ಚಾ.ನಗರದಲ್ಲಿ ʼಬೈರಾಗಿʼ ವೀಕ್ಷಿಸಿದ ಶಿವಣ್ಣ: ಚಿತ್ರ ಪ್ರದರ್ಶನ ಯಾತ್ರೆಗೆ ಅದ್ದೂರಿ ಸ್ವಾಗತ
Team Udayavani, Jul 5, 2022, 7:31 PM IST
ಚಾಮರಾಜನಗರ: ನಗರದ ಶ್ರೀಭ್ರಮರಾಂಬ ಚಿತ್ರಮಂದಿರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳೊಂದಿಗೆ ಬೈರಾಗಿ ಚಿತ್ರ ವೀಕ್ಷಿಸಿದರು.
ನಟ ಶಿವರಾಜ್ ಕುಮಾರ್ ಹಾಗೂ ಚಿತ್ರ ಪ್ರದರ್ಶನ ಯಾತ್ರೆ ನಗರದ ಭ್ರಮರಾಂಬ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ಚಿತ್ರ ಮಂದಿರದ ಮಾಲೀಕರು, ಅಭಿಮಾನಿಗಳು ಉದ್ದನೆಯ ಸರಪಟಾಕಿ ಸಿಡಿಸಿ, ಶಿವಣ್ಣನಿಗೆ ಜೈಕಾರ ಹಾಕಿದರು.
ಶಿವರಾಜ್ ಕುಮಾರ್ ಅಭಿಮಾನಿಗಳು, ಪೇಕ್ಷಕರೊಂದಿಗೆ ಬೈರಾಗಿ ಚಿತ್ರವನ್ನು ಭ್ರಮರಾಂಭ ಚಿತ್ರದ ವಿಐಪಿ ಬಾಲ್ಕಾನಿಯಲ್ಲಿ 20 ನಿಮಿಷ ಕಾಲ ವೀಕ್ಷಿಸಿ ಖುಷಿಪಟ್ಟರು. ಜತೆಯಲ್ಲಿ ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಸಾಥ್ ನೀಡಿದರು.
ಶಿವಣ್ಣ ಆಗಮನ ಖುಷಿ ತಂದಿದೆ : ಚಿತ್ರಮಂದಿರದ ಮಾಲೀಕರಾದ ರೇವಂತ್ ದೇವರು ಮಾತನಾಡಿ, ಶಿವಣ್ಣ ಹಾಗೂ ಅವರ ಕುಟುಂಬದವರು ಕನ್ನಡ ಚಿತ್ರರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಶಿವಣ್ಣ ಅವರು ನಮ್ಮ ಕರೆಗೆ ಒಗೊಟ್ಟು ನಮ್ಮ ಚಿತ್ರಮಂದಿರಕ್ಕೆ ಬಂದಿದ್ದಾರೆ. ಈ ಚಿತ್ರ ಶತಮನೋತ್ಸವ ಆಚರಿಸಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಚಿತ್ರ ಮಂದಿರದ ಮಾಲೀಕರಾದ ಆರ್.ಶಿವಬಸವಸ್ವಾಮಿ, ಆರ್.ಸುಂದರೇಶ್ ಮೂರ್ತಿ, ರೇವಂತ್ ದೇವರು, ರಕ್ಷಿತ್ ಮಾಂಬಳ್ಳಿ ಹಾಗೂ ಅಭಿಮಾನಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ