ನಿತ್ಯ 400 ಮಂದಿಗೆ ಇಫ್ತಾರ್ ಆಯೋಜನೆ
ರಂಜಾನ್ ಪ್ರಯುಕ್ತ ಉಪವಾಸ ಇರುವವರಿಗೆ ಇಫ್ತಾರ್ ಕೂಟ
Team Udayavani, May 21, 2019, 8:19 AM IST
ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ರಂಜಾನ್ ಪ್ರಯುಕ್ತ ಉಪವಾಸ ಇರು ವವರಿಗೆ ಸಂಘ, ಸಂಸ್ಥೆಗಳು ಆಯೋಜಿ ಸಿದ್ದ ಇಫ್ತಾರ್ ಕೂಟ.
ಚಿಕ್ಕಬಳ್ಳಾಪುರ: ಪವಿತ್ರ ರಂಜಾನ್ ಮಾಸಚಾರಣೆ ಜಿಲ್ಲಾದ್ಯಂತ ಶುರುವಾದಂತೆ ಇಫ್ತಾರ್ ಕೂಟಗಳ ಆಯೋಜನೆ ಕೂಡ ಸಾಗಿದೆ. ಮುಸ್ಲಿಂ ಸಮುದಾಯದ ಪಾಲಿಗೆ ಶ್ರೇಷ್ಠವಾದ ರಂಜಾನ್ ಪ್ರಯುಕ್ತ ಜಿಲ್ಲೆಯ ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ವಿಶೇಷ ಪ್ರಾರ್ಥನಾ ಕೂಟಗಳು ನಡೆಯುತ್ತಿದ್ದು, ಉಪವಾಸ ಅಂತ್ಯಗೊಳಿಸುವ ಸಂದರ್ಭದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗುತ್ತಿದೆ.
ನಿತ್ಯ 400 ಮಂದಿಗೆ ಇಫ್ತಾರ್: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಮಸೀದಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಜೂನಿಯರ್ ಕಾಲೇಜು ಮುಂಭಾಗ ಇರುವ ಮಸೀದ್ ಎ ಹುಸೇನಿಯಾದಲ್ಲಿ ರಂಜಾನ್ ಮಾಸ ಪ್ರಯುಕ್ತ ನಮಾಜ್ ಮಾಡುವ 400 ಕ್ಕೂ ಹೆಚ್ಚು ಮಂದಿಗೆ ನಿತ್ಯ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿದೆ.
ನಗರದ ಇಬ್ರಾಹೀಂ ಕಲೀಲ್, ಮೌಲ, ಸೈಯದ್ ಇಮ್ಲಾದ್ ಸೇರಿದಂತೆ ಯುವಕರ ಗುಂಪು ರಂಜಾನ್ನಲ್ಲಿ ಉಪವಾಸ ಇರುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇಫ್ತಾರ್ ಹಾಗೂ ಸೆಹ್ರಿ ವ್ಯವಸ್ಥೆಯನ್ನು ರಂಜಾನ್ ಮಾಸಾಂತ್ಯ ಮುಗಿಯುವವರೆಗೂ ಆಯೋಜಿಸಿದೆ.
ರಂಜಾನ್ ಹಬ್ಬದ ಸಂದರ್ಭದಲ್ಲಿ ಇಫ್ತಾರ್ ಕೂಟ ಆಯೋಜಿಸುವುದು ಸಂಪ್ರದಾಯ. ನಿತ್ಯ ನೂರಾರು ಮಂದಿ ಉಪವಾಸ ಇದ್ದು ನಮಾಜ್ ಮಾಡಿದ ಬಳಿಕ ಆಹಾರ ಸೇವನೆ ಮಾಡುತ್ತಾರೆಂದು ಚಿಕ್ಕಬಳ್ಳಾಪುರದ ಮಹಮ್ಮದ್ ಜಿಲಾನಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ