ಧರ್ಮಸ್ಥಳ ಸಂಸ್ಥೆಯಿಂದ ಸಸಿ ವಿತರಣೆ
Team Udayavani, Jun 23, 2021, 7:21 PM IST
ಯಳಂದೂರು: ಪ್ರಸ್ತುತ ಆಮ್ಲಜನಕದ ಮಹತ್ವಎಲ್ಲರಿಗೂ ಅರಿವಾಗಿದೆ. ಇದನ್ನು ನೀಡುವಗಿಡಮರಗಳ ರಕ್ಷಣೆ ನಮ್ಮ ಹೊಣೆಯಾಗಬೇಕು. ಈನಿಟ್ಟಿನಲ್ಲಿ ಧರ್ಮಸ್ಥಳ ಯೋಜನೆ ಯಡಿಯಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ತಿಳಿಸಿದರು.
ತಾಲೂಕಿನ ಗೌಡಹಳ್ಳಿಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ರೈತರಿಗೆ ಸಸಿ ವಿತರಿಸಿ ಮಾತನಾಡಿದಅವರು, ಸಂಸ್ಥೆ ವತಿಯಿಂದ ಪರಿಸರ ಜಾಗೃತಿಜೊತೆಗೆ ಸಸಿ ಬೆಳೆಸುವ ಕಾರ್ಯಕ್ರಮ ರೂಪಿಸಲಾಗಿದೆಎಂದರು.
ಈ ವೇಳೆ ಸೊಸೈಟಿ ಅಧ್ಯಕ್ಷ ರಾಜಶೇಖರ್,ತಾಲೂಕುಯೋಜನಾಧಿಕಾರಿಎಂ.ಎಸ್.ಪ್ರವೀಣ್,ಕೃಷಿ ಅಧಿಕಾರಿ ಪ್ರವೀಣ್, ರಾಜಣ್ಣ, ದೊರೆಸ್ವಾಮಿ,ಪ್ರಭುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.