ಕೊರೊನಾ ಕರಿನೆರಳಲ್ಲೇ ಸಂಕ್ರಾಂತಿ ಆಚರಣೆ
Team Udayavani, Jan 15, 2022, 1:27 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ, ಒಮಿಕ್ರಾನ್ ಸೋಂಕಿನ ಭೀತಿ ನಡುವೆಯೂ ಜನಸಾಮಾನ್ಯರು ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಆಚರಿಸುತ್ತಿದ್ದು, ಶುಕ್ರವಾರ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು.
ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲಾದ್ಯಂತ ದರ ಏರಿಕೆ ನಡುವೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಜನ ಮುಂದಾಗಿದ್ದರು. ಕೆಲವರು ಕೊರೊನಾಭೀತಿಯಿಂದ ಅಗತ್ಯ ವಸ್ತುಗಳ ಖರೀದಿಸಲು ಹಿಂಜರಿದರು. ಆದರೂ, ವ್ಯಾಪಾರ ನಡೆಯಿತು.
ಒಮಿಕ್ರಾನ್ ಸಂಕಷ್ಟ: ಎರಡು ವರ್ಷದಿಂದ ಕೋವಿಡ್ ಮೊದಲ, 2ನೇ ಅಲೆಯು ಬಹುತೇಕ ಹಬ್ಬಗಳಸಂಭ್ರಮಕ್ಕೆ ಕುತ್ತು ತಂದಿತ್ತು. ಇನ್ನು ಕೊರೊನಾ ಆತಂಕ ದೂರಾಯಿತು ಎಂದು ನಿಟ್ಟುಸಿರು ಬಿಟ್ಟ ಜನರಿಗೆ ಕೋವಿಡ್ 3ನೇ ಅಲೆಯ ಜತೆಗೆ, ಒಮಿಕ್ರಾನ್ ಸಂಕಷ್ಟ ಎದುರಾಗಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಪ್ರದೇಶಗಳಲ್ಲಿ ವಿಶೇಷವಾಗಿ ಆನೇಕ ವೃತ್ತಗಳಲ್ಲಿ ಕಬ್ಬು,ಕಡಲೆಕಾಯಿ, ಅವರೆಕಾಯಿ ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು.
ನಿರೀಕ್ಷಿತ ವ್ಯಾಪಾರ ನಡೆದಿಲ್ಲ: ಕಬ್ಬು ಒಂದು ಜೋಡಿ 100 ರಿಂದ 150 ರೂ., ಕಡಲೆಕಾಯಿ ಒಂದು ಕೇಜಿ 80 ರಿಂದ 100 ರೂ., ಅವರೆಕಾಯಿ ಒಂದು ಕೇಜಿ 80 ರೂ. ಗೆ ಮಾರಾಟ ಮಾಡುತ್ತಿದ್ದರು. ಇನ್ನು ಒಂದು ಕೆಜಿ ಏಲಕ್ಕಿ ಬಾಳೆ 35 ರೂ., ಪಚ್ಚಬಾಳೆ 20 ರೂ., ದಾಳಿಂಬೆ 180ರೂ., ಸೇಬು 170 ರಿಂದ 180 ರೂ., ಅನಾನಸ್ ಒಂದು 50 ರೂ.ಗೆ ಮಾರಾಟ ಮಾಡುತ್ತಿದ್ದರು. ಇನ್ನೂ ಹಲವುವ್ಯಾಪಾರಸ್ಥರು ಹಬ್ಬದ ಅಂಗವಾಗಿ ವಿಶೇಷ ಖರೀದಿಗೆಮುಂದಾಗಲಿಲ್ಲ, ಕೊರೊನಾ ಸೋಂಕಿನ ಪ್ರಭಾವ ಈ ಬಾರಿಗೆ ಸಂಕ್ರಾಂತಿ ಹಬ್ಬದ ಖರೀದಿ ಮೇಲೆ ಬಿದ್ದಿದೆ.
ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆದಿಲ್ಲ ಎಂದು ತಮ್ಮಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲುಹಬ್ಬದಿನದಂದು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ ಎಂದು ನಾಗರಿಕರು ಕಳೆದ ಎರಡು ಮೂರು ದಿನಗಳಿಂದ ಹಬ್ಬದ ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿದ್ದರು.ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ನಾಗರಿಕರು ಖರೀದಿಗೆಬಂದಿಲ್ಲ ಎಂಬುದು ವ್ಯಾಪಾರಸ್ಥರ ಅಳಲು. ಒಟ್ಟಾರೆವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಕೊರೊನಾಸೋಂಕಿನ ಕರಿನೆರಳು ಆವರಿಸಿದ್ದು, ನಾಗರಿಕರು ಸಂಪ್ರದಾಯದಂತೆ ಹಬ್ಬ ಆಚರಿಸಲು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
Lok Sabha Polls; ಮೊಯ್ಲಿ ಕೊನೇ ಚುನಾವಣೆ ಅಸ್ತ್ರದಿಂದ ಚಿಕ್ಕಬಳ್ಳಾಪುರ ಟಿಕೆಟ್ ಕಗ್ಗಂಟು
Gruha Jyothi scheme: ಗೃಹಜ್ಯೋತಿ ಗ್ರಾಹಕರ ಜೇಬಿಗೆ ಕತ್ತರಿ!
Chikaballapura: ಲೋಕ ಸಮರ ಹೊತ್ತಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು