ಕೋವಿಡ್ ನೆಗೆಟಿವ್ ವರದಿ ಇದ್ದರಷ್ಟೇ ರಾಜ್ಯಕ್ಕೆ ಆಗಮಿಸಲು ಅವಕಾಶ
Team Udayavani, Aug 23, 2021, 4:57 PM IST
ಹನೂರು: ನೆರೆಯ ತಮಿಳುನಾಡು ರಾಜ್ಯದಿಂದ ತಮಿಳುನಾಡು ಸಾರಿಗೆ ಬಸ್ಸುಗಳು ಸಂಚಾರ ಆರಂಭಿಸಿದ್ದು ಕೆಲ ವಾಹನಗಳು ಸಂಚಾರ ನಡೆಸಿದರೆ ಕೆಲ ವಾಹನಗಳನ್ನು ಚೆಕ್ಪೋಸ್ಟ್ ನಲ್ಲಿಯೇ ತಡೆದು ಹಿಂದಕ್ಕೆ ಕಳುಹಿಸಲಾಯಿತು.
ನೆರೆಯ ರಾಜ್ಯ ತಮಿಳುನಾಡಿನಿಂದ ಪಾಲಾರ್ ಮಹದೇಶ್ವರಬೆಟ್ಟ ಮಾರ್ಗವಾಗಿ ವಾಹನವೊಂದು ರಾಜ್ಯದತ್ತ ಆಗಮಿಸಿತ್ತು.ಈ ವೇಳೆ ಚೆಕ್ಪೋಸ್ಟ್ ಸಿಬ್ಬಂದಿ ಕಳೆದ 72 ಗಂಟೆಗಳ ಅವಧಿಯಲ್ಲಿ ಪಡೆದಿರುವ ಕೋವಿಡ್ ನೆಗೆಟಿವ್ ವರದಿ ಇರುವುದನ್ನು ಗಮನಿಸಿ ಪ್ರವೇಶ ನೀಡಿದರು. ಇನ್ನು ನಾಲಾರೋಡ್ ಚೆಕ್ಪೋಸ್ಟ್ ಕಡೆಯಿಂದ ಬಂದ ಬಸ್ಸಿನಲ್ಲಿದ್ದ ಚಾಲಕ, ನಿರ್ವಾಹಕನ ಬಳಿ ಕೋವಿಡ್ ನೆಗೆಟಿವ್ ವರದಿಯಿಲ್ಲದ ಹಿನ್ನೆಲೆ ಚೆಕ್ಪೋಸ್ಟ್ ನಲ್ಲಿಯೇ ತಡೆದು ವಾಪಸ್ಸು ಕಳುಹಿಸಲಾಯಿತು.
ಇದನ್ನೂ ಓದಿ:ಕ್ಯಾಸಿನೊಗಳ ಆರಂಭಕ್ಕೆ ಪರವಾನಗಿ ನೀಡಿದರೆ ಕೋವಿಡ್ ಮೂರನೇ ಅಲೆಗೆ ಆಮಂತ್ರಣ ನೀಡಿದಂತೆ
ಇನ್ನು ಮೈಸೂರು – ಕೊಳ್ಳೇಗಾಲ – ಹನೂರು- ಸತ್ತಿ ಮಾರ್ಗದ ಬಸ್ಸು ಹನೂರು ಮಾರ್ಗವಾಗಿ ತಮಿಳುನಾಡಿನತ್ತ ತೆರಳಿದೆ.