2 ತಾಲೂಕು, 2 ಪಂಚಾಯ್ತಿಗೆ ಹಂಚಿ ಹೋಗಿದೆ ಗಂಗವಾಡಿ

ಗ್ರಾಮದ ಒಂದು ಬಡಾವಣೆಗೆ ಮತಗಟ್ಟೆ,,ಮತ್ತೂಂದುಕಡೆ ಮತಗಟ್ಟೆಯೇ ಇಲ್ಲ ಸ್ವಗ್ರಾಮದಲ್ಲಿ ಮತಗಟ್ಟೆ ಸ್ಥಾಪನೆಗೆ ಆಗ್ರಹ

Team Udayavani, Dec 18, 2020, 7:39 PM IST

2 ತಾಲೂಕು, 2 ಪಂಚಾಯ್ತಿಗೆ ಹಂಚಿ ಹೋಗಿದೆ ಗಂಗವಾಡಿ

ಯಳಂದೂರು: ಗ್ರಾಮವೊಂದು ಎರಡು ತಾಲೂಕಿಗೆ ಹಂಚಿಕೆ, ಒಂದೇ ಗ್ರಾಮಕ್ಕೆ ಎರಡು ಗ್ರಾಮ ಪಂಚಾಯಿತಿಗಳು, ಒಂದು ಗ್ರಾಪಂ ವ್ಯಾಪ್ತಿಗೆ ಮತಗಟ್ಟೆ ಇದ್ದರೆ ಇನ್ನೊಂದಕ್ಕೆ ಮತಗಟ್ಟೆಯೇ ಇಲ್ಲ!ಚಾಮರಾಜನಗರ ಹಾಗೂ ಯಳಂದೂರು ಎರಡೂ ತಾಲೂಕುಗಳಿಗೂ ಹಂಚಿ ಹೋಗಿರುವ ಗಂಗವಾಡಿ ಗ್ರಾಮದಲ್ಲಿ ಈ ಸನ್ನಿವೇಶ ಕಂಡ ಬರುತ್ತಿದೆ.

ಗಂಗರ ಕಾಲದ ವೀರಭದ್ರೇಶ್ವರ ದೇಗುಲ ಹೊಂದಿರುವ ಐತಿಹಾಸಿಕ ಗ್ರಾಮ ಇದಾಗಿದೆ. ಆದರೆ,ಆಡಳಿತಾತ್ಮಕವಾಗಿಈ ಗ್ರಾಮವನ್ನುಇಬ್ಭಾಗಮಾಡಲಾಗಿದೆ. ಪರಿಶಿಷ್ಟ ಜಾತಿಯವರು ವಾಸ ಮಾಡುವ ಇಡೀ ಬಡಾವಣೆ ಯಳಂದೂರು ತಾಲೂಕಿಗೆ ಸೇರಿದೆ. ಇನ್ನುಳಿದ ಭಾಗವು ಚಾಮರಾಜನಗರಕ್ಕೆ ಸೇರಿದೆ.

ಮತಗಟ್ಟೆ ತಾರತಮ್ಯ: ಯಳಂದೂರು ವ್ಯಾಪ್ತಿಯಗಂಗವಾಡಿ ಗ್ರಾಮವು ಯರಗಂಬಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಒಟ್ಟು300ಕ್ಕೂ ಹೆಚ್ಚು ಮತದಾರರು ಇದ್ದಾರೆ. ಇಲ್ಲಿಗೆ ಇಬ್ಬರು ಗ್ರಾಪಂ ಸದಸ್ಯರ ಆಯ್ಕೆಗೆ ಅವಕಾಶವಿದೆ. ಆದರೆ, ಇಲ್ಲಿಗೆಯಾವ ಚುನಾವಣೆ ಬಂದರೂ ಮತಗಟ್ಟೆಯೇ ಇರುವುದಿಲ್ಲ. ಇವರು ಇಲ್ಲಿಂದ ಒಂದು ಕಿ.ಮೀ. ದೂರದ ದಾಸನಹುಂಡಿ ಗ್ರಾಮಕ್ಕೆ ನಡೆದು ಕೊಂಡೇ ಹೋಗಿ ಮತಚಲಾಯಿಸುವ ಅನಿವಾರ್ಯತೆ ಇದೆ.

ಮತ್ತೂಂದು ಭಾಗವು ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಪಂ ವ್ಯಾಪ್ತಿಗೆಒಳಪಡುತ್ತದೆ. ಇಲ್ಲಿ ಈ ಬಾರಿ ಒಟ್ಟು 4 ಗ್ರಾಪಂಅಭ್ಯರ್ಥಿಗಳು ಆಯ್ಕೆಗೆ ಅವಕಾಶವಿದೆ. ಇಲ್ಲಿನ ಶಾಲೆಯಲ್ಲೇ ಮತಗಟ್ಟೆ ಸ್ಥಾಪನೆ ಮಾಡುವುದರಿಂದ ಇಲ್ಲಿನ ಮತದಾರರು ತಮ್ಮ ಸ್ವಗ್ರಾಮದಲ್ಲೇ ಮತ ಚಲಾಯಿಸಲು ಅವಕಾಶವಿದೆ. ಈ ತಾರತಮ್ಯದ ವಿರುದ್ಧ ಹಲವು ಬಾರಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ವಹಿಸಿಲ್ಲ ಎಂದುಸ್ಥಳೀಯರಾದ ಎಸ್‌. ನಾರಾಯಣ, ಎನ್‌.ಮಹದೇವಸ್ವಾಮಿ, ಎನ್‌. ರೇವಣ್ಣ ಮತ್ತಿತರರು ದೂರಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೇವಲ 130 ಮತದಾರರಿರುವ ಕೆ. ದೇವರಹಳ್ಳಿ ಗ್ರಾಮಕ್ಕೆ ಮತಗಟ್ಟೆ ನೀಡಲಾಗಿದೆ. ಆದರೆ, ನಮ್ಮಲ್ಲಿ 300 ಮಂದಿ ಮತದಾರರು ಇದ್ದರೂ ನಮಗೆ ಮತಗಟ್ಟೆ ನೀಡದೆ ತಾರತಮ್ಯ ಮಾಡಲಾಗಿದೆ. ಕಳೆದ ಹಲವು ಚುನಾವಣೆಯಲ್ಲಿ ನಮ್ಮ ಬೇಡಿಕೆಗೆ ಪೂರಕ ಸ್ಪಂದನೆ ಸಿಗುತ್ತಿಲ್ಲ. ದೂರದ ದಾಸನಹುಂಡಿ ಗ್ರಾಮಕ್ಕೆ ಮತ ಚಲಾಯಿಸಲು ಹೋಗಬೇಕು. ಇಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ. ವೃದ್ಧರು, ಗರ್ಭಿಣಿಯರು, ಬಾಣಂತಿಯರು ನಡೆದುಕೊಂಡು ಸಾಗಲು ಕಷ್ಟ. ನಡೆಯುವದಾರಿಯಲ್ಲಿ ನಮ್ಮನ್ನು ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗಳು ಹಿಂಬಾಲಿಸಿ ಮತಯಾಚನೆ ಮಾಡುವ ಹಿಂಸೆಯನ್ನೂ ಸಹಿಸಿಕೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ ಈ ಭಾಗದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮತಗಟ್ಟೆ ಸ್ಥಾಪಿಸಬೇಕು ಎಂದು ಗ್ರಾಮದ ಮುಖಂಡರಾದ ವೀರಣ್ಣ, ನಂಜುಂಡಯ್ಯ, ನಾಗಮಾದಯ್ಯ ಸೇರಿದಂತೆ ಮತ್ತಿತರರು ಆಗ್ರಹವಾಗಿದೆ.

ಹಬ್ಬದಲ್ಲಿ ಎಲ್ಲರೂ ಒಗ್ಗಟ್ಟು,  ಮತದಾನದಲ್ಲಿ ಭ್ರಮನಿರಸನ :  ಗಂಗವಾಡಿ ಗ್ರಾಮದಲ್ಲಿ ಪ್ರತಿ ವರ್ಷವೂ ವೀರಭದ್ರೇಶ್ವರ ದೇವರ ರಥೋತ್ಸವ, ಕೊಂಡೋತ್ಸವ ಸಂಭ್ರಮದಿಂದ ಜರುಗುತ್ತದೆ. ಆ ವೇಳೆ ಇಡೀ ಗ್ರಾಮದ ಎಲ್ಲಾ ಜನಾಂಗದವರೂ ಒಟ್ಟಾಗಿ ಸೇರಿ ಈ ಸಂಭ್ರಮದಲ್ಲಿ ಭಾಗವಹಿಸುತ್ತಾರೆ. ಆದರೆ, ಮತದಾನಬಂದರೆ ನಮ್ಮನ್ನು ಒಡೆಯಲಾಗುತ್ತದೆ. ಇದಕ್ಕೆ ಗ್ರಾಮ ಎರಡು ತಾಲೂಕುಗಳಿಗೂ ಹಂಚಿ ಹೋಗಿರುವುದೇಕಾರಣವಾಗಿದೆ.

ಗಂಗವಾಡಿ ಗ್ರಾಮದ ಚುನಾವಣಾಸಮಸ್ಯೆ ನಿವಾರಣೆ ಬಗ್ಗೆ ಗ್ರಾಮಸ್ಥರು ಲಿಖೀತ ಮನವಿ ಕೊಟ್ಟಲ್ಲಿ, ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗದ ಗಮನಕ್ಕೆ ಈ ವಿಷಯ ತಂದು ಸಮಸ್ಯೆ ನಿವಾರಣೆಗೆಕ್ರ ಮ ವಹಿಸಲಾಗುವುದು. ಬಸವರಾಜ ಚಿಗರಿ, ಪ್ರಭಾರ ತಹಶೀಲ್ದಾರ್‌

 

-ಫೈರೋಜ್‌ಖಾನ್‌

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.