ಜನರಿಗೆ ಕಲುಷಿತ ಕೆರೆ ನೀರೇ ಗತಿ, ರೋಗ ಬಂದರೆ ಯಾರು ಹೊಣೆ?


Team Udayavani, Apr 12, 2021, 12:23 PM IST

ಜನರಿಗೆ ಕಲುಷಿತ ಕೆರೆ ನೀರೇ ಗತಿ, ರೋಗ ಬಂದರೆ ಯಾರು ಹೊಣೆ?

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪಿಯ ಕುಂದಕೆರೆ ವಲಯಕ್ಕೆಸೇರಿದ ಕಾಡಂಚಿನ ಗ್ರಾಮವಾದ ‘ಉಪಕಾರ ಕಾಲೋನಿ’ಯಲ್ಲಿ ನೀರಿಗೆ ಹಾಹಾಕಾರಉಂಟಾಗಿದ್ದು, ಇಲ್ಲಿನ ಜನರು ಕೆರೆ-ಕಟ್ಟೆಗಳಿಂದಕಲುಷಿತ ನೀರು ತಂದು ಕುಡಿಯುವ ಪರಿಸ್ಥಿತಿತಲೆದೋರಿದೆ. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.ಆದರೆ, ಇದೇ ನೀರೇ ಜನರು ವಿಧಿಯಲ್ಲದೇ ಬಳಸುವಂತಾಗಿದೆ.

ಬಂಡೀಪುರ ವ್ಯಾಪ್ತಿಯ ಕುಂದಕೆರೆ ವಲಯಕ್ಕೆಸೇರಿದ ಕೊನೆಯ ಕಾಡಂಚಿನ ಗ್ರಾಮ ಇದಾಗಿದ್ದು,ಸುಮಾರು 70 ರಿಂದ 80 ಜೇನು ಕುರುಬರಮನೆಗಳಿವೆ. 200 ರಿಂದ 250 ಜನಸಂಖ್ಯೆಹೊಂದಿದ್ದರೂ ಇಲ್ಲಿಗೆ ನೀರು ಪೂರೈಸಲು ಒಂದುಕೊಳವೆ ಬಾವಿ ಇಲ್ಲ. ಇದರ ಬಗ್ಗೆ ಅರಿತಿದ್ದರೂಕ್ಷೇತ್ರದ ಶಾಸಕ ನಿರಂಜನಕುಮಾರ್‌,ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಒಂದೂವರೆ ಕಿ.ಮೀ. ದೂರದಿಂದ ನೀರು:ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆಉಪಕಾರ ಕಾಲೋನಿ ಒಳಪಡಲಿದ್ದು, ಇಲ್ಲಿನಜನರು ಕುಡಿಯುವ ನೀರಿಗಾಗಿ ಒಂದೂವರೆಕಿ.ಮೀ. ದೂರದಿಂದ ಹೊತ್ತು ತರಬೇಕಿದೆ.ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಮಾಡುವುದು ಅನಿವಾರ್ಯವಾಗಿದ್ದರೂ ಸಹಪಂಚಾಯಿತಿಯಲ್ಲಿ ಹಣದ ಸಮಸ್ಯೆಯಿಂದಟ್ಯಾಂಕರ್‌ ನೀರು ಸರಬರಾಜು ಆಗದೆ ಜನರು ಪರದಾಡುವಂತಾಗಿದೆ.

ಕೆರೆ-ಕಟ್ಟೆ ನೀರು ಬಳಕೆ: ಗ್ರಾಮದಲ್ಲಿ ಈಗಾಗಲೇ ಅಳವಡಿಸಿರುವ ಪೈಪ್‌ಲೈನ್‌ ನಲ್ಲಿಗಳು,ತೊಂಬೆಗಳಲ್ಲಿ ನೀರು ಬಾರದ ಕಾರಣ ಜನರು ಕಾಡು ಪ್ರಾಣಿಗಳು ಕುಡಿಯುವ ನೀರನ್ನು ಕೆರೆ-ಕಟ್ಟೆಗಳಿಂದ ತಂದು ಕುಡಿಯುವ ಪರಿಸ್ಥಿತಿನಿರ್ಮಾಣವಾಗಿದೆ. ಈ ಬಗ್ಗೆ ಪಿಡಿಒ ರವಿಚಂದ್ರಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದುಸ್ಥಳೀಯರು ಅಳಲು ತೋಡಿಕೊಂಡರು.

ಕಾಲೋನಿಗೆ ಟ್ಯಾಂಕರ್‌ ಮೂಲಕ ತರುವ ನೀರು ಸ್ಥಗಿತವಾದರೆ ಅಕ್ಕಪಕ್ಕದ ಜಮೀನುಮಾಲಿಕರಿಂದ ಕಾಡಿಬೇಡಿ ನೀರು ತರಬೇಕಿದೆ.ಹಗಲಿನ ವೇಳೆ ನೀರು ತರಲು ಹೋದರೆ ಕೂಲಿಇಲ್ಲ, ಕೂಲಿಗೆ ಹೋದರೆ ನೀರಿಲ್ಲ ಎನ್ನುವಂತಾಗಿದೆ.ಇನ್ನು ತ್ರಿಫೇಸ್‌ ಕರೆಂಟ್‌ ಮಧ್ಯರಾತ್ರಿ ಇದ್ದಾಗವಿಷ ಜಂತು, ಕಾಡುಪ್ರಾಣಿಗಳ ಭಯದಲ್ಲಿ ನಲುಗುವಂತಾಗಿದೆ. ಬೇಸಿಗೆ ಆರಂಭದ ದಿನಗಳಲ್ಲೇ ಸಮಸ್ಯೆ ಮಿತಿಮೀರಿದ್ದು, ಮುಂದಿನ ದಿನಗಳನ್ನು ಹೇಗೆಎದುರಿಸುವುದು ಎನ್ನುವ ಆತಂಕ ಇಲ್ಲಿನ ನಿವಾಸಿಗಳಲ್ಲಿ ಮನೆ ಮಾಡಿದೆ.

ಉಪಕಾರ ಕಾಲೋನಿಯಲ್ಲಿ ನೀರಿನಸಮಸ್ಯೆ ಕುರಿತು ಅಧಿಕಾರಿಗಳಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಆಗಮಿಸಿ ಮತ ಕೇಳುತ್ತಾರೆ.ನಂತರ ಇತ್ತ ಸುಳಿಯುವುದು ಇಲ್ಲ. ನಮ್ಮಸಮಸ್ಯೆ ಆಲಿಸುವುದಿಲ್ಲ. ಇಷ್ಟೆಲ್ಲ ಮಾಡುವಬದಲು ವಿಷ ಕೊಟ್ಟು ಬಿಡಿ ಎಲ್ಲರೂ ಸತ್ತು ಹೋಗುತ್ತೇವೆ. – ದೇವಮ್ಮ, ಉಪಕಾರ ಕಾಲೋನಿ ನಿವಾಸಿ

ಬಹುಗ್ರಾಮ ಕುಡಿಯುವ ನೀರುಯೋಜನೆಯಡಿ ಉಪಕಾರಕಾಲೋನಿಯಲ್ಲಿ ಸೇರಿದ್ದರೂ ಸಹ ನೀರಿನ ಸಮಸ್ಯೆ ತಲೆದೊರಿದೆ. ಈ ಬಗ್ಗೆ ಶೀಘ್ರಪರಿಶೀಲಿಸಿ, ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಸಿಲಾಗುವುದು. – ಶ್ರೀಕಂಠರಾಜೇ ಅರಸ್‌, ತಾಪಂ ಇಒ

 

– ಬಸವರಾಜು ಎಸ್‌.ಹಂಗಳೆ

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.