ಮೋದಿ ಸಾಧನೆಗಳ ಕರಪತ್ರ ವಿತರಣೆ
Team Udayavani, Jun 14, 2020, 4:56 AM IST
ಹನೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ ಹಾಗೂ ಜನಪರ ಯೋಜನೆಗಳನ್ನು ಮೆಚ್ಚಿ ಜನರು ಎರಡನೇ ಅವಧಿಗೂ ಪ್ರಚಂಡ ಬಹುಮತಗಳಿಂದ ಆಯ್ಕೆ ಮಾಡಿದ್ದಾರೆ. ಜನರ ಆಕಾಂಕ್ಷೆಗಳಿಗೆ ತಕ್ಕಂತೆ ಎರಡನೇ ಅವಧಿಯ ಮೊದಲ ವರ್ಷ ಜನಪರ ನೀಡಿದ್ದಾರೆ ಎಂದು ಬಿಜೆಪಿ ಮಹಿಳಾ ಸದಸ್ಯೆ ರಮ್ಯ ತಿಳಿಸಿದರು.
ಹನೂರು ಬಿಜೆಪಿ ಹಮ್ಮಿಕೊಂಡಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಗಳನ್ನು ಜನರಿಗೆ ತಲುಪಿ ಸಲು 11ನೇ ವಾರ್ಡ್ನಲ್ಲಿ ಹಮ್ಮಿಕೊಂಡಿದ್ದ ಕರಪತ್ರ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಜನರಿಗಾಗಿ ಕೈಗೊಂಡ ಪ್ರಮುಖ ನಿರ್ಧಾರ ಗಳ ಮಾಹಿತಿ ಒಳಗೊಂಡ ಕರ ಪತ್ರವನ್ನು ವಾರ್ಡಿನ ಪ್ರತಿ ಮನೆಗೂ ತಲುಪಿಸಲಾಗುತ್ತಿದೆ.
ಕೋವಿಡ್ 19 ಪರಿಸ್ಥಿತಿಯನ್ನು ಯಶಸ್ವಿ ಯಾಗಿ ಎದುರಿಸಿದ್ದಾರೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಸೇರಿದಂತೆ ವಿವಿಧ ಯೋಜನೆ ಹಾಗೂ ಸಾಧನೆಗಳ ಕರಪತ್ರವನ್ನು ಪ್ರತಿಯೊ ಬ್ಬರಿಗೂ ತಲುಪಿಸಲಾಗುತ್ತಿದೆ ಎಂದು ತಿಳಿಸಿ ದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾದ ಪುಟ್ಟರಾಜು, ನಂಜಪ್ಪ, ವೆಂಕಟರಾಜು ಮಾಯಣ್ಣ ಇನ್ನಿತರರಿದ್ದರು.