ಹನೂರು: ಪರೀಕ್ಷೆಗೆ ಹೊರಡೋ ಮುನ್ನ ಅಸುನೀಗಿದ ತಾಯಿ; ನೋವಿನ ನಡುವೆಯೂ SSLC ಪರೀಕ್ಷೆ ಬರೆದ ಮಗ
Team Udayavani, Apr 11, 2022, 4:04 PM IST
ಹನೂರು: ತಾಯಿಯ ಅಗಲಿಕೆಯ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾದ ಪ್ರಸಂಗ ಹನೂರು ಪಟ್ಟಣದಲ್ಲಿ ಜರುಗಿದೆ.
ಹನೂರು ಪಟ್ಟಣದ ಮಾರಿಗುಡಿ ಬೀದಿಯ ವಿದ್ಯಾರ್ಥಿ ಸಂಜಯ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯಾಗಿದ್ದಾನೆ.
ಈತ ನಾರಾಯಣ್ ಮತ್ತು ಆಶಾರಾಣಿಯವರ ಪುತ್ರನಾಗಿದ್ದಾನೆ. ಸಂಜಯ್ರ ತಾಯಿ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಸೋಮವಾರ ಮುಂಜಾನೆ ಅಸುನೀಗಿದ್ದಾರೆ. ಆದರೆ ಮೃತರ ಪುತ್ರ ಸಂಜಯ್ಗೆ ಇಂದು ಎಸ್ಎಸ್ಎಲ್ಸಿಯ ಅಂತಿಮ ವಿಷಯವಾದ ವಿಜ್ಞಾನ ಪರೀಕ್ಷೆಯಿತ್ತು. ತಾಯಿಯ ಅಗಲಿಕೆಯ ನಡುವೆಯೂ ಸಂಜಯ್ ಕ್ರಿಸ್ತರಾಜ ವಿದ್ಯಾಸಂಸ್ಥೆಯ ಕೇಂದ್ರಕ್ಕೆ ಬಂದು ಪರೀಕ್ಷೆಗೆ ಹಾಜರಾಗಿದ್ದನು.
ಇದನ್ನೂ ಓದಿ:ಪ್ರತ್ಯೇಕತಾವಾದಿಗಳು, ಉಗ್ರರ ಜತೆ ನಂಟು; ಖಾಸಗಿ ಕಾನೂನು ಕಾಲೇಜಿನ ಪ್ರಾಂಶುಪಾಲ ವಜಾ
ಪರೀಕ್ಷೆ ಮುಕ್ತಾಯವಾದ ಬಳಿಕ ವಿದ್ಯಾರ್ಥಿ ಸಂಜಯ್ ಆಗಮಿಸಿ ತಾಯಿಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿದನು. ಈ ಘಟನೆ ಹನೂರು ಪಟ್ಟಣವಾಸಿಗಳನ್ನು ಕಂಬನಿ ಮಿಡಿಯುವಂತೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ