ಗಣೇಶಪ್ರಸಾದ್ ಗೆಲುವು: ಮುಡಿ ಹರಕೆ ತೀರಿಸಿದ ಅಭಿಮಾನಿ
Team Udayavani, May 21, 2023, 2:56 PM IST
ಗುಂಡ್ಲುಪೇಟೆ: 2023ನೇ ವಿಧಾನ ಸಭಾ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶಪ್ರಸಾದ್ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾದರೆ ತಲೆ ಕೂದಲು ಮುಡಿ ಕೊಡುತ್ತೇನೆ ಎಂದು ಹರಕೆ ಕಟ್ಟಿಕೊಂಡಿದ್ದ ಎಚ್.ಎಂ.ಗಣೇಶಪ್ರಸಾದ್ ಆಪ್ತ ಹಾಗೂ ಅಭಿಮಾನಿ ಮಂಗಲ ಗ್ರಾಮದ ನಿವಾಸಿ ನಾಗೇಶ್ ಮಹದೇಶ್ವರ ಬೆಟ್ಟಕ್ಕೆ ತೆರಳಿ ಹರಕೆ ತೀರಿಸಿದ್ದಾರೆ.
ಗುಂಡ್ಲುಪೇಟೆ ಕ್ಷೇತ್ರದಿಂದ ಎಚ್. ಎಂ.ಗಣೇಶಪ್ರಸಾದ್ ಗೆಲ್ಲಬೇಕೆಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಒಂದು ವರ್ಷದಿಂದ ಪ್ರತಿ ಅಮಾವಾಸ್ಯೆಯಂದು ತಾಳ ಬೆಟ್ಟದಿಂದ ಕಾಲ್ನಡಿಗೆಯಲ್ಲಿ ತೆರಳಿ ಮಾದಪ್ಪನಿಗೆ ಹರಕೆ ಇಟ್ಟುಕೊಂಡು ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದರು. ಇವರ ಕೋರಿಕೆಯೋ ಅಥವಾ ಕಾಕತಾಳಿಯವೋ ಎಂಬಂತೆ ಗಣೇಶಪ್ರಸಾದ್ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
ಹರಕೆ ಕಟ್ಟಿಕೊಂಡಂತೆ ಮಂಗಲ ಗ್ರಾಮದ ನಿವಾಸಿ ನಾಗೇಶ್ ಮಹದೇಶ್ವರ ಬೆಟ್ಟಕ್ಕೆ ತೆರಳಿ ತಲೆ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ. ಗುಂಡ್ಲುಪೇಟೆ ನೂತನ ಶಾಸಕ ಎಚ್. ಎಂ.ಗಣೇಶಪ್ರಸಾದ್ ಇದನ್ನು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡಿದ್ದು, ಚುನಾವಣೆಯಲ್ಲಿ ಗೆಲ್ಲುವಂತೆ ಶಕ್ತಿಯನ್ನು ದೈವಬಲದಿಂದ ತುಂಬಿ ಹರಕೆಯನ್ನ ಮಾದಪ್ಪನಿಗೆ ತೀರಿಸುವ ಮೂಲಕ ನನಗೆ ಬಹಳ ಪ್ರೀತಿತೋರಿದ್ದೀರಿ. ಹಾಗೆಯೇ ಕ್ಷೇತ್ರದಲ್ಲಿ ನನ್ನನ್ನು ಚುನಾವಣೆಯಲ್ಲಿ ಗೆಲ್ಲುವಂತೆ ದೇವರಿಗೆ ಹರಕೆ ಹೊತ್ತು ನನಗೆ ದೈವಶಕ್ತಿಯನ್ನ ಕೊಟ್ಟ ನನ್ನ ಎಲ್ಲಾ ಹಿತೈಷಿಗಳಿಗೂ ಹಾಗೂ ಅವರ ಕುಟುಂಬ ವರ್ಗಕ್ಕೂ ಆ ಭಗವಂತ ಸದಾ ರಕ್ಷಣೆಯಾಗಿ ಕಾಪಾಡಲಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನೆಲ್ಲ ಸಿದ್ಧಿಸಲಿಯೆಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಈ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ನಿಮ್ಮ ನಂಬಿಕೆಯನ್ನ ಉಳಿಸಿಕೊಂಡು ನಿಮ್ಮೆಲ್ಲರ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ