Heavy rain: ಚಿಕ್ಕಮಗಳೂರು; ಲಕ್ಷಾಂತರ ಮೌಲ್ಯದ ನೂರಾರು ಎಕರೆ ಭತ್ತದ ಬೆಳೆ ಹಾನಿ
Team Udayavani, Nov 10, 2023, 1:37 PM IST
ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಭತ್ತದ ಕೃಷಿ ಹಾನಿಯಾಗಿವೆ.
ನಿನ್ನೆ ಸಂಜೆ ನಂತರ ರಾತ್ರಿವರೆಗೂ ಸುರಿದ ಧಾರಾಕಾರ ಮಳೆಗೆ ಹಳ್ಳದ ನೀರು ಗದ್ದೆಗೆ ಹರಿದು ಭತ್ತದ ಕೃಷಿ ಸಂಪೂರ್ಣ ನಾಶವಾಗಿದ್ದು, ಲಕ್ಷಾಂತರ ಮೌಲ್ಯದ ನೂರಾರು ಎಕರೆ ಭತ್ತದ ಬೆಳೆ ಹಾನಿಯಾಗಿದೆ.
ಭತ್ತ ಬೆಳೆದ ರೈತರಲ್ಲಿ ಆತಂಕ ಹೆಚ್ಚಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗಿದೆ.
ಕೊಪ್ಪ ತಾಲೂಕಿನ ಹೇರೂರು ಸಮೀಪದ ಹಾಡುಗಾರು, ಹುಲುಕೊಡುಗದ್ದೆಯಲ್ಲಿ ಇನ್ನೂ ಹಳ್ಳದ ನೀರು ಹರಿಯುತ್ತಿದೆ ಎನ್ನಲಾಗಿದೆ.