ಬೆಳೆ ಹಾನಿ ವೀಕ್ಷಿಸಿದ ಉಸ್ತುವಾರಿ ಕಾರ್ಯದರ್ಶಿ
Team Udayavani, May 29, 2022, 1:04 PM IST
ಕೊಳ್ಳೇಗಾಲ: ಇತ್ತೀಚೆಗೆ ಧಾರಾಕಾರವಾಗಿ ಸುರಿದ ಮಳೆಗೆ ಉಂಟಾದ ಬೆಳೆ ಹಾನಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಾವೇರಿ ವೀಕ್ಷಣೆ ಮಾಡಿದರು.
ತಾಲೂಕಿನಕುಂತೂರು ಟಗರಪುರ ಉತ್ತಂಬಳ್ಳಿ ಚಿಲಕವಾಡಿ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ,ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವ್ಯಾಪಿ ಮಳೆ ಸುರಿದಿದೆ.
ಅದೇ ರೀತಿ ಜಿಲ್ಲೆಯಲ್ಲೂ ಮಳೆ ಬಿದ್ದುರೈತರ ಫಸಲು ನಾಶವಾಗಿದೆ ಮತ್ತು ಸಿಡಿಲಿಗೆ ಜಾನುವಾರ ಸಾವು ಸಂಭವಿಸಿದೆ ಎಂದರು.
ತಾಲೂಕು ಮಟ್ಟದ ಅಧಿಕಾರಿಗಳು ಈಗಾಗಲೇ ಮನೆ ಹಾನಿಯನ್ನು ಮತ್ತು ಜಾನುವಾರುಗಳ ಸಾವು ಸೇರಿದಂತೆಅಂದಾಜು ವೆಚ್ಚ ತಯಾರಿಸಿ ಕೆಲವರಿಗೆಪರಿಹಾರ ನೀಡಲಾಗಿದೆ. ಉಳಿದವರಿಗೂಪರಿಹಾರ ದೊರೆಲಿದೆ ಎಂದು ತಿಳಿಸಿದರು.
ಜಿಲ್ಲೆಯ ಹನೂರು ಮತ್ತು ಯಳಂದೂರಲ್ಲೂ ಸಹ ಮಳೆ ಬಿದ್ದಿದ್ದು ಅಲ್ಲಿಯೂಸಹ ಪರಿಹಾರ ತುರ್ತಾಗಿ ನೀಡುವಂತೆಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮುಂಗಾರು ಆರಂಭ ಸಮೀಪದಲ್ಲೇ ಇದ್ದು ಕಾವೇರಿ ನದಿಯ ತೀರದ ಗ್ರಾಮಗಳಿಗೆ ಪ್ರವಾಹ ಉಂಟಾಗದಂತೆ ತಡೆಯಲು ತಾಲೂಕು ಆಡಳಿತ ಕೈಗೊಂಡಿರುವ ಕ್ರಮದ ಬಗ್ಗೆ ವೀಕ್ಷಣೆ ಮಾಡಿದ್ದು, ಪ್ರವಾಹ ಬಂ ದರೂ ಗ್ರಾಮಸ್ಥರಿಗೆ, ಜಾನುವಾರುಗಳಿಗೆ ಯಾವುದೇ ತೊಂದರೆ ಎದುರಾಗದಂತೆಕ್ರಮಕೈಗೊಳ್ಳಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್,ಜಿಪಂ ಸಿಇಒ ಗಾಯತ್ರಿ, ತಹಶೀಲ್ದಾರ್ ಮಂಜುಳಾ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್