ಈ ದೇಶ ಹಾಳಾಗಿದ್ದು ಜವಾಹರ್ ಲಾಲ್ ನೆಹರು ಅವರಿಂದಲೇ : ಯತ್ನಾಳ್
ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ
Team Udayavani, May 27, 2022, 9:00 PM IST
ದೋಟಿಹಾಳ: ಪಂಡಿತ್ ಜವಾಹರ್ ಲಾಲ್ ನೆಹರು ಅವರಿಂದಲೇ ಈ ದೇಶ ವಿಭಜನೆಯಾಯಿತು ಭಾರತ- ಪಾಕಿಸ್ತಾನವಾಗಿ ವಿಭಜನೆ ಗೊಳ್ಳಲು ಮುಖ್ಯ ಕಾರಣ ಜವಾಹರ್ ಲಾಲ್ ನೆಹರು. ಮಹಾತ್ಮ ಗಾಂಧಿಯವರು ನೆಹರು ಅವರ ಸಲುವಾಗಿಯೇ ಈ ದೇಶವನ್ನು ವಿಭಜನೆ ಮಾಡಿದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿ ಬಳೂಟಗಿ ಗ್ರಾಮಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಸಿದ್ದರಾಮಯ್ಯ ಅವರು ಇತ್ತೀಚಿಗೆ ಆರ್ಎಸ್ಎಸ್, ಸಂಘ ಪರಿವಾರವನ್ನೇ ಟೀಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯನವರು ಹತಾಶೆ ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಭವಿಷ್ಯ ಇಲ್ಲವೆಂದು ತಿಳಿದು ಮಾತನಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ತಳ ಮಟ್ಟಿಗೆ ಕುಸಿದು ಹೋಗುತ್ತಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಆ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಲು ಯಾವುದೇ ಪ್ರಾದೇಶಿಕ ಪಕ್ಷವಿಲ್ಲ. ಅವರಿಗೆ ಬಿಜೆಪಿ ಬರಲು ಮನಸ್ಸಿಲ್ಲ ಹೀಗಾಗಿ ಅವರಿಗೆ ದಾರಿ ಕಾಣದಂತಾಗಿದೆ ಎಂದರು.
ಅದರೆ ಗಾಂಧೀಜಿ ಮತ್ತು ಡಾ| ಬಿ.ಆರ್ ಅಂಬೇಡ್ಕರ್ ವಿಭಜನೆ ಮಾಡುವ ಮನಸ್ಸಿರಲಿಲ್ಲ. ಪಂಡಿತ್ ಜವಾಲಾಲ್ ನೆಹರು ಅವರೆ ಒಂದು ದೊಡ್ಡ ಶಾಪ.ಕಾಶ್ಮೀರದಲ್ಲಿ 370 ಕಲಂ ಜಾರಿಗೆ ತಂದರು. ಡಾ| ಬಿ.ಆರ್ ಅಂಬೇಡ್ಕರ್ ಅವರು ಒಂದು ವೇಳೆ ಈ ದೇಶವನ್ನು ವಿಭಜನೆ ಮಾಡುವ ಮೊದಲು ಅಲ್ಲಿರುವ ಹಿಂದುಗಳನ್ನು ಇಲ್ಲಿಗೆ ಕಳಿಸಿ. ಇಲ್ಲಿರುವ ಮುಸ್ಲಿಮರನ್ನು ಅಲ್ಲಿಗೆ ಕಳಿಸಿ ಎಂದು ಕಿವಿಮಾತು ಹೇಳಿದ್ದರು. ಆದರೆ ಅದನ್ನು ನೆಹರು ಮಾಡಲಿಲ್ಲ ಎಂದರು.
ಒಂದು ವೇಳೆ ದಿನ ಡಾ. ಬಿ.ಆರ್ ಅಂಬೇಡ್ಕರ್ ಅವರು ದೇಶದ ಪ್ರಧಾನ ಮಂತ್ರಿಯಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ ಮತ್ತು ಕಾಶ್ಮೀರದಲ್ಲಿ 370 ಕಲಂ ಜಾರಿಗೆ ಬರುತ್ತಿಲ್ಲ. ಅಂದು ನೆಹರು ಅವರು ಮಾಡಿದ ತಪ್ಪುಗಳನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿವರು ತಿದ್ದುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೇ ಇಲ್ಲ ಎಂದರು.
ಈ ದೇಶದಲ್ಲಿರುವ ಮುಸ್ಲಿಮರು ಇಲ್ಲಿಯವರೇ. ಮೊಘಲರು ಮತ್ತು ಟಿಪ್ಪು ಸುಲ್ತಾನ್ ಅವರ ಆಳ್ವಿಕೆಯಲ್ಲಿ ಮತಾಂತರ ಹೊಂದಿದವರು. ಅವರೇನು ಅಪಘಾನಿಸ್ತಾನ ಅಥವಾ ಸೌದಿ ಅರಬಿದಿಂದ ಬಂದವರಲ್ಲ, ಆ ದಿನಗಳಲ್ಲಿ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆದ ಕಾರಣ ಕೆಲವರು ಮುಸಲ್ಮಾನರಾಗಿ ಮತಾಂತರ ಗೊಂಡಿದ್ದಾರೆ. ಅವರು ಇಲ್ಲಿಯ ಮೂಲವಾಸಿಗರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು