Karnataka 12 ಸಾವಿರ ಆರ್‌ಟಿಇ ಸೀಟು ಉಳಿಕೆ!

15,372 ಸೀಟುಗಳ ಪೈಕಿ 6,121 ಮಂದಿಗೆ ಪ್ರವೇಶ ಸಿಕ್ಕಿದರೂ ದಾಖಲಾದದ್ದು 3,363 ವಿದ್ಯಾರ್ಥಿಗಳು

Team Udayavani, Aug 26, 2023, 7:10 AM IST

12 ಸಾವಿರ ಆರ್‌ಟಿಇ ಸೀಟು ಉಳಿಕೆ!

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೀಟುಗಳ ಭರ್ತಿ ವರ್ಷದಿಂದ ವರ್ಷಕ್ಕೆ ಕುಸಿಯಲಾರಂಭಿಸಿದೆ.

2023-24ನೇ ಸಾಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 25ರಷ್ಟು ಸೀಟು ಹಂಚಿಕೆ ಅನ್ವಯ 15,372 ಆರ್‌ಟಿಇ ಸೀಟು ಭರ್ತಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆ ಅವಕಾಶ ನೀಡಿದರೂ ದಾಖಲಾದದ್ದು 3,363 ವಿದ್ಯಾರ್ಥಿಗಳು ಮಾತ್ರ. ಉಳಿದ 12,009 ಆರ್‌ಟಿಇ ಸೀಟುಗಳನ್ನು ಕೇಳುವವರೇ ಇಲ್ಲವಾಗಿದೆ.

2 ಹಂತಗಳಲ್ಲಿ ಹಂಚಿಕೆ
15,372 ಒಟ್ಟು ಸೀಟುಗಳು ಲಭ್ಯ ಇದ್ದರೂ ಮೊದಲ ಹಂತದಲ್ಲಿ 5,105 ವಿದ್ಯಾರ್ಥಿಗಳಿಗೆ ಆರ್‌ಟಿಇ ಸೀಟು ಲಭಿಸಿದರೆ ಕೊನೆಯ ಎರಡನೇ ಹಂತದಲ್ಲಿ ಒಟ್ಟು 1,016 ಮಕ್ಕಳಿಗೆ ಪ್ರವೇಶ ಸಿಕ್ಕಿದೆ. ಆದರೆ ಮೊದಲ ಹಂತದಲ್ಲಿ ಸೀಟು ಪಡೆದ 5,105 ಮಂದಿಯ ಪೈಕಿ ಕೇವಲ 2,918 ಮಕ್ಕಳು ಮಾತ್ರ ತಮಗೆ ಸೀಟು ಸಿಕ್ಕಿರುವ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದರೆ, ಎರಡನೇ ಹಂತದಲ್ಲಿ ಸೀಟು ಪಡೆದವರಲ್ಲಿ ದಾಖಲಾದದ್ದು ಕೇವಲ 445 ಮಂದಿ. ಆರ್‌ಟಿಇ ಸೀಟಿಗೆ ಆಯ್ಕೆಯಾದ ಒಟ್ಟು 6,121 ವಿದ್ಯಾರ್ಥಿಗಳ ಪೈಕಿ ಪ್ರವೇಶ ಪಡೆದದ್ದು 3,363 ವಿದ್ಯಾರ್ಥಿಗಳು ಮಾತ್ರ. ಸರಕಾರ ಆರ್‌ಟಿಇಗೆ ರೂಪಿಸಿರುವ ಷರತ್ತುಗಳಿಂದಾ ಗಿಯೇ ಸೀಟು ಭರ್ತಿ ಆಗದೆ ಉಳಿದಿವೆ.

ನಾಲ್ಕು ಜಿಲ್ಲೆಗಳಲ್ಲಿ ದಾಖಲಾತಿ ಶೂನ್ಯ!
ರಾಜ್ಯದ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳ ಪೈಕಿ ಹಾಸನ, ಕೊಡಗು, ಮಧುಗಿರಿ ಹಾಗೂ ಉತ್ತರ ಕನ್ನಡದಲ್ಲಿ ಆರ್‌ಟಿಇನಡಿ ಒಬ್ಬ ವಿದ್ಯಾರ್ಥಿ ಕೂಡ ದಾಖಲಾಗಿಲ್ಲ. ಬೆಂಗಳೂರು ಉತ್ತರದಲ್ಲಿ 447 ಸೀಟುಗಳಿಗೆ ಬರೀ ಒಬ್ಬ ವಿದ್ಯಾರ್ಥಿ ದಾಖಲಾಗಿದ್ದಾನೆ. ರಾಮನಗರದಲ್ಲಿ 176 ಸೀಟುಗಳ ಪೈಕಿ 2 ಮಾತ್ರ ಭರ್ತಿ ಆಗಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೀಟು ಭರ್ತಿ?
ಶಿವಮೊಗ್ಗ 32, ಯಾದಗಿರಿ 9, ಮಂಡ್ಯ 13, ಗದಗ 120, ರಾಯಚೂರು 22, ಉಡುಪಿ 17, ಕೋಲಾರ 62, ಬಳ್ಳಾರಿ 38, ಬೆಳಗಾವಿ 166, ಬೆಂಗಳೂರು ದಕ್ಷಿಣ 111, ಬೀದರ್‌ 49, ಚಾಮರಾಜನಗರ 16, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 5, ಚಿಕ್ಕೋಡಿ 402, ಚಿತ್ರದುರ್ಗ 9, ವಿಜಯನಗರ 33, ತುಮಕೂರು 44, ಶಿರಸಿ 50, ಹಾವೇರಿ 16, ಮೈಸೂರು 388, ಕೊಪ್ಪಳ 84, ಕಲಬುರಗಿಯಲ್ಲಿ 187 ಸೀಟುಗಳು ಭರ್ತಿ ಆಗಿವೆ.

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

12

Chikkaballapur: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ!

suicide (2)

Chikkaballapur: ಪೋಕ್ಸೋ ಆರೋಪಿ ಜತೆಗೆ 16 ವರ್ಷದ ಬಾಲಕಿ ಆತ್ಮಹತ್ಯೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.