ಕೂಲಿ ಕಾರ್ಮಿಕನ ಮಗ UPSC ಪಾಸ್ : ಸರೂರು ತಾಂಡಾದ ಯಲಗೂರೇಶ ಸಾಧನೆ

ಬಸವನಾಡಿಗೆ ಕೀರ್ತಿ ತಂದ ಮತ್ತೊಬ್ಬ ಪ್ರತಿಭೆ

Team Udayavani, May 23, 2023, 7:00 PM IST

ಕೂಲಿ ಕಾರ್ಮಿಕನ ಮಗ UPSC ಪಾಸ್ : ಸರೂರು ತಾಂಡಾದ ಯಲಗೂರೇಶ ಸಾಧನೆ
ವಿಜಯಪುರ : ತುಂಡು ಜಮೀನಿಲ್ಲದೆಯೂ ಹೆತ್ತವರು ಕೂಲಿ ಮಾಡುತ್ತ ಓದಿಸಿದ್ದರು. ತರಬೇತಿ ಹಂತದಲ್ಲಿ ಪೊಲೀಸ್ ಉದ್ಯೋಗಕ್ಕೆ ಸೇರಿದ್ದ ಅಣ್ಣ ನೀಡಿದ ಆರ್ಥಿಕ ನೆರವು ಇದೀಗ ಈ ಯುವಕನನ್ನು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ಮಾಡಿದೆ.
ಇದು ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸಿರುವ ಫಲಿತಾಂಶದಲ್ಲಿ 890 ನೇ ರ‍್ಯಾಂಕ್‌ ಪಡೆದಿರುವ ಯಲಗೂರೇಶ ನಾಯಕ ಎಂಬ ಯುವಕನೇ ಜಿಲ್ಲೆಗೆ ಕೀರ್ತಿ ತಂದಿರುವ ಸಾಧಕ. ಮುದ್ದೇಬಿಹಾಳ ತಾಲೂಕ ಸರೂರು ತಾಂಡಾದ ಅರ್ಜುನ ಹಾಗೂ ಉಮಾಬಾಯಿ ಅವರ ಮಗನಾದ ಯಲಗೂರೇಶ ಬಿ.ಕಾಂ. ಪದವೀಧರ. 1-5 ನೇ ತರಗತಿ ವರೆಗೆ ಹುಟ್ಟೂರು ಸರೂರು ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿ, ಬಳಿಕ 6-10ನೇ ತರಗತಿ ವರೆಗೆ ಮುದ್ದೇಬಿಹಾಳ ಪಟ್ಟಣದಲ್ಲಿ ಕನಕದಾಸ ಶಾಲೆಯಲ್ಲಿ ಓದಿದ್ದ.
ಬಳಿಕ ಪಿಯುಸಿ ಹಂತದಿಂದ ಪದವಿ ವರೆಗೆ ಎಂಜಿವಿಸಿ ಕಾಲೇಜಿನಲ್ಲಿ ಓದಿದ್ದು, ಬಿ.ಕಾಂ. ಪದವಿ ಮುಗಿಯುತ್ತಲೇ ಕೇಂದ್ರ ಲೋಕಸೇವಾ ಆಯೊಗದ ಪರೀಕ್ಷೆ ಎದುರಿಸಬೇಕು ಎಂಬ ಮಹದಾಸೆ ಇರಿಸಿಕೊಂಡಿದ್ದ. ಹೆತ್ತವರ ಬಡತನದಿಂದಾಗಿ ದೂರದ ಬೆಂಗಳೂರು, ಹೈದ್ರಾಬಾದ್, ದೆಹಲಿಯಂತ ಮಹಾನಗರಗಳಿಗೆ ಹೋಗಿ, ಯುಪಿಎಸ್‍ಸಿ ಪರೀಕ್ಷೆಗೆ ತರಬೇತಿ ಪಡೆಯುವ ಆಸೆ ಇನ್ನೇನು ಅಸಾಧ್ಯ ಎನಿಸಿತ್ತು.
ಈ ಹಂತದಲ್ಲಿ ಅಣ್ಣ ಸಚಿನ್ ಪೊಲೀಸ್ ಇಲಾಖೆಯಲ್ಲಿ ಸೇವೆವೆ ಸೇರಿದ್ದು, ದೆಹಲಿಗೆ ಹೋಗಿ ತರಬೇತಿ ಪಡೆಯುವಲ್ಲಿ ಆರ್ಥಿಕ ನೆರವು ನೀಡುವಲ್ಲಿ ಸಹಕಾರಿ ಆಯ್ತು. ಸತತ ಓದು, ಪರಿಶ್ರಮದಿಂದ ನಾಲ್ಕನೇ ಪ್ರಯತ್ನದಲ್ಲಿ ಯಲಗೂರೇಶ ಕೊನೆಗೂ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.
ಕುಟುಂಬದ ಹಸಿವು, ಗ್ರಾಮೀಣ ಜನರ ಅದರಲ್ಲೂ ತಾಂಡಾದಲ್ಲಿರುವ ಬಡತನದಂಥ ಸ್ಥಿತಿಗಳು ನನ್ನ ಸಾಧನೆಗೆ ನಿಜಕ್ಕೂ ಕಿಚ್ಚುಹೊತ್ತಿಸಿದ್ದವು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಸಾಧಿಸುವುದಕ್ಕಾಗಿ ಬಡತನದ ನೆಪ ಹೇಳಕೂಡದೆಂದುಕೊಂಡು, ಸಾಧನೆಗೆ ಅಣಿಯಾಗಿದ್ದ ಯಲಗೂರೇಶ.
ಕುಟುಂಬದ ಬಡತನದಲ್ಲೇ ಒಬ್ಬ ಉತ್ತಮ ಶಿಕ್ಷಣ ಪಡೆದು ಶಿಕ್ಷಕಿಯಾಗಿದ್ದು, ಅಣ್ಣ ಸಚಿನ್ ಪೊಲೀಸ್ ಇಲಾಖೆಗೆ ಸೇರಿ ಮೈಸೂರಿನಲ್ಲಿ ಸೇವೆಯಲ್ಲಿದ್ದಾನೆ. ಹೀಗಿರುವಾಗ ನಾನೇನೆ ಸಾಧನೆ ಮಾಡಬಾರದು ಎಂಬ ಛಲದೊಂದಿಗೆ ಯುಪಿಎಸ್‍ಸಿ ಪರೀಕ್ಷೆ ಕಟ್ಟುತ್ತಲೇ ಬಂದೆ. ಸತತ ಸೋಲಿನ ಬಳಿಕ ನಾಲ್ಕನೇ ಪ್ರಯತ್ನದಲ್ಲಿ ನಾನು ಪಾಸಾಸಾಗಿದ್ದೇನೆ ಎನ್ನುತ್ತಾನೆ ಯಲಗೂರೇಶ ನಾಯಕ.
ಅಂತಿಮವಾಗಿ ಕಳೆದ ವರ್ಷದ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, 890 ನೇ ರ‍್ಯಾಂಕ್‌ ಪಡೆದಿದ್ದರೂ ಗುಡಿಸಲಿನ ಬಡನತ ಆತನನ್ನು ಭಾರತೀಯ ಆಡಳಿತ ಸೇವೆಗೆ ಸೇರುವ ದರ್ಜೆಯಲ್ಲಿ ಪಾಸಾಗುವ ಛಲವನ್ನು ಹುಟ್ಟುಹಾಕಿದೆ. ಹೀಗಾಗಿ ಇದೀಗ ಮತ್ತೊಮ್ಮೆ ಪರೀಕ್ಷೆ ಎದುರಿಸುವುದಾಗಿ ಹೇಳುತ್ತಾನೆ ಯಲಗೂರೇಶ.
ನನ್ನ ಹೆತ್ತವರು ಪಟ್ಟ ಪಾಡು, ಜಮೀನಿಲ್ಲದಿದ್ದರೂ ಕೂಲಿ ಮಾಡುತ್ತಲೇ ನಮ್ಮ ಬದುಕು ರೂಪಿಸಲು ಹೆಣಗಿದ ಪರಿ ನನ್ನಲ್ಲಿ ಉನ್ನತ ಅಧಿಕಾರಿಯಾಗಲು ಪ್ರೇರಣೆ ನೀಡಿದೆ. ತರಬೇತಿ ಪಡೆಯಲು ನೆರವಾಗಿದ್ದು ಪೊಲೀಸ್ ಇಲಾಖೆಯಲ್ಲಿರುವ ಅಣ್ಣ ಸಚಿನ್. ಎಲ್ಲ ಹಂತದಲ್ಲೂ ಶಿಕ್ಷಕರ ಮಾರ್ಗದರ್ಶದಿಂದ ಇದೀಗ ಒಂದು ಹಂತಕ್ಕೆ ಬಂದಿದ್ದೇನೆ. ಫಲಿತಾಂಶ ತೃಪ್ತಿ ತಂದಿಲ್ಲ, ಮತ್ತೊಮ್ಮೆ ಪರೀಕ್ಷೆ ಎದುರಿಸುತ್ತೇನೆ.
– ಯಲಗೂರೇಶ ನಾಯಕ, ಯುಪಿಎಸ್‍ಸಿ ಅಭ್ಯರ್ಥಿ ಸರೂರು ತಾಂಡಾ ಮುದ್ದೇಬಿಹಾಳ
– ಜಿ.ಎಸ್.ಕಮತರ

ಟಾಪ್ ನ್ಯೂಸ್

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

1-sasadas

Karwar; ರಾ.ಹೆ.66 ರ ಟನಲ್ ನಲ್ಲಿ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ದಿನವಿಡೀ ಪ್ರತಿಭಟನೆ

1-asdasdas

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

upendra

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?

1-sadasd

World Cup; ಲೆಗ್ ಸ್ಪಿನ್ನರ್ ಚಾಹಲ್ ರನ್ನು ಕಡೆಗಣಿಸಿರುವುದು ತಪ್ಪು : ಯುವರಾಜ್ ಸಿಂಗ್

Mangaluru ಪ್ರತಿ ಟನ್ ಗೆ 150 ರೂ. ಬಾಡಿಗೆ ಏರಿಕೆ ಭರವಸೆ: ಮುಷ್ಕರ ಹಿಂತೆಗೆದ ಲಾರಿ ಯೂನಿಯನ್

Mangaluru ಪ್ರತಿ ಟನ್ ಗೆ 150 ರೂ. ಬಾಡಿಗೆ ಏರಿಕೆ ಭರವಸೆ: ಮುಷ್ಕರ ಹಿಂತೆಗೆದ ಲಾರಿ ಯೂನಿಯನ್

ICC World Cup 2023; ಎಲ್ಲಾ ಹತ್ತು ತಂಡಗಳ ಆಟಗಾರರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ICC World Cup 2023; ಎಲ್ಲಾ ಹತ್ತು ತಂಡಗಳ ಆಟಗಾರರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

Cauvery issue; Vatal Nagaraj calls for KRS siege

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ‌ ಜಿಲ್ಲೆಗೆ ಯೆಲ್ಲೊ ಅಲರ್ಟ್; ‌ಭಾರಿ ಮಳೆ ಸಾಧ್ಯತೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ‌ ಜಿಲ್ಲೆಗೆ ಯೆಲ್ಲೊ ಅಲರ್ಟ್; ‌ಭಾರಿ ಮಳೆ ಸಾಧ್ಯತೆ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ‌ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

Sirsi: ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ‌ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

1-sasadas

Karwar; ರಾ.ಹೆ.66 ರ ಟನಲ್ ನಲ್ಲಿ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ದಿನವಿಡೀ ಪ್ರತಿಭಟನೆ

1-asdasdas

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

upendra

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?

Katapadi: ಕೊರಗಜ್ಜನಿಗೆ ಲಾರಿ, ಟೆಂಪೋ ಮಾಲಕರ ಮೊರೆ

Katapadi: ಕೊರಗಜ್ಜನಿಗೆ ಲಾರಿ, ಟೆಂಪೋ ಮಾಲಕರ ಮೊರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.