ಇಲ್ಲಿ ಮತದಾರರೇ ಪ್ರಭುಗಳು..: ರೆಡ್ಡಿ ಹೊಸ ಪಕ್ಷ ಕುರಿತಂತೆ ಸಿ.ಟಿ ರವಿ ಪ್ರತಿಕ್ರಿಯೆ
Team Udayavani, Dec 25, 2022, 4:36 PM IST
ಚಿಕ್ಕಮಗಳೂರು: ಪ್ರಜಾಪ್ರಭುತ್ವದಲ್ಲಿ ಪಕ್ಷ ಕಟ್ಟಲು ಹಾಗೂ ಚುನಾವಣೆ ಸ್ಪರ್ಧಿಸಲು ಎರಡಕ್ಕೂ ಅವಕಾಶವಿದೆ. ಇದರಲ್ಲಿ ಮತದಾರರೇ ಪ್ರಭುಗಳು. ಅವರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎನ್ನುವುದರ ಮೇಲೆ ನಿರ್ಣಾಯವಾಗುತ್ತದೆ ಎಂದು ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ಕುರಿತಂತೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ ನೀಡಿದರು.
ಕೆಲವನ್ನು ಇವತ್ತೇ ಜಡ್ಜ್ ಮೆಂಟ್ ಕೊಡಲು ಬರಲ್ಲ. ಕಾಲ ಕೆಲವನ್ನು ನಿರ್ಣಯ ಮಾಡುತ್ತದೆ. ಕಾಲವನ್ನು ನಾವೆಲ್ಲ ಕಾದು ನೋಡಬೇಕಾಗುತ್ತದೆ ಎಂದರು.
ಇದನ್ನೂ ಓದಿ:ಹೊಸ ರಾಜಕೀಯ: ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಮಾಡುವುದಾಗಿ ಘೋಷಿಸಿದ ಜನಾರ್ದನ ರೆಡ್ಡಿ
ನಾನು ವೈಯುಕ್ತಿಕ ವಿಷಯದಲ್ಲಿ ಭೇಟಿಯಾಗಿಲ್ಲ. ಸಂಬಂಧ ಕೆಟ್ಟಿದೆ ಎಂದು ನಾನು ಹೇಳಲ್ಲ, ಇತ್ತೀಚಿನ ದಿನದಲ್ಲಿ ಭೇಟಿಯಾಗಿಲ್ಲ. ಯಾರು ಬೇಕಾದರೂ ಸ್ಪರ್ಧೆ ಮಾಡಲು ಅವಕಾಶ ಇದೆ. ನಾಳೆ ಏನೂ ಅಂತಾ ತಿರ್ಮಾನವಾಗುತ್ತದೆ ಎಂದರು.