ಕೋವಿಡ್ ಸೋಂಕಿಗೆ ಮತ್ತೂಬ್ಬ ಶಿಕ್ಷಕ ಬಲಿ
Team Udayavani, May 14, 2021, 3:05 PM IST
ಚಿಂತಾಮಣಿ: ತಾಲೂಕಿನ ಎಂ.ಗೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕೆ.ರವಣಾರೆಡ್ಡಿ(48) ಗುರುವಾರ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಇದರೊಂದಿಗೆ ತಾಲೂಕಿನಲ್ಲಿ ಮೂವರು ಶಿಕ್ಷಕರು ಮಹಾಮಾರಿಗೆ ಬಲಿ ಆದಂತಾಗಿದೆ.
ಇತ್ತೀಚಿಗೆ ಮಹಮದ್ಪುರ ಶಾಲೆಯ ರಾಮಪ್ಪ, ಸಂತೆಗೊಲ್ಲಹಳ್ಳಿ ಗ್ರಾಮದ ವೆಂಕಟೇಶ್ ಸೋಂಕಿನಿಂದ ಮೃತಪಟ್ಟಿದ್ದರು. ಇದೀಗ ತಾಲೂಕಿನ ಪಲ್ಲಿಗಡ್ಡ ಗ್ರಾಮದ ರವಣಾರೆಡ್ಡಿ ಬಲಿ ಆಗಿದ್ದು, ಶಿಕ್ಷಕ ವೃಂದವನ್ನು ಆತಂಕಕ್ಕಿಡುಮಾಡಿದೆ.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ರವಣಾರೆಡ್ಡಿ ತಮ್ಮ ಪುತ್ರ ವೈದ್ಯನಾಗಿರುವ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟಿದ್ದಾರೆ. ಈ ವೇಳೆ ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಶಿಕ್ಷಕ ಮಿತ್ರರು ಮೃತರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.