ಚಿಕ್ಕಮಗಳೂರು: ತಂದೆ – ಮಗನ ಪಬ್ ಜಿ ಜಗಳ; ತಾಯಿಯ ಕೊಲೆಯಲ್ಲಿ ಅಂತ್ಯ
ಮಗನ ಮೇಲೆ ಗುಂಡು ಹಾರಿಸಲು ಬಂದಾಗ ಅಡ್ಡ ಬಂದ ತಾಯಿ
Team Udayavani, May 25, 2022, 4:35 PM IST
ಚಿಕ್ಕಮಗಳೂರು : ತಂದೆ – ಮಗನ ಜಗಳದಲ್ಲಿ, ಮಗನ ಪ್ರಾಣವನ್ನು ಉಳಿಸಲು ಹೋಗಿ ತಾಯಿಯೇ ಸಾವಿಗೀಡಾದ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ.
ಮೈಮುನಾ (40) ಮೃತ ದುರ್ಧೈವಿ.
ಘಟನೆ ಹಿನ್ನೆಲೆ : ಯಾವತ್ತೂ ಪಬ್ಬಿ ಆಡುತ್ತಿದ್ದ ಮಗನ ಮೇಲೆ ತಂದೆ ಇಮ್ತಿಯಾಜ್ ರೇಗಿದ್ದಾನೆ. ಮಾತಿಗೆ ಮಾತು ಬೆಳದು ಮಗನ ಮೇಲೆ ಹಲ್ಲೆ ಮಾಡಲು ಮುಂದಾದ ಇಮ್ತಿಯಾಜ್ ಕುಡಿದ ಮತ್ತಿನಲ್ಲಿ ತೋಟದ ಕೋವಿ ಹಿಡಿದು ಸಾಯಿಸಿ ಬಿಡುತ್ತೇನೆ ಎಂದು ಮಗನಿಗೆ ಹೇಳಿ ಕೋವಿಯಿಂದ ಗುಂಡು ಹಾರಿಸಲು ಮುಂದಾಗುವ ವೇಳೆ ಮಗನ ಪ್ರಾಣ ರಕ್ಷಣೆಗೆ ತಾಯಿ ಅಡ್ಡ ಬಂದಿದ್ದಾಳೆ. ಈ ವೇಳೆ ಇಮ್ತಿಯಾಜ್, ಪತ್ನಿ ಎಂದು ನೋಡದೆ ಒಮ್ಮೆಲೇ ಗುಂಡು ಹಾರಿಸಿದ್ದಾನೆ. ಪರಿಣಾಮ ಮೈಮುನಾ ಗುಂಡು ಹೊಕ್ಕಿ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.
ಹಿರಿಯ ಮಗ ಅಮ್ಮನನ್ನು ತಕ್ಷಣ ಆಸ್ಪತ್ರೆಗೆ ಕರೆತಂದರೂ ಆ ವೇಳಗಾಗಲೇ ಮೈಮುನಾ ಸಾವನ್ನಪ್ಪಿದ್ದರು. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇಮ್ತಿಯಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ