

Team Udayavani, Jul 16, 2024, 9:32 PM IST
ವಿಜಯಪುರ: ಮೊಹರಮ್ ಹಬ್ಬದ ಸಂದರ್ಭ ಆಟಿಕೆ ಸಾಮಗ್ರಿ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯ ತಳ್ಳುವ ಗಾಡಿಗೆ ವಿದ್ಯುತ್ ಸ್ಪರ್ಶಗೊಂಡು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಮೊಹಮ್ಮದ್ ಇನಾಂದಾರ (40 ವ) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ವಿಜಯಪುರ ನಗರದ ಮೆಹತರ್ ಮಹಲ್ ಬಳಿ ತಳ್ಳುವ ಗಾಡಿಗೆ ಕೆಳ ಹಂತದಲ್ಲಿದ್ದ ವಿದ್ಯುತ್ ಪರಿವರ್ತಕ (ಟಿಸಿ) ತಗುಲಿ ಈ ವಿದ್ಯುತ್ ಅವಘಡ ನಡೆದಿದೆ.
ಮೆಹತರ ಮಹಲ್ ಪರಿಸರದಲ್ಲಿ ಮೊಹರಮ್ ಹಬ್ಬದ ಮೆರವಣಿಗೆ ಮುಂಭಾಗದಲ್ಲಿ ಕಬ್ಬಿಣದ ತಳ್ಳುವ ಗಾಡಿಯಲ್ಲಿ ಮೊಹಮದ್ ವ್ಯಾಪಾರದಲ್ಲಿ ತೊಡಗಿದ್ದರು.
ಈ ಹಂತದಲ್ಲಿ ಇದೇ ಮಾರ್ಗದಲ್ಲಿ ಬಂದ ಕಾರಿಗೆ ದಾತಿ ಬಿಡುವಾಗ ಗಾಡಿಯನ್ನು ಪಕ್ಕಕ್ಕೆ ಕೊಂಡೊಯ್ಯುವಾಗ ಕೆಳಹಂತದಲ್ಲಿದ್ದ ಪರಿವರ್ತಕ ತಗುಲಿ ವಿದ್ಯುತ್ ಅವಘಡವಾಗಿ ಸಾವು ಸಂಭವಿಸಿದೆ.
ಸುದ್ದಿ ತಿಳಿಯುತ್ತಲೇ ಗೋಲಗುಂಬಜ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
Ad
You seem to have an Ad Blocker on.
To continue reading, please turn it off or whitelist Udayavani.