ರಸ್ತೆ ಮಧ್ಯೆ ನಿಂತ ಸಲಗ: ಟ್ರಾಫಿಕ್ ಜಾಮ್
Team Udayavani, Dec 13, 2020, 7:08 PM IST
ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಶನಿವಾರ ಒಂಟಿ ಸಲಗ ರಸ್ತೆ ಮಧ್ಯೆ ಪದೇ ಪದೇ ನಿಂತು ವಾಹನ ದಟ್ಟಣೆಗೆ ಕಾರಣವಾಯಿತು.
ಬೆಟ್ಟದ ನವಿಲುಕೆರೆ ಬಳಿ ದೊಡ್ಡ ದಂತವನ್ನು ಹೊಂದಿರುವ ಸಲಗವೊಂದು ಕಾಣಿಸಿಕೊಂಡಿತು. ಬೆಟ್ಟದಿಂದ ಬಾಗಲಕೋಟೆಗೆ ಹಾದು ಹೋಗುವರಾಜ್ಯ ಹೆದ್ದಾರಿ 57ರ ಮಧ್ಯೆ ಕಾಣಿಸಿಕೊಂಡಕಾಡಾನೆಯು ಇಲ್ಲಿ ನೀರನ್ನು ಕುಡಿದು ನಂತರ ರಸ್ತೆ ಮಧ್ಯೆ ನಿಂತಿತು. 20 ನಿಮಿಷಗಳ ನಂತರ ಮತ್ತೆ ಕಾಡೊಳಕ್ಕೆ ತೆರಳಿತು. ನಂತರ ಮತ್ತೆ ಇದರ ಅನತಿ ದೂರದಲ್ಲಿ ರಸ್ತೆಗೆ ಬಂದು ಬರೋಬ್ಬರಿ 30 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆಯ ಬದಿಯಲ್ಲೇ ನಿಂತು ಮೇವನ್ನು ಮೆಲ್ಲುತ್ತಿತ್ತು. ವಾಹನಗಳು ಮುಂದೆ ಬಂದರೆ ಒಂದು ಹೆಜ್ಜೆ ರಸ್ತೆಗಿಡುತ್ತಿದ್ದರಿಂದ ಸವಾರರು ತಮ್ಮ ವಾಹನವನ್ನು ದೂರದಲ್ಲೇ ನಿಲ್ಲಿಸಿದ್ದರು. ಇದರಿಂದ ಹತ್ತಾರು ಮೀಟರ್ ಉದ್ದ ವಾಹನ ದಟ್ಟಣೆ ಇತ್ತು. ನಂತರ ಕಾಡೊಳಕ್ಕೆ ಆನೆ ತೆರಳಿದ್ದರಿಂದ ವಾಹನ ಸವಾರರು ನಿರಾಳವಾಗಿ ವಾಪಸ್ಸಾದರು.
ಬೈಕ್ನಲ್ಲಿ ಬಿದ್ದ ಸವಾರರು: ಆನೆ ರಸ್ತೆಯನ್ನು ಅಡ್ಡಗಟ್ಟಿದೆ ಎಂದು ತಿಳಿದು ಗಾಬರಿಗೊಂಡ ಇಬ್ಬರು ಬೈಕ್ ಸವಾರರು ಆಯತಪ್ಪಿ ರಸ್ತೆಗೆ ಬಿದ್ದರು. ಆದರೆ, ವಾಹನದ ವೇಗ ಕಡಿಮೆ ಇದ್ದರಿಂದ ಸಣ್ಣಪುಟ್ಟ ಗಾಯಗಳಾಯಿತು. ಬಿ. ಆರ್.ಹಿಲ್ಸ್ನರಸ್ತೆಕಿರಿದಾಗಿದ್ದುಇಲ್ಲಿಮಳೆಯಿಂದ ರಸ್ತೆಯ ಇಕ್ಕೆಲಗಳಲ್ಲಿರುವ ಮಣ್ಣು ಕುಸಿದಿದ್ದು ದೊಡ್ಡದೊಡ್ಡ ಹಳ್ಳಗಳಾಗಿವೆ. ಇದರಿಂದ ವಾಹನ ಚಾಲಕರು ಅದರಲ್ಲೂ ಬೈಕ್ ಸವಾ ರರು ಎದುರಿಂದ ವಾಹನ ಬಂದರೆ ರಸ್ತೆ ಪಕ್ಕಕ್ಕೆ ಸರಿದರೆ ಜಾರಿ ಬೀಳುವ ಅಪಾಯ ಹೆಚ್ಚಾಗಿದೆ. ಈ ಬಗ್ಗೆಕೂಡಲೇ ಸಂಬಂಧಪಟ್ಟ ಲೊಕೋಪಯೋಗಿ ಹಾಗೂ ಅರಣ್ಯ ಇಲಾಖೆಯವರು ಈ ಹಳ್ಳಗಳನ್ನು ಮುಚ್ಚಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?