತರ ಸಂಘದಿಂದ ಸಲ್ಲಿಸಿರುವ ಮನವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಸ್ಥಾನ ಎಂದರೆ ನಾಡಿನ ದೊರೆಯಲ್ಲ ಜನಸೇವಕನ ಸ್ಥಾನ. ಸಿದ್ದೇಶ್ವರ ಶ್ರೀಗಳ ಆತ್ಮಸಾಕ್ಷಿಯ ನಡೆ ಅನುಸರಿಸಬೇಕಿದೆ ಎಂದರು.

ಐತಿಹಾಸಿಕ ಆಧ್ಯಾತ್ಮಿಕ ಚಿಂತನೆಯ ನೆಲದಲ್ಲಿ ನಡೆಯುತ್ತಿರುವ ಸಮ್ಮೇಳನ ಅರ್ಥಪೂರ್ಣವಾಗಲಿ. ಬಸವೇಶ್ವರ, ಸಿದ್ದೇಶ್ವರರ ಆಶಯದಂತೆ ಅವರ ಜೀವಿತದ ಮೌಲ್ಯಗಳ ತುಂಬಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜಾಪುರ ಬಿಳಿಜೋಳ ಅತ್ಯಂತ ಪೌಷ್ಟಿಕ ಶ್ರೇಷ್ಠ ಆಹಾರ ಧಾನ್ಯ. ಜೋಳದಂತೆ ಬಿಜಾಪುರ ಜನರೂ ಗಟ್ಟಿಗರು, ಕಾಯಕ ಪರಿಶ್ರಮ ಜೀವಿಗಳು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಬಣ್ಣಿಸಿದರು.

ಕೃಷ್ಣೆಯ ಹನಿ‌ ನೀರಿನ ಬಳಕೆಗೆ ಅಗತ್ಯವಾಗಿದೆ. ಕೃಷ್ಣೆಯಿಂದ ವಿಜಯಪುರ ಭಾಗದ 5 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದ್ದು, ಇಡೀ ಭಾರತಕ್ಕೆ ಅನ್ನ ಹಾಕುವ ಶಕ್ತಿಯಿದೆ. ಕೃಷ್ಣೆಗಾಗಿ ಬದುಕನ್ನೇ ತ್ಯಾಗ ಮಾಡಿದ ನೆಲದ‌ ಮುಂದಿನ ಪೀಳಿಗೆ ಬದುಕು ಉತ್ತಮವಾಗಿ ಸೃಷ್ಟಿಯಾಗಲಿ ಎಂದು ಆಶಿಸಿದರು.

ಇದನ್ನೂ ಓದಿ:ಪ್ರಮೋದ್ ಮುತಾಲಿಕ್ ಸ್ಪರ್ಧೆ ಬಗ್ಗೆ ಕೊನೆಗೂ ಮೌನ ಮುರಿದ ಸಚಿವ ಸುನಿಲ್ ಕುಮಾರ್

ಕೃಷ್ಣಾ ಸ್ಕೀಂ ಬಿ ನೆಪದಲ್ಲೇ 25 ವರ್ಷ ತಳ್ಳಿಕೊಂಡು ಬಂದರು. ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಇಲ್ಲ ಈ ಪದ್ದತಿ ನಮ್ಮಲ್ಲೇಕೆ ಎಂದು‌ನ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಆಕ್ಷೇಪಿಸಿದೆ. 9 ಉಪ ಯೋಜನೆಗಳಲ್ಲಿ 7 ಯೋಜನೆಗಳಿಗೆ ನಾನು ಚಾಲನೆ ನೀಡಿದ್ದೆ ಎಂದು ನೆನಪಿಸಿದರು.

ಪತ್ರಕರ್ತರು ಪ್ರಾದೇಶಿಕ ಮನಸ್ಥಿತಿಗೆ ಬದಲಾಗಿ ಅಖಂಡ ಕರ್ನಾಟಕದ ದೃಷ್ಟಿಕೋನದ ಪತ್ರಕರ್ತರಾಗಿ ರೂಪುಗೊಳ್ಳುವಂತೆ ಸಲಹೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಪತ್ರಕರ್ತರು ರಾಜಕಾರಣಿ ಅವಿನಾಭಾವ ಸಂಬಂಧ. ರಾಜಕಾರಣಿ ಇಲ್ಲದೇ ಹೋಗಿದ್ದರೆ ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೆಗಳನ್ನು ಓದುವರಾರು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕಾರ್ಯನಿರತೆಯಲ್ಲಿ ನಾವು, ನೀವೆಲ್ಲ ಆರೋಗ್ಯಕರ ಸಂಬಂದದಲ್ಲಿ ಮುಂದುವರೆದು, ರಾಜ್ಯದ ಹಿತದೃಷ್ಟಿಯಿಂದ ಉತ್ತಮ ಕೆಲಸ ಆಗಬೇಕಿದೆ. ಪತ್ರಕರ್ತರು ಕೂಡ ವಿಶ್ವಾಸಾರ್ಹತೆ ಹಾಗೂ ಸ್ವೀಕಾರಾರ್ಹತೆ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನಿಡಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪತ್ರಕರ್ತರ ಸಮ್ಮೇಳನದ ಸ್ಮರಣಗ್ರಂಥ ಮಾಧ್ಯಮ ಮಂಥನ ಲೋಕಾರ್ಪಣೆ ಮಾಡಿದರು.

ಜ್ಞಾನ ಯೋಗಾಶ್ರಮದ ಅಧ್ಯಕ್ಷ ಗುರು ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್.ಪಾಟೀಲ ನಡಹಳ್ಳಿ, ರಮೇಶ ಭೂಸನೂರು, ಬೀಜ ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಸೋಮನಗೌಡ ಪಾಟೀಲ, ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶಟ್ಟಿ, ಕಾನಿಪ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಇತರರು ವೇದಿಕೆ ಮೇಲಿದ್ದರು.

ಟಾಪ್ ನ್ಯೂಸ್

ಅಂದು ಟೀ ಮಾರಾಟಗಾರ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಬಗ್ಗೆ ಗೊತ್ತಾ?

ಅಂದು ಟೀ ಮಾರಾಟಗಾರ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಬಗ್ಗೆ ಗೊತ್ತಾ?

1-sfsdf

ಸಿದ್ದರಾಮಯ್ಯ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲಿ: ಮಾಜಿ ಸಚಿವ ದಿವಾಕರ ಬಾಬು

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ: ಅಮಿತ್ ಶಾ

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ ಮೋದಿ ಕೈ ಬಲಪಡಿಸಿ: ಅಮಿತ್ ಶಾ

1-wqe-ewqe

ಪ್ರಧಾನಿ ಮೋದಿ ಭೇಟಿಗೂ ಮುನ್ನ ಅಜಯ್ ಬಂಗಾ ಅವರಿಗೆ ಕೋವಿಡ್ ಪಾಸಿಟಿವ್

ವರುಣಾ ಸೇರಿ ಪ್ರಮುಖ ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆಯಾಗಿದೆ: ಶಾ ಭೇಟಿ ಬಗ್ಗೆ ವಿಜಯೇಂದ್ರ

ವರುಣಾ ಸೇರಿ ಪ್ರಮುಖ ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆಯಾಗಿದೆ: ಶಾ ಭೇಟಿ ಬಗ್ಗೆ ವಿಜಯೇಂದ್ರ

1-sfdsfdsfsdf

ದೆಹಲಿಯಲ್ಲಿ ಪ್ರತಿಪಕ್ಷ ಸಂಸದರ ಪ್ರತಿಭಟನಾ ಮೆರವಣಿಗೆಗೆ ಪೊಲೀಸರ ತಡೆ ; ವಿಡಿಯೋ

ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಮ್ ಮಣಿ ವಿಧಿವಶ; ಗಣ್ಯರ ಸಂತಾಪ

ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಮ್ ಮಣಿ ವಿಧಿವಶ; ಗಣ್ಯರ ಸಂತಾಪ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ: ಅಮಿತ್ ಶಾ

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ ಮೋದಿ ಕೈ ಬಲಪಡಿಸಿ: ಅಮಿತ್ ಶಾ

ಎಪ್ರಿಲ್‌ ಮೊದಲ ವಾರ ಬಿಜೆಪಿ ಪಟ್ಟಿ: ಬಿಡುಗಡೆ ಭಾಗ್ಯ ಕಾಣದ ಕಾಂಗ್ರೆಸ್‌ ಪಟ್ಟಿ

ಎಪ್ರಿಲ್‌ ಮೊದಲ ವಾರ ಬಿಜೆಪಿ ಪಟ್ಟಿ: ಬಿಡುಗಡೆ ಭಾಗ್ಯ ಕಾಣದ ಕಾಂಗ್ರೆಸ್‌ ಪಟ್ಟಿ

ಅಂತಿಮವಾಗದ ಸಿದ್ದರಾಮಯ್ಯ ಕ್ಷೇತ್ರ: ಇಂದು ಬಾದಾಮಿಯಲ್ಲಿ 2. ಕಿ. ಮೀ. ರೋಡ್‌ ಶೋ

ಅಂತಿಮವಾಗದ ಸಿದ್ದರಾಮಯ್ಯ ಕ್ಷೇತ್ರ: ಇಂದು ಬಾದಾಮಿಯಲ್ಲಿ 2. ಕಿ. ಮೀ. ರೋಡ್‌ ಶೋ

ಶ್ರವಣ ಬೆಳಗೊಳದ ಕೀರ್ತಿ ಮುಗಿಲೆತ್ತರಕ್ಕೇರಿಸಿದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣ ಬೆಳಗೊಳದ ಕೀರ್ತಿ ಮುಗಿಲೆತ್ತರಕ್ಕೇರಿಸಿದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ರಾಜಧಾನಿಯಲ್ಲಿ ಇಂದು ಶಾ, ನಾಳೆ ಪ್ರಧಾನಿ ಮೋದಿ

ರಾಜಧಾನಿಯಲ್ಲಿ ಇಂದು ಶಾ, ನಾಳೆ ಪ್ರಧಾನಿ ಮೋದಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಅಂದು ಟೀ ಮಾರಾಟಗಾರ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಬಗ್ಗೆ ಗೊತ್ತಾ?

ಅಂದು ಟೀ ಮಾರಾಟಗಾರ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಬಗ್ಗೆ ಗೊತ್ತಾ?

Prajwal devraj’s veeram movie trailer

‘ವೀರಂ’ ಟ್ರೇಲರ್‌ನಲ್ಲಿ ಪ್ರಜ್ವಲ್‌ ದೇವರಾಜ್ ಅಬ್ಬರ

1-wewqewqe

ಬಿಜೆಪಿ ಮುಖಂಡನಿಗೆ ಸೇರಿದ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಸಾಮಗ್ರಿಗಳ ವಶ

1-sfsdf

ಸಿದ್ದರಾಮಯ್ಯ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲಿ: ಮಾಜಿ ಸಚಿವ ದಿವಾಕರ ಬಾಬು

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ: ಅಮಿತ್ ಶಾ

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ ಮೋದಿ ಕೈ ಬಲಪಡಿಸಿ: ಅಮಿತ್ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.