ಶಾಸಕರು ಕಮಿಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ
Team Udayavani, Mar 7, 2023, 3:42 PM IST
ಚಿಂತಾಮಣಿ: ಗುತ್ತಿಗೆದಾರರಿಂದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಒಂದು ರೂ. ಕಮಿಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಅಥವಾ ನಾನು ಯಾರಿಂದಲೂ ಒಂದು ರೂಪಾಯಿ ಕಮಿಷನ್ ಪಡೆದಿದ್ದೀನಿ ಎಂದು ಸಾಬೀತು ಪಡಿಸಲಿ, ಆಗ ರಾಜಕೀಯದಿಂದ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ಸವಾಲು ಹಾಕಿದರು.
ತಾಲೂಕಿನ ಮುಂಗನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್ ತೊರೆದು “ಕೈ’ ಸೇರಿದ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ವೈದ್ಯರಿಗೆ ಹಾಲಿ ಶಾಸಕ ಲಂಚದ ಹಣದಿಂದ ಗೌರವಧನ ನೀಡಿದ್ದಾರೆ. ಕೋವಿಡ್ ವೇಳೆ ಕ್ಷೇತ್ರದಲ್ಲಿ ಜನತೆ ಸಾಯುತ್ತಿದ್ದರೆ, ಇವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿರಿಯಾನಿ ಮಾಡಿಕೊಂಡು ಮಜಾ ಮಾಡುತ್ತಿದ್ದರು ಎಂದು ದೂರಿದರು.
ಕಾಂಕ್ರೀಟ್ ರಸ್ತೆ ನಿರ್ಮಿಸಿಲ್ಲ: ರಾಜ್ಯದಲ್ಲೇ ಮಾದರಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂಬ ಆಸೆ ನನ್ನದಾಗಿತ್ತು. ಆದರೆ, ಈಗ ಯಾವುದೇ ಕೆಲಸಕ್ಕೆ ಬಾರದಂತೆ ನಿರ್ಮಿಸಿರುವುದು ಎಷ್ಟರ ಮಟ್ಟಿಗೆ ಸರಿ. ತಾಲೂಕಿನಲ್ಲಿ ಪರಿಶಿಷ್ಟರು ಇರುವ ಕಾಲೋನಿಗಳಲ್ಲಿ ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಬಿಟ್ಟರೆ 10 ವರ್ಷಗಳಿಂದ ಒಂದು ಇಂಚು ಕಾಂಕ್ರೀಟ್ ರಸ್ತೆ ಆಗಲಿಲ್ಲ ಎಂದು ದೂರಿದರು.
ಸಮಾಜ ಸೇವೆ ಎಲ್ಲಿ ಹೋಯ್ತು: ಮುಂಗಾನಹಳ್ಳಿ ಹೋಬಳಿಯ ಹಲವು ರಸ್ತೆಗಳು ನನ್ನ ಅವಧಿಯಲ್ಲಿ ಅಭಿವೃದ್ಧಿಯಾಗಿವೆ. ಆದರೆ, 10 ವರ್ಷಗಳಲ್ಲಿ ಆ ರಸ್ತೆಗಳಿಗೆ ಡಾಂಬರು ಹಾಕಿಸುವ ಯೋಗ್ಯತೆ ಶಾಸಕರಿಗೆ ಇಲ್ಲ. ಈ ಕ್ಷೇತ್ರದ ಶಾಸಕರಾಗುವ ಮುಂಚೆ, ಗಣೇಶ ಹಬ್ಬ ಬಂದರೆ ಗಣೇಶನ ಮೂರ್ತಿ ಕೊಡಿಸುವುದು, ರಂಜಾನ್ ಬಂದರೆ ಮುಸ್ಲಿಮರಿಗೆ ಆಹಾರ ಧಾನ್ಯ ವಿತರಣೆ ಮಾಡುವುದು, ಶಾಸಕರಾದ ನಂತರ ಈ ಎಲ್ಲಾ ಸಮಾಜ ಸೇವೆಗಳು ಎಲ್ಲಿ ಮಾಯವಾದವು ಎಂದು ಪ್ರಶ್ನಿಸಿದರು.
ಈ ವೇಳೆ ಗ್ರಾಮದ ರಾಮಚಂದ್ರಪ್ಪ, ಅಶೋಕ್, ಪ್ರಭಾಕರ, ಸುಧಾಕರ್, ಶ್ರೀನಾಥ್, ರಮೇಶ್, ನಾಗರಾಜ್, ದಿಲೀಪ್, ವಕೀಲರಾದ ವೆಂಕಟೇಶ್, ಕೋನಪ್ಪ, ನಾರಾಯಣ್, ತಿಪ್ಪಣ್ಣ, ರಾಮಪ್ಪ, ಮಂಜು, ನವೀನ್ ಎಂ.ಕೆ.ಗಗನ್, ಸೀನಾ ಎಂ. ಗಂಗಾಧರ್, ಓಬಲೇಶ್, ಮಲ್ಲಿಕಾರ್ಜುನ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ರೆಡ್ಡಿ, ಡಾಬಾ ನಾಗರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಮಾದಮಂಗಲ ಚಂದ್ರಪ್ಪ, ಜಿಪಂ ಮಾಜಿ ಸದಸ್ಯ ಸ್ಕೂಲ್ ಸುಬ್ಟಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗಿರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ರವಿ, ರಾಗುಟಹಳ್ಳಿ ರಘು, ಡಾ.ಅಶೋಕ್ಕುಮಾರ್, ಶ್ರೀನಿವಾಸರೆಡ್ಡಿ, ಚಿನ್ನಪ್ಪ, ಕೃಷ್ಣಾರೆಡ್ಡಿ, ನಾರಾಯಣಸ್ವಾಮಿ, ದಯಾನಂದರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎಂ. ವೆಂಕಟರೌಣಪ್ಪ, ಸಂತೆಕಲ್ಲಿ ಗೋವಿಂದಪ್ಪ, ತಾಪಂ ಮಾಜಿ ಅಧ್ಯಕ್ಷ ರೆಡ್ಡಪ್ಪ ಇದ್ದರು. ಮುಖಂಡರಾದ ಕುಮಾರ್ರೆಡ್ಡಿ, ಬೀಡಾ ಶ್ರೀನಿವಾಸ್, ಆರ್ಎಂಜಿ ಶ್ರೀನಿವಾಸ್, ಸೋಮು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Code of conduct: ಚುನಾವಣಾ ನೀತಿ ಸಂಹಿತೆ: ರಾಜಕೀಯ ಫ್ಲೆಕ್ಸ್, ಬ್ಯಾನರ್ ತೆರವು!
H. D. Deve Gowda, ಕುಮಾರಸ್ವಾಮಿ ಬಿಜೆಪಿ ವಕ್ತಾರರು: ಸಿಎಂ ಸಿದ್ದರಾಮಯ್ಯ
LokSabha Election: ಕ್ಲೈಮ್ಯಾಕ್ಸ್ ತಲುಪಿದ ಕೈ, ಕಮಲ ಅಭ್ಯರ್ಥಿಗಳ ಆಯ್ಕೆ!
Lok Sabha Elections; ವರಿಷ್ಠರು ಅವಕಾಶ ನೀಡಿದರೆ ಸ್ಪರ್ಧೆ: ಸುಧಾಕರ್
Chikkaballapur: ಕಾರಿನಲ್ಲಿ ಇರಿಸಿದ್ದ 3 ಲಕ್ಷ ರೂ. ಮದುವೆ ಮುಯ್ಯಿ ಕಳ್ಳರ ಪಾಲು!
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್