ವಿವಿಧೆಡೆ ಡಿಕೆಶಿ ಪದಗ್ರಹಣ ವೀಕ್ಷಣೆ
Team Udayavani, Jul 3, 2020, 5:14 AM IST
ಯಳಂದೂರು: ತಾಲೂಕಿನ ವಿವಿಧೆಡೆ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಿತು. ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ನಿಗದಿತ ಪ್ರದೇಶಗಳಲ್ಲಿ ಟಿವಿ ಪರದೆಗಳ ಮೂಲಕ ಕಾರ್ಯಕ್ರಮ ನೇರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಇದರೊಂದಿಗೆ ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊಟ್ಟು, ಸಾಮಾಜಿಕ ಅಂತರ ಕಾಯ್ದುಕೊಂಡು ಚೇರ್ ಹಾಕಿ ಕಾರ್ಯಕ್ರಮದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ನಿಗದಿತ ಸ್ಥಳಗಳಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಸಂವಿಧಾನ ಪೀಠಿಕೆ ಓದಿದ ಬಳಿಕ ಎದ್ದುನಿಂತು ರಾಷ್ಟ್ರಗೀತೆ ಹಾಡಿದರು.
ಮಾಜಿ ಶಾಸಕರಾದ ಕೃಷ್ಣಮೂರ್ತಿ, ಜಯಣ್ಣ, ಬಾಲರಾಜು ಜಿಪಂ ಸದಸ್ಯರಾದ ಯೋಗೇಶ್, ಉಮಾವತಿ, ಮಾಜಿ ಸದಸ್ಯ ಕಿನಕಹಳ್ಳಿ ಸಿದ್ದರಾಜು, ತಾಪಂ ಅಧ್ಯಕ್ಷ ಸಿದ್ದರಾಜು ಸದಸ್ಯರಾದ ವೆಂಕಟೇಶ್, ನಿರಂಜನ್ ಪಪಂ ಸದಸ್ಯರಾದ ಮಹೇಶ್, ರಂಗನಾಥ, ಮಹದೇವ ನಾಯಕ, ಮಲ್ಲಯ್ಯ, ಮಂಜು, ರವಿ, ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ರಾಜಶೇಖರ್, ಪ್ರಕಾಶ್, ನಿಂಗರಾಜು, ಮಲ್ಲು, ಲಿಂಗರಾಜಮೂರ್ತಿ, ಅಸ್ಲಂಪಾಷಾ, ಮುನವರ್ಬೇಗ್, ನಾಗರಾಜು, ರಮೇಶ, ನಂಜುಂಡ, ಚಂಗುಮಣಿ, ಬೆಟ್ಟಪ್ಪ, ರಾಜು ಇತರರಿದ್ದರು.