ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಸಾಂದ್ರಕ- ಮಾನಿಟರ್ ವಿತರಣೆ
Team Udayavani, May 22, 2021, 11:18 AM IST
ಚಿಕ್ಕಮಗಳೂರು: ಕೋವಿಡ್ ಸೋಂಕಿತರಿಗೆ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಐಕ್ಯಾಟ್ ಫೌಂಡೇಷನ್, ಐಎಎ, ಅವಿರಥ ಭಾರತ ಸಂಸ್ಥೆಗಳು ಕೋವಿಡ್ಇಂಡಿಯಾ ಫೌಂಡೇಷನ್ ಆಕ್ಸಿಜನ್ ಸಾಂದ್ರಕ ಕಾನ್ಸನ್ಟ್ರೇಟರ್) ಜಿಲ್ಲಾಸ್ಪತ್ರೆಗೆ 80 ಸಾವಿರ ಮೌಲ್ಯದ ಆಕ್ಸಿಜನ್ ಸಾಂದ್ರಕ ಹಾಗೂ ಮಾನಿಟರ್ಗಳನ್ನು ನೀಡಿದರು.
ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸನ್ ಪ್ರಸಿಡೆಂಟ್ ಡಾ| ನಾಗನಿಶ್ಚಲ್ ಮಾತನಾಡಿ, ಕೋವಿಡ್ 2ನೇ ಅಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸಂಕಟ ಪಡುತ್ತಿದ್ದಾರೆ.ಇದನ್ನು ಮನವರಿಕೆ ಮಾಡಿಕೊಂಡು ಐಕ್ಯಾಟ್ ಫೌಂಡೇಷನ್, ಐಎಎ, ಮತ್ತು ಅವಿರಥ ಭಾರತ ಸಂಸ್ಥೆಗಳು ದೇಣಿಗೆ ನೀಡುವ ಮೂಲಕ ರಾಜ್ಯಾದ್ಯಾಂತ ಎಲ್ಲಾ ಜಿಲ್ಲೆಗಳಿಗೂ ಆಕ್ಸಿಜನ್ ಸಾಂದ್ರಕ (ಕಾನ್ಸನ್ ಟ್ರೇಟರ್)ಗಳನ್ನು ನೀಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಸೇರಿದಂತೆ ಬೆಂಗಳೂರು, ಕುಣಿಗಲ್, ಮುಳಬಾಗಿಲುನಲ್ಲಿ 10 ಕಾನ್ಸನ್ ಟ್ರೇಟರ್ಗಳನ್ನು ನೀಡಲಾಗಿದೆ.ಅಂದಾಜು ಚೆನ್ನೈ, ತಮಿಳುನಾಡು ಮತ್ತಿತರ ರಾಜ್ಯಗಳಿಂದಲೂಪೂರೈಸಲು ಬೇಡಿಕೆ ಹೆಚ್ಚಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆವತಿಯಿಂದ ದೇಶಾದ್ಯಂತ ಆಕ್ಸಿಜನ್ ಸಾಂದ್ರಕಗಳನ್ನು ಪೂರೈಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಆನಂದ್ ಮಾತನಾಡಿ, ಕೋವಿಡ್ ಸಂಕಷ್ಟದ ದಿನಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು ನೆರವಿಗೆ ಮುಂದಾಗಿವೆ. ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ಕಾನ್ಸನ್ಟ್ರೇಟರ್ ಮತ್ತಿತರ ವೈದ್ಯಕೀಯ ಉಪಕರಣಗಳನ್ನು ನೀಡಿರುವುದು ಖುಷಿಯ ವಿಚಾರ ಎಂದರು.
ಜಿಲ್ಲಾ ಸರ್ಜನ್ ಡಾ| ಮೋಹನ್ ಮಾತನಾಡಿ, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಆಕ್ಸಿಜನ್ ಕೊರತೆ ಇರುವ ರೋಗಿಗಳನ್ನುತಪಾಸಣೆ ಮಾಡಲು ಈ ಯಂತ್ರಗಳು ಸಹಕಾರಿಯಾಗಲಿವೆಎಂದರು. ಅವಿರತ ಭಾರತ ಸಂಸ್ಥೆಯ ಹರ್ಷ, ವಸುಂದರ, ಯತಿರಾಜು, ವಿಜಯ್, ವಿನೋದ್, ಶಶಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ