Congress ವಿಶ್ವಾಸ ದ್ರೋಹ ಮಾಡಿದೆ,ದತ್ತಾ ಮರಳಿ ಬಂದರೆ ಸ್ವಾಗತಿಸುತ್ತೇವೆ: JDS ಅಭ್ಯರ್ಥಿ
Team Udayavani, Apr 6, 2023, 5:58 PM IST
ಚಿಕ್ಕಮಗಳೂರು : ಕಾಂಗ್ರೆಸ್ ವೈ.ಎಸ್.ವಿ ದತ್ತಾ ಅವರಿಗೆ ವಿಶ್ವಾಸ ದ್ರೋಹ ಮಾಡಿದ್ದು, ಅವರು ಮತ್ತೆ ಜೆಡಿಎಸ್ ಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಧನಂಜಯ್ ಹೇಳಿಕೆ ನೀಡಿದ್ದಾರೆ.
ದತ್ತ ಅವರಿಗೆ ಟಿಕೆಟ್ ನೀಡದಿರುವ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಧನಂಜಯ್, ದತ್ತಾ ಅವರಿಗೆ ಕಾಂಗ್ರೆಸ್ ಗೆ ಹೋಗಿ ಅವಮಾನವಾಗಿದೆ. ಜೆಡಿಎಸ್ ನಾಯಕರು ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತಾರೆ ಎಂಬ ನಂಬಿಕೆ ಇದೆ. ಅವರು ಮರಳಿ ಬಂದರೆ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಗೆ ಲಾಭವಾಗುತ್ತದೆ ಎಂದು ನೇರವಾಗಿ ಜೆಡಿಎಸ್ ಗೆ ಆಹ್ವಾನ ನೀಡಿದರು. ಕಾಂಗ್ರೆಸ್ ಪಕ್ಷ ಬಿ ಟೀಂ ಆಫ್ ಬಿಜೆಪಿ ಎಂದು ಧನಂಜಯ್ ಹೇಳಿದರು.
ದತ್ತಾ ಅವರಿಗೆ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅವರ ಬದಲಿಗೆ ಆನಂದ್ ಕೆ.ಎಸ್ ಅವರಿಗೆ ಟಿಕೆಟ್ ನೀಡಲಾಗಿದೆ.