ಮನೆ ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ನೀಡಿ
Team Udayavani, Oct 9, 2020, 7:26 PM IST
ಬಾಳೆಹೊನ್ನೂರು: ಭದ್ರಾ ನದಿ ಪ್ರವಾಹದಿಂದ ಬಂಡಿಮಠದಲ್ಲಿ ಮನೆ ಕಳೆದುಕೊಂಡಿರುವಕುಟುಂಬದವರಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿರಾಜೇಗೌಡ ಅವರಿಗೆ ನಿರಾಶ್ರಿತರು ಮನವಿ ಮಾಡಿದರು.
ಬಂಡಿಮಠದ ಬಾಲಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ನಿವೇಶನನೀಡುವ ಬಗ್ಗೆ ಚರ್ಚಿಸಲು ಉಪ ವಿಭಾಗಾಧಿಕಾರಿಗಳು ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ತ್ವರಿತವಾಗಿ ಕಾಮಗಾರಿ ಮಾಡಿಸಬೇಕು. ಭದ್ರಾನದಿಗೆ ನೂತನ ಸೇತುವೆ ನಿರ್ಮಾಣ ಸಂಬಂಧ ಕೆಲವು ಕುಟುಂಬಗಳ ಮನೆ ತೆರವುಗೊಳಿಸಬೇಕಾಗುತ್ತದೆ. ಈ ಹಿಂದೆ ನಿರಾಶ್ರಿತರಿಗೆ ನಿವೇಶನಗಳನ್ನು ನೀಡಲಾಗಿತ್ತು. ಕೆಲವರು ಮಾರಾಟ ಮಾಡಿ ಅದೇ ಸ್ಥಳದಲ್ಲಿದ್ದಾರೆ.ಒಂದು ಕುಟುಂಬಕ್ಕೆ ಎಷ್ಟು ಬಾರಿ ನಿವೇಶನ ನೀಡಬಹುದೆಂದು ಶಾಸಕರಲ್ಲಿ ಪ್ರಶ್ನಿಸಿದರು ಕೆಲವರಿಗೆ ಪರಿಹಾರದ ಹಣ ಬಂದಿದ್ದು ಮನೆ ಕಟ್ಟುತ್ತಿದ್ದಾರೆ. ಪುನಃ ಇವರಿಗೆ ಸೇತುವೆ ನಿರ್ಮಾಣ ಸಂಬಂಧ ಮನೆ ತೆರವುಗೊಳಿಸಿ ಪರಿಹಾರ ಕೊಡಬೇಕಾಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಮಾತನಾಡಿದ ಶಾಸಕರು, ನೂತನ ಸೇತುವೆ ನಿರ್ಮಾಣದ ಬಗ್ಗೆ ಸ್ಥಳ ಪರೀಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಇಂಜಿನಿಯರ್ಗಳು ನನ್ನ ಗಮನಕ್ಕೆ ತಾರದೆ ಕಾಮಗಾರಿ ಪ್ರಾರಂಭಿಸಿದ್ದಾರೆ. ಹೊಸ ಸೇತುವೆ ನಿರ್ಮಾಣಕ್ಕೆ ಎಷ್ಟು ಮನೆಗಳು ತೆರವುಗೊಳಿಸಬೇಕು ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಮನೆ ತೆರವುಗೊಳಿಸಿದವರಿಗೆ ಬದಲಿ ನಿವೇಶನ ನೀಡುವ ಬಗ್ಗೆ ಸ್ಥಳ ಗುರುತಿಸದೆ ಸಭೆ ಕರೆದಿರುವುದು ಸರಿಯಲ್ಲ. ನಿವೇಶನ ಜಾಗ ಗುರುತಿಸಿದ ಮೇಲೆ ನಿರಾಶ್ರಿತರೊಂದಿಗೆ ಸಭೆ ನಡಸಿ ಚರ್ಚಿಸೋಣ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ರೇಣುಕಾಪ್ರಸಾದ್ ಮಾತನಾಡಿ, ನ್ಯಾಯಯುತವಾಗಿ ಪರಿಹಾರ ನೀಡಬೇಕಾಗಿದ್ದು ಸರ್ಕಾರದ ಜವಾಬ್ದಾರಿ ಆಗಿದೆ. ಬದಲಿ ನಿವೇಶನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಜಿಪಂ ಸದಸ್ಯೆ ಚಂದ್ರಮ್ಮ, ತಾಪಂ ಉಪಾದ್ಯಕ್ಷ ಮಂಜು ಹೊಳೆಬಾಗಿಲು, ತಾಪಂ ಸದಸ್ಯರಾದ ಟಿ.ಎಂ. ನಾಗೇಶ್, ರವಿ, ಬಿ. ಕಣಬೂರು ಗ್ರಾಪಂ ಮಾಜಿ ಅದ್ಯಕ್ಷ ಮಹಮ್ಮದ್ ಹನೀಫ್, ಬನ್ನೂರು ಗ್ರಾಪಂ ಮಾಜಿ ಸದಸ್ಯ ಗೋವಿಂದ ರಾಜು ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ