Kadur: ಪಟ್ಟಣದಲ್ಲಿ ವಿವಿಧ ರೂಪಗಳಲ್ಲಿ ಗಣೇಶನ ಪ್ರತಿಷ್ಠಾಪನೆ
Team Udayavani, Sep 20, 2023, 10:53 AM IST
ಕಡೂರು: ಸೋಮವಾರ ಪಟ್ಟಣದ 23 ವಾರ್ಡ್ ಗಳಲ್ಲಿ ಸಾರ್ವಜನಿಕವಾಗಿ ಸುಮಾರು 49 ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಇನ್ನೂ ಮನೆ ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ವಿವಿಧ ರೂಪ, ಭಂಗಿಗಳಲ್ಲಿ, ಶೂನ್ಯ ತ್ಯಾಜ್ಯ ಪರಿಕಲ್ಪನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಸಲಾಗುತ್ತಿದೆ.
ಪಟ್ಟಣದ ದಿ.ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರ ಪುತ್ರ ಶರತ್ಕೃಷ್ಣಮೂರ್ತಿ ಅವರ ಮನೆಯಲ್ಲಿ ಬೆಲ್ಲದ ಗಣಪತಿ ಪ್ರತಿಷ್ಠಾಪನೆ ಮಾಡಿರುವುದು ವಿಶೇಷ.
ಮಂಡ್ಯದ ಅಲೆಮನೆಯ ಅಚ್ಚಲ್ಲಿ ತಯಾರಾಗಿ, ವಿಕಸನ ಸಂಸ್ಥೆಯ ಮೂಲಕ ಈ ವಿಶಿಷ್ಟ ಗಣೇಶ, “ಶೂನ್ಯ ತ್ಯಾಜ್ಯ” ಎಂಬ ಪರಿಕಲ್ಪನೆಗೆ ಸಂಪೂರ್ಣವಾಗಿ ಹೊಂದುತ್ತದೆ. ಅಚ್ಚು ಬೆಲ್ಲದ್ದಾದರೆ ಹಳದಿ, ಕೇಸರಿ ಮತ್ತು ಹಾರ್ಲಿಕ್ಸ್ ನಿಂದ ಮಾಡಿದ ಪೇಸ್ಟ್ ಬಳಸಿ ಕಣ್ಣು, ವಿಭೂತಿ ಪಟ್ಟೆ, ದಂತ ಮತ್ತು ಆಭರಣಗಳ ಅಲಂಕಾರ ಮಾಡಲಾಗಿದೆ.
ಇದೇ ರೀತಿ ಗೌರಿಯನ್ನು ಸಹ ತಯಾರಿಸಲಾಗಿದ್ದು ಮನೆಯಲ್ಲಿಯ ದೊಡ್ಡ ಪಾತ್ರೆಯಲ್ಲಿ ಶುದ್ದ ನೀರನ್ನು ಹಾಕಿ ಗೌರಿ ಮತ್ತು ಗಣೇಶನನ್ನು ಅದರಲ್ಲಿ ವಿಸರ್ಜನೆ ಮಾಡಿ ಬೆಲ್ಲದ ಪಾನಕದ ರೀತಿಯಲ್ಲಿ ಪ್ರಸಾದವಾಗಿ ಸೇವಿಸುವ ಅವಕಾಶವನ್ನು ಬೆಲ್ಲದ ಗಣಪತಿ ಮಾಡಿಕೊಡುತ್ತದೆ.
ಕಳೆದ ಮೂವತ್ತು ವರ್ಷ ಪೇಂಟಿಂಗ್ ಮಾಡದ ಮಣ್ಣಿನ ಗಣಪತಿಯಿಟ್ಟು ಪೂಜಿಸಿದ ನಾವುಗಳು ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. ಈ ವರ್ಷ ವಿಶಿಷ್ಟ ರೀತಿಯಲ್ಲಿ ಗೌರಿ-ಗಣೇಶನ ಹಬ್ಬದ ಆಚರಣೆ ಮಾಡಿದ ಅನುಭವ. ಒಟ್ಟಾರೆ ಪರಿಸರ ಸ್ನೇಹಿ,ಆರೋಗ್ಯ ಸ್ನೇಹಿ ತೀರ್ಥರೂಪಿ ಮತ್ತು ರೈತಮಿತ್ರ ಗಣೇಶಮೂರ್ತಿಯ ಹೊಸ ವ್ಯಾಖ್ಯಾನ ನಮ್ಮ ಬೆಲ್ಲದ ಗಣಪ ಎಂದು ಭಕ್ತಿಯಿಂದ ಪ್ರಾರ್ಥಿಸಿ ಪೂಜಿಸಿ ಮಾತನಾಡುತ್ತಾರೆ ಜಿ.ಪಂ. ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ.
ಪಟ್ಟಣದ ಶ್ರೀ ಪಾಂಡುರಂಗ ರುಕ್ಮಾಯಿ ದೇವಾಲಯದ ಆವರಣದಲ್ಲಿ ಭಾವಸಾರ ಸಮಾಜದ ಯುವಮಂಡಳಿ ವತಿಯಿಂದ ವಿಶಿಷ್ಠವಾಗಿ ಶ್ರೀ ತುಕರಾಮ್ ಮಹಾರಾಜ್ ವೇಷದಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿದ್ದು, ಈ ಸುಂದರವಾಗಿ ಮೂರ್ತಿಯನ್ನು ಅಜ್ಜಂಪುರದ ಶಿಲ್ಪಿ ದಿವಾಕರ್ ತಯಾರಿಸಿ ನೀಡಿರುತ್ತಾರೆ ಎಂದು ಭಾವಸಾರ ಸಮಾಜದ ಮುಖಂಡ ನಂದಿನಿ ಹಾಲಿನ ಅನಿಲ್ ಹೇಳುತ್ತಾರೆ.
ಪಟ್ಟಣದ ಶ್ರೀ ವೀರಭದ್ರೇಶ್ವರ ನಗರದ ನಿವಾಸಿ ಶಿಕ್ಷಕಿ ಪಿ.ಎಂ.ಉಷಾ ಅವರ ಮನೆಯಲ್ಲಿ ಗೌರಿ ಹಬ್ಬದ ಪ್ರಯುಕ್ತ ಮುತೈದೆಯರಿಗೆ ಬಾಗಿನ ಸಮರ್ಪಣೆ ಕಾರ್ಯವು ಅದ್ದೂರಿಯಾಗಿ ನಡೆಯಿತು.
ಗಣೇಶಮೂರ್ತಿ ಪ್ರತಿಷ್ಠಾಪನೆ, ಮುತೈದೆ ಮಹಿಳೆಯರಿಗೆ ಬಾಗಿನ ಅರ್ಪಣೆ ಹಾಗೂ ಚೌತಿಯ ದಿನವಾದ ಸೋಮವಾರ ನಾಗರಪೂಜೆಯನ್ನು ಪಟ್ಟಣದ ಸಾರ್ವಜನಿಕರು ಭಕ್ತಿಯಿಂದ ನೆರವೇರಿಸಿರುವುದಾಗಿ ವರದಿಗಳು ಬಂದಿವೆ. 5 ದಿನಗಳ ನಂತರ ಗಣೇಶಮೂರ್ತಿ ಬಹುತೇಕ ವಿಸರ್ಜನೆ ಕಾರ್ಯವು ಪೊಲೀಸ್ ಬಿಗಿ ಬಂದೊಬಸ್ತ್ ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!