ಶೀಘ್ರದಲ್ಲೇ ಕೆರೆಗಳ ಕಾಮಗಾರಿ ಪೂರ್ಣ


Team Udayavani, Jan 21, 2023, 4:32 PM IST

ಶೀಘ್ರದಲ್ಲೇ ಕೆರೆಗಳ ಕಾಮಗಾರಿ ಪೂರ್ಣ

ಗೌರಿಬಿದನೂರು: ತಾಲೂಕಿನ ವಿವಿಧ ಕೆರೆಗಳ ಅಭಿವೃದ್ಧಿಗೆ ಸರ್ಕಾರದಿಂದ 2.95 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕೆರೆ ಗಳ ಅಭಿವೃದ್ಧಿಯನ್ನು ಪೂರೈಸಲಾಗುವುದು ಎಂದು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಹೇಳಿದರು.

ತಾಲೂಕಿನ ಕಲ್ಲೂಡಿ ಗ್ರಾಮದ ಕೆರೆ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮಳೆಗಾಲದಲ್ಲಿ ಮಳೆ ಹೆಚ್ಚು ಸುರಿದ ಪರಿಣಾಮ ತಾಲೂಕಿನ ಕಲ್ಲೂಡಿ, ಕೆಂಕರೆ ಮ್ಯಾಳ್ಯ ಕೆರೆಗಳ ಕಟ್ಟೆಗಳು ಒಡೆದು ನೀರಿಲ್ಲ ಸೋಲಾಗಿ, ಬೆಳೆಗಳು ಜಲಾವೃತಗೊಂಡು ರೈತರು ಅಪಾರ ನಷ್ಟ ಅನುಭವಿಸುವಂತಾಗಿತ್ತು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಸರ್ಕಾರ ಕೆರೆಗಳ ಜೀರ್ಣೋದಾರಕ್ಕಾಗಿ 2.95 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಎಚ್‌.ಎನ್‌.ವ್ಯಾಲಿ ನೀರು: ತಾಲೂಕಿನಲ್ಲಿ ವಿವಿಧ ಕೆರೆಗಳಿಗೆ ಈಗಾಗಲೇ ಎಚ್‌.ಎನ್‌. ವ್ಯಾಲಿ ನೀರು ಹರಿಯುತ್ತಿದೆ. ತಾಲೂಕಿನ ಗಂಗಸಂದ್ರ ಕೆರೆಯಿಂದ ಮುದುಗಾನಕುಂಟೆ, ಸಾಗಾನಹಳ್ಳಿ, ಗೊಟಕನಾ ಮರ, ಕಲ್ಲೂಡಿ ಕೆರೆಗೆ ನೀರು ತುಂಬಿಸುವ ಯೋಜನೆ ಪ್ರಸ್ತಾವನೆ, ಸಲ್ಲಿಸಲಾಗಿದೆ. ಕಲ್ಲೂಡಿ ಕೆರೆಯಿಂದ ಚಿಕ್ಕಕುರುಗೋಡು, ದೊಡ್ಡ ಕುರು ಗೋಡು, ಕುಡುಮಲಕುಂಟೆ ಕೆರೆಗೆ ನೀರು ತುಂಬಿಸುವ ಯೋಜನೆ ಇದಾಗಿದೆ ಎಂದು ಹೇಳಿದರು.

ಇದೇ ವೇಳೆ ಗೌರಿಬಿದನೂರು ತಾಲೂಕಿನ ಇಡಗೂರು ನರ್ಲಕುಂಟೆ, ಮಾಳೇನಹಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಗೆ 19 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದರಿಂದ ಮಂಟಚಕನಹಳ್ಳಿ, ಹಾಲಗಾನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಸ್ತಾವನೆಯಲ್ಲಿದೆ.ನಂತರ ನಗರ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯಿಂದ ಉಡುಮಲೋಡು, ಗುಂಡಾಪುರ, ಗೋಟಕನಾ ಪುರ, ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯಿಂದ ನೀರು ಪೂರೈಕೆ ಮಾಡುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.

ರಸ್ತೆಗಳ ಅಭಿವೃದ್ಧಿ: ತಾಲೂಕಿನ ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ತಾಲೂಕು ಆರ್ಥಿಕ- ಸಾಮಾಜಿಕ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಅಲ್ಲೀಮರ, ನಾಚ ಕುಂಟೆ, ಗೆದರೆ,ರಸ್ತೆಗಳ ಅಭಿ ವೃದ್ಧಿಗೆ 8 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಾಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳಿಸ ಲಾಗುವುದು ಎಂದರು.

ಗೌರಿಬಿದನೂರು ತಾಲೂಕಿಗೆ ಕೆಲವು ಸ್ವಯಂಘೋಷಿತ ಸಮಾಜಸೇವಕರು ಚುನಾವಣೆಗೆ ಬಂದಿದ್ದಾರೆ. ತಾಲೂಕಿನ ಜನತೆ ಪ್ರಬುದ್ಧರು ಹಣದ ಆಮಿಷಕ್ಕೆ ಮತವನ್ನು ಹಾಕುವುದಿಲ್ಲ. ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಜನತೆ ನೆಮದಿ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು. ‌

ನಗರಸಭೆ ಸದಸ್ಯ ಗಾಯತ್ರಿ ಬಸವರಾಜ್‌, ಎಂ.ಡಿ.ರಫೀಕ್‌, ಗದರ ಗ್ರಾಪಂ ಅಧ್ಯಕ್ಷೆ ಪ್ರೇಮ ಕುಮಾರಿ, ಸದಸ್ಯರಾದ ಸರಳ, ಸುಧಾ, ಶಿವಕುಮಾರ್‌ ರೆಡ್ಡಿ, ಮುಖಂಡ ರಾದ ಎಚ್‌.ಎನ್‌. ಪ್ರಕಾಶ್‌ ರೆಡ್ಡಿ, ನಾನಾ, ಅಶ್ವತ್ಥನಾರಾಯಣ್‌, ತಾರಾ ನಾಥ್‌, ಬೊಮ್ಮಣ್ಣ ತರಿದಾಳು ಚಿಕ್ಕಣ್ಣ ನಾಗರಾಜ್, ರೇಣುಕಮ್ಮ, ವೆಂಕಟರಮಣ ಹಾಜರಿದ್ದರು.

ಟಾಪ್ ನ್ಯೂಸ್

1-sadasd

Punjab ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

1-sadas

New Parliament building ಅಧೀನರನ್ನು ಭೇಟಿಯಾದ ಪ್ರಧಾನಿ ಮೋದಿ

SIDDARAMAYYA 1

ಪ್ರವೀಣ್‌ ನೆಟ್ಟಾರು ಪತ್ನಿಯ ಪುನರ್‌ ನೇಮಕಾತಿ: CM ಸಿದ್ದರಾಮಯ್ಯ ಭರವಸೆ

1-ssad

Karnataka CM ಸಿದ್ದರಾಮಯ್ಯ ಸಂಪುಟದಲ್ಲಿ ಬಾವ-ಬಾಮೈದ!

1-sadsad

RSS ನಿಷೇಧಿಸುವ ಬಗ್ಗೆ ಸರ್ಕಾರ ಮಾತನಾಡಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

police crime

Manipal ಪೊಲೀಸರ ಹೆಸರಿನಲ್ಲಿ ಹಣ ವಸೂಲು: ಆರೋಪಿಗಳು ವಶಕ್ಕೆ

ನೂತನ ಸಚಿವ ಮಂಕಾಳ್ ವೈದ್ಯರನ್ನು ಸನ್ಮಾನಿಸಿದ ರಾಜಕೀಯ ಗುರು ಆರ್.ವಿ.ದೇಶಪಾಂಡೆ

ನೂತನ ಸಚಿವ ಮಂಕಾಳ್ ವೈದ್ಯರನ್ನು ಸನ್ಮಾನಿಸಿದ ರಾಜಕೀಯ ಗುರು ಆರ್.ವಿ.ದೇಶಪಾಂಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ssad

Karnataka CM ಸಿದ್ದರಾಮಯ್ಯ ಸಂಪುಟದಲ್ಲಿ ಬಾವ-ಬಾಮೈದ!

8 ತಿಂಗಳಿಂದ ಸಿಕ್ಕಿಲ್ಲ ಹಾಲಿನ ಪ್ರೋತ್ಸಾಹ ಧನ!

8 ತಿಂಗಳಿಂದ ಸಿಕ್ಕಿಲ್ಲ ಹಾಲಿನ ಪ್ರೋತ್ಸಾಹ ಧನ!

ಚಿಕ್ಕಬಳ್ಳಾಪುರ:ನಮ್ಮ ದುಡಿಮೆ ಕಸಿಯುತ್ತಿದೆ ಬಂಡವಾಳಶಾಹಿ ವ್ಯವಸ್ಥೆ; ಡಾಮಿನಿಕ್‌

ಚಿಕ್ಕಬಳ್ಳಾಪುರ:ನಮ್ಮ ದುಡಿಮೆ ಕಸಿಯುತ್ತಿದೆ ಬಂಡವಾಳಶಾಹಿ ವ್ಯವಸ್ಥೆ; ಡಾಮಿನಿಕ್‌

Moral policing: ಯುವತಿಯೊಂದಿಗೆ ಇದ್ದ ಕಾರಣಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

Moral policing: ಯುವತಿಯೊಂದಿಗೆ ಇದ್ದ ಕಾರಣಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಚಿಕ್ಕಬಳ್ಳಾಪುರ: ಮಳೆಗಾಲ ಶುರುವಾದಂತೆ ಹಾಲು ಉತ್ಪಾದನೆ ಜಿಗಿತ

ಚಿಕ್ಕಬಳ್ಳಾಪುರ: ಮಳೆಗಾಲ ಶುರುವಾದಂತೆ ಹಾಲು ಉತ್ಪಾದನೆ ಜಿಗಿತ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

1-sadasd

Punjab ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

1-wdsa

Hunsur ಸಾಲ ಬಾಧೆಯಿಂದ ನೇಣಿಗೆ ಶರಣಾದ ವೃದ್ಧ ರೈತ

police

Chikkamagaluru: ಸೇತುವೆ ಬಳಿ ಎರಡು ಗೋವುಗಳ ತಲೆ, ಕಾಲು ಪತ್ತೆ

1-sadas

New Parliament building ಅಧೀನರನ್ನು ಭೇಟಿಯಾದ ಪ್ರಧಾನಿ ಮೋದಿ

SIDDARAMAYYA 1

ಪ್ರವೀಣ್‌ ನೆಟ್ಟಾರು ಪತ್ನಿಯ ಪುನರ್‌ ನೇಮಕಾತಿ: CM ಸಿದ್ದರಾಮಯ್ಯ ಭರವಸೆ