ಕೊಳ್ಳೇಗಾಲ: ನಾಲೆಗೆ ಜೆಸಿಬಿ ಉರುಳಿ ಚಾಲಕ ದುರ್ಮರಣ
Team Udayavani, Oct 11, 2022, 6:16 PM IST
ಕೊಳ್ಳೇಗಾಲ: ಆಕಸ್ಮಿಕವಾಗಿ ನಾಲೆಗೆ ಜೆಸಿಬಿ ವಾಹನ ಉರುಳಿದ ಪರಿಣಾಮ ಸ್ಥಳದಲ್ಲೇ ಚಾಲಕ ಮೃತಪಟ್ಟ ದುರ್ಘಟನೆ ತಾಲೂಕಿನ ಉಗನೆ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ತಾಲೂಕಿನ ಪಾಳ್ಯ ಗ್ರಾಮದ ಮಹಾದೇವಶೆಟ್ಟಿ ಅವರ ಪುತ್ರ ಸುನಿಲ್ (24) ಆಕಸ್ಮಿಕವಾಗಿ ಜೆಸಿಬಿ ವಾಹನದೊಂದಿಗೆ ನಾಲೆಯ ಪ್ರಪಾತಕ್ಕೆ ಬಿದ್ದು ಸಾವನಪ್ಪಿದ ಚಾಲಕನಾಗಿದ್ದನೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಮಂಜುನಾಥ ಮತ್ತು ಸಿಬಂದಿಗಳಾದ ವಿರೇಂದ್ರ, ಚಂದ್ರು ಭೇಟಿ ನೀಡಿ ಸ್ಥಳ ಪರಿಶೀಲನೆಯ ಬಳಿಕ ಅಗ್ನಿ ಶಾಮಕ ದಳದ ಸಿಬಂದಿ ಸಹಾಯದಿಂದ ಮೃತ ದೇಹವನ್ನು ಹೊರ ತೆಗೆದು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ಪುಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.