ಗುಡಿಬಂಡೆ: ಕೆಮಿಕಲ್ ಮಿಶ್ರಿತ ಬಣ್ಣವಾದ ಕೆರೆ ನೀರು
Team Udayavani, Oct 9, 2022, 3:15 PM IST
ಗುಡಿಬಂಡೆ: ಪಟ್ಟಣದ ಅಮಾನಿಬೈರಸಾಗರ ಕೆರೆ ನೀರು ದಿನದಿಂದ ದಿನಕ್ಕೆ ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ತಿರುಗುತ್ತಿದ್ದು, ನೀರಿಗೆ ಯಾರಾದರೂ ಕೆಮಿಕಲ್ ಮಿಶ್ರಣ ಮಾಡಿದ್ದಾರೆಯೇ ಎಂದು ಸಾರ್ವಜನಿಕರಲ್ಲಿ ಅನುಮಾನಗಳು ಎಡ ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾದ, ಭಾರತದ ಭೂಪಟವನ್ನು ಹೋಲುವ ಅಮಾನಿಬೈರಸಾಗರ ಕೆರೆ 2022ನೇ ವರ್ಷದಲ್ಲಿ ನಿಲ್ಲದೇ ಕೋಡಿ ಹರಿಯುತ್ತಿದ್ದು, ಇದೇ ಕೆರೆಯಲ್ಲಿ ಜೀವ ಜಲಚರಗಳು ವಾಸಸ್ಥಾನವಾಗಿದ್ದು, ಇದೇ ಕೆರೆಯ ನೀರನ್ನು ಸುಮಾರು ಹಳ್ಳಿಗೆ ಕುಡಿಯುವ ನೀರು ಬಳಕೆಗೆ ಬಳಸಲು ಯೋಜನೆ ಸಹ ಸಿದ್ದಪಡಿಸುತ್ತಿದೆ, ಆದರೆ ಈ ಕೆರೆಯ ನೀರು ಕಳೆದ ಶನಿವಾರ ರಾತ್ರಿಯಿಂದ ಬಣ್ಣ ಬದಲಾವಣೆಯಾಗುತ್ತಿದ್ದು, ಭಾನುವಾರ ಬೆಳಿಗ್ಗೆ ಕೆರೆಯ ನೀರು ಕೆಮಿಕಲ್ ಮಿಶ್ರಣದ ಬಣ್ಣದ ರೂಪಕ್ಕೆ ತಿರುಗಿದ್ದು, ಬೆಳಿಗಿನ ಜಾವ ವಾಯು ವಿವಹಾರಕ್ಕೆ ತೆರಳಿದ್ದು, ಸಾರ್ವಜನಿಕರು ಕೆರೆಯ ನೀರಿನ ಬಣ್ಣ ಬದಲಾಗಿರುವುದನ್ನು ಕಂಡು, ಕೆಮಿಕಲ್ ಮಿಶ್ರಣವಾಗಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ, ಹೆಚ್ಚಿನ ಅನಾಹುತ ಸಂಬಂವಿಸುವ ಮೊದಲೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಿಂದೆ ಗುಡಿಬಂಡೆ ಪಟ್ಟಣದ ಹತ್ತಿರದ ವಾಟದಹೊಸಹಳ್ಳಿ ಕೆರೆಗೆ ಕೆಮಿಕಲ್ ಮಿಶ್ರಣ ಮಾಡಲು ಬಂದಿದ್ದ ಟ್ಯಾಂಕರ್ಅನ್ನು ಅಲ್ಲಿಯ ಸುತ್ತಮುತ್ತಲ ಗ್ರಾಮ ಸ್ಥರು ಹಿಡಿದು ಗುಡಿಬಂಡೆ ಅರಣ್ಯ ಇಲಾಖೆಗೆ ಒಪ್ಪಿಸಿದ್ದ ಘಟನೆ ನಡೆದಿದು, ಈ ಘಟನೆ ಮರೆ ಮಾಚುವಷ್ಟರಲ್ಲೇ ಅಮಾನಿಬೈರಸಾಗರ ಕೆರೆ ನೀರು ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ಬದಲಾಗುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಜಿ.ಕೆ.ಜಗನ್ನಾಥ್, ಬಿ.ಜೆ.ಪಿ. ಮುಖಂಡ ಹೇಳಿಕೆ: ಇತಿಹಾಸ ಪ್ರಸಿದ್ದ ಅಮಾನಿಬೈರಸಾಗರ ಕೆರೆ ನೀರಿನ ಬಣ್ಣ ಕೆಮಿಕಲ್ ಮಿಶ್ರಣದಂತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಕ್ರಮ ವಹಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ