ಕನ್ನಡ ಸಾಹಿತ್ಯ ಮುಕುಟಮಣಿಗಳಿಗಿಲ್ಲ ಆಸರೆ


Team Udayavani, Nov 1, 2019, 3:39 PM IST

cn-tdy-1

ಯಳಂದೂರು: ರಾಜ್ಯದಲ್ಲಿ ಅತ್ಯಂತ ಚಿಕ್ಕ ತಾಲೂಕು,ಚಿಕ್ಕಪಟ್ಟಣವಾಗಿ ಗುರುತಿಸಿಕೊಂಡಿರುವ ಯಳಂದೂರು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಇಲ್ಲಿನ ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ, ಅಗರಂ ರಂಗಯ್ಯ, ನಾಟಕಕಾರ ಸಂಸ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರನ್ನು ನಾಡಿಗೆ ನೀಡಿದ ಕೀರ್ತಿ ಈತಾಲೂಕಿನದ್ದು. ಇದರೊಂದಿಗೆ ಸೋಲಿಗರ ಜಾನಪದ ಸಾಹಿತ್ಯ, ಪಟ್ಟಣದ ಬಳೇಮಂಟಪ, ದಿವಾನ್‌ ಪೂರ್ಣಯ್ಯ ವಸ್ತುಸಂಗ್ರಹಾಲಯ ಸೇರಿದಂತೆ ಅನೇಕ ದೇಗುಲಗಳು ಮಠಗಳು ಇಲ್ಲಿನ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಜೈನ ಸಂತಮುನಿಗಳ ನೆಲವೀಡಾಗಿದ್ದ ಯಳಂದೂರು ಹಾಗೂ ತಾಲೂಕಿನಲ್ಲಿ ಇವರ ಇರುವಿಕೆ ಇತ್ತೆಂ ಬುದಕ್ಕೆ ಸಾಕ್ಷಿಯಾಗುವ ಯಾವ ಕೆಲಸಗಳೂ ನಡೆದಿಲ್ಲ.

ಯಳಂದೂರಿನ ಹೆಮ್ಮೆ ಷಡಕ್ಷರ ದೇವ: ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದವರಾದ ಷಡಕ್ಷರ ದೇವ ಯಳಂದೂರಿನಲ್ಲಿ ನೆಲೆಸಿ ಶಬರಶಂಕರ ವಿಳಾಸ, ರಾಜಶೇಖರ ವಿಳಾಸ, ವೃಷಬೇಂದ್ರವಿಜಯ ದಂಥ ಮಹಾನ್‌ ಗ್ರಂಥಗಳನ್ನು ರಚಿಸಿದ್ದಾರೆ. ಪಟ್ಟ ಣದ ರಾಷ್ಟ್ರೀಯ ಹೆದ್ದಾರಿ 209 ರಲ್ಲಿರುವ ಮಹಾಕವಿ ಷಡಕ್ಷರಿ ಸ್ಮಾರಕ ಪ್ರತಿಷ್ಠಾನ ವನ್ನು ದುಗ್ಗಹಟ್ಟಿ ಪಿ.ವೀರಭದ್ರಪ್ಪ ನಿರ್ಮಿಸಿದ್ದಾರೆ. ಇಲ್ಲಿ ಮಹಾಕವಿ ಷಡಕ್ಷರ ದೇವರ ಗದ್ದುಗೆ ಇದೆ. ಇದರ ಮೂಲಕ ಪುಸ್ತಕ, ಪ್ರಶಸ್ತಿ ಗಳನ್ನು ನೀಡುತ್ತಾ ಬಂದಿದ್ದಾರೆ. ಇದನ್ನು ಹೊರತುಪಡಿಸಿ ಇಂಥ ಕವಿ ಯಾವ ಕುರು ಹುಗಳನ್ನು ತಾಲೂಕಿನಲ್ಲಿ ಕಾಣಲು ಸಾಧ್ಯವಾಗಿಲ್ಲ.

ತತ್ವ ಪದದ ಮುಪ್ಪಿನ ಷಡಕ್ಷರಿ: ತಿರುಕ ನೋರ್ವ ನೂರ ಮುಂದೆ, ಮುರುಕು ಧರ್ಮ ಶಾಲೆ ಯಲ್ಲಿ ಒರಗಿರುತ್ತಲೊಂದುಕನಸು ಕಂಡನೆಂತೆನೆ ಎಂಬ ತತ್ವ ಪದಗಳನ್ನು ತಮ್ಮ ಸುಬೋಧರ ಸಾರ ಕೃತಿಯಲ್ಲಿ ರಚಿಸಿದ ಮುಪ್ಪಿನ ಷಡಕ್ಷರಿ 16ನೇ ಶತಮಾನದಲ್ಲಿ ಜೀವಿಸಿದ್ದರು.ಇವರು ಯಳಂ ದೂರು ಪಟ್ಟಣದ ಯರಗಂಬಳ್ಳಿಯಲ್ಲಿ ಇದ್ದರು ಎಂಬು ದಕ್ಕೆ ಇನ್ನೂ ಕೂಡ ಇಲ್ಲಿ ಮಠವನ್ನು ಕಾಣಬಹುದು.

ಸ್ತ್ರೀ ಮಹತ್ವ ಸಾರಿದ ಸಂಚಿ ಹೊನ್ನಮ್ಮ:17ನೇ ಶತ ಮಾನದಲ್ಲಿ ಚಿಕ್ಕದೇವರಾಜ ಒಡೆಯರ ಆಸ್ಥಾನದಲ್ಲಿ ಸಂಚಿಯ ಊಳಿಗದಲ್ಲಿದ್ದ ಹೊನ್ನಮ್ಮ ಸಂಚಿಹೊನ್ನ ಮ್ಮಳೆಂದೇ ಖ್ಯಾತಿ ಪಡೆದಿ ದ್ದಾರೆ. ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ,ಪೆಣ್ಣಲ್ಲವೆ ಪೊರೆದವಳು, ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು ಎಂದು ಸ್ತ್ರೀ ಸಮಾನತೆ ಬಗ್ಗೆ ಅಕ್ಕಮಹಾದೇವಿಯ ನಂತರ ಧ್ವನಿ ಎತ್ತಿದ ಏಕೈಕ ನಾರಿ ಮಣಿಯಾಗಿದ್ದಾಳೆ. ಇವರೆಲ್ಲರೂ ನಡುಗನ್ನಡದಲ್ಲಿ ಕನ್ನಡ ಸಾರಸ್ವತ ಲೋಕ ವನ್ನು ಶ್ರೀಮಂತಗೊಳಿಸಿದ ಕವಿಗಳಾಗಿದ್ದಾರೆ.

ಇದರೊಂದಿಗೆಗೆ ಸಾಧ್ವಿ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದ ಅಗಂ ರಂಗಯ್ಯ ತಾಲೂಕಿನ ಅಗರ ಗ್ರಾಮದವರಾಗಿದ್ದಾರೆ. ಹೆಮ್ಮೆಯ ನಾಟಕಕಾರ ಸಂಸ: ಕನ್ನಡ ನಾಡಿನ ಶೇಷ್ಠ ನಾಟಕಕಾರರಲ್ಲಿ ಒಬ್ಬರಾಗಿದ್ದ ಎ.ಎನ್‌.ಸ್ವಾಮಿ ವೆಂಕಟಾದ್ರಿ ಅಯ್ಯರ್‌ ಅವರು ಸಂಸ ರೆಂತಲೇ ಖ್ಯಾತಿ ಪಡೆದ ಮಹಾನ್‌ ನಾಟಕಕಾರ ರಾಗಿದ್ದು ಕನ್ನಡಭಾಷೆಗೆ 23 ನಾಟಕಗಳನ್ನು ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಆದರೆ ನಮಗೆ ಉಪಲಬ್ಧವಿರುವುದು

ಕೇವಲ ಬಿರುದಂತೆಂಬರ ಗಂಡ, ಸುಗುಣ ಗಂಭೀರ, ಬೆಟ್ಟದ ಅರಸು, ವಿಗಡ ವಿಕ್ರಮರಾಯ, ಮಂತ್ರಶಕ್ತಿ,ವಿಜಯನಾರಸಿಂಹ ಎಂಬ 6 ನಾಟಕಗಳು ಮಾತ್ರ. ಇಂವರ ಬಗ್ಗೆ ಪಟ್ಟಣದಲ್ಲಿ ಅಥವಾ ತಾಲೂಕಿನ ಯಾವ ಗ್ರಾಮಗಳಲ್ಲೂ ಇವರ ಇರುವಿಕೆಯನ್ನು ಗುರುತಿಸುವ ಒಂದೇ ಒಂದು ನೆಲೆ ಇಲ್ಲ. ಇತಿಹಾಸ ಹೇಳುವಂತೆ ಶೃಂಗಾರ ಪ್ರಧಾನ ಕಾವ್ಯವಾಗಿದ್ದ ನೇಮಿ ಚಂದ್ರನ ಲೀಲಾವತಿ ಪ್ರಬಂಧ ಗ್ರಂಥವನ್ನು ಯಳಂ ದೂರಲ್ಲಿ ಆನೆಯ ಮೇಲಿಟ್ಟು, ಇವರ ಶೃಂಗಾರ ರಸವು ಸೋರಿ ಹೋಗದಂತೆ ಆನೆಯ ಹೊಟ್ಟೆಯ ತಳಭಾಗದಲ್ಲಿ ತೊಟ್ಟಿಲು ಕಟ್ಟಿದ್ದರು ಇಷ್ಟು ಸಾಹಿತ್ಯ ಕಾಳಜಿ ಇಲ್ಲಿನ ಜನರಲ್ಲಿತ್ತು ಎನ್ನುತ್ತದೆ ಐತಿಹ್ಯ.

 

-ಫೈರೋಜ್‌ಖಾನ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.