ಕಳಪೆ ರಸ್ತೆ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ
Team Udayavani, Feb 1, 2022, 4:09 PM IST
ಚಡಚಣ: ಚಡಚಣದಿಂದ ಉಮರಜ ಗ್ರಾಮದವರೆಗಿನ ಸುಮಾರು 17 ಕಿ.ಮೀ. ರಸ್ತೆ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ನಿವರಿ ಗ್ರಾಮದ ಮುಖಂಡ ಹಾಗೂ ನ್ಯಾಯವಾದಿ ಜಗದೀಶ ಕಾಂಬಳೆ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಚಡಚಣದಿಂದ ನಿವರಗಿ, ಗೋವಿಂದಪುರ ಉಮರಜ ಗ್ರಾಮಕ್ಕೆ ಹೋಗುವ ಸುಮರು 17 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟು ವರ್ಷಗಳೆ ಕಳೆಯುತ್ತ ಬಂದಿದೆ. ಅದರಲ್ಲಿ 2021-22ನೇ ಸಾಲಿನ ಲೆಕ್ಕ ಶಿರ್ಷಿಕೆ ಅಡಿ ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ನೆಪದಲ್ಲಿ ರಸ್ತೆ ಪ್ಯಾಚ್ ವರ್ಕ್ ಎಂಬ ಹೆಸರಿನಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ. ಇದನ್ನು ಕಂಡು ಕಾಣದಂತೆ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವರ್ತನೆ ನೋಡಿದಾಗ ಇದರಲ್ಲಿ ಅವರದೂ ಪಾಲವಿದೆ ಎಂಭ ಭಾವನೆ ವ್ಯಕ್ತವಾಗುತ್ತಿದೆ.
ಜಿಲ್ಲಾ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಕಾಮಗಾರಿ ಅವಲೋಕಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ರಸ್ತೆ ಮರು ಡಾಂಬರೀಕರಣವಾಗಬೇಕು ಎಂದ ಅವರು, ಇಲ್ಲದೇ ಹೋದಲ್ಲಿ ಹೋರಾಟ ಅನಿವಾರ್ಯ ಎಂದರು.
ಗ್ರಾಪಂ ಮಾಜಿ ಸದಸ್ಯ ಆರ್.ಎಸ್. ಕಾಂಬಳೆ, ಬಿ.ಎಂ. ಕಾಂಬಳೆ, ಪ್ರಶಾಂತ ಸರ್ಜಾ, ಎ.ವಿ. ಕಾಂಬಳೆ, ಸರ್ವೇಶ ಕಾಂಬಳೆ, ವಿ.ಡಿ. ಕಾಂಬಳೆ, ರಮೇಶ ಕಾಂಬಳೆ, ಆರ್.ಆರ್. ಕಾಂಬಳೆ, ಸಚಿನ ವಾಘೊ¾àರೆ, ಶ್ರೀಕಾಂತ ಬೋರ್ಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ