ಪಾದಯಾತ್ರೆ ಮಾಡುತ್ತಿದ್ದ ಭಕ್ತರಿಗೆ ಲಾರಿ ಢಿಕ್ಕಿ; ಓರ್ವ ಸಾವು,ಇಬ್ಬರಿಗೆ ಗಾಯ
Team Udayavani, Oct 8, 2022, 10:35 PM IST
ಕೊಳ್ಳೇಗಾಲ: ಮೈಸೂರು ಜಿಲ್ಲೆ ನಂಜನಗೂಡ ತಾಲೂಕಿನ ಕಡಬೂರು ಗ್ರಾಮಸ್ಥರ ಗುಂಪು ದೀಪವಳಿ ಹಬ್ಬದ ಅರಕೆ ತೀರಿಸಲು ಪಾದಯಾತ್ರೆಯ ವೇಳೆ ಹಿಂಬದಿಯಿಂದ ಬಂದ ಲಾರಿ ಜನರಿಗೆ ಗುದ್ದಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಮಧುವನಹಳ್ಳಿ ರಸ್ತೆಯಲ್ಲಿ ಶನಿವಾರ ಸಂಭವಿಸಿದೆ.
ಕಡಬೂರು ಗ್ರಾಮದ ಬಸವಣ್ಣ (58) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. ಶಿವಣ್ಣ ಶೆಟ್ಟಿ (50) ಲಕ್ಷಮ್ಮ (50) ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಗಾಯಾಳುಗಳಾಗಿದ್ದಾರೆ.
ಲಾರಿ ಚಾಲಕ ಯಳಂದೂರು ಮಹೇಶ ನನ್ನು ಗ್ರಾಮಾಂತರ ಪೊಲೀಸರು ಬಂಧಿಸಿ ಲಾರಿ ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಡಿವೈ ಎಸ್ಪಿ ನಾಗರಾಜು. ಸಿಪಿಐ ಶಿವರಾಜ್ ಆರ್. ಮುದ ಹೊಳಲು ಗ್ರಾಪಂ ಪೋಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಮತ್ತು ಸಿಬಂದಿ ಪರಿಶೀಲಿಸಿದ ಬಳಿಕ ಶವವನ್ನು ಶವಗಾರಕ್ಕೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.