ಶ್ವಾನಗಳಿಗೀಗ ಸೋಂಕು ಭೀತಿ
Team Udayavani, Oct 16, 2022, 3:27 PM IST
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಆದ ಬೆನ್ನಲ್ಲೇ ಬಹುತೇಕ ಕಡೆಗಳಲ್ಲಿ ಶ್ವಾನಗಳು ಫಾರ್ವೋ ವೈರಲ್ ಗ್ರ್ಯಾಂಟ್ರೋ ಎಂಟರೈಡಿಸ್ ಸೋಂಕಿಗೆ ಬಲಿಯಾಗುತ್ತಿವೆ.
ಕೂದುವಳ್ಳಿ ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ ಮತ್ತು ಚಿಕ್ಕಮಗಳೂರು ನಗರದ ಮಾರುತಿ ನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಈ ವೈರಸ್ ಬಾಧೆ ಕಾಡುತ್ತಿದ್ದು, ಬೀದಿಶ್ವಾನಗಳು ಸೇರಿದಂತೆ ಸಾಕು ಶ್ವಾನಗಳನ್ನು ಕಾಡುತ್ತಿದೆ. ಮನೆಗಳಲ್ಲಿ ಪ್ರೀತಿಯಿಂದ ಸಾಕಿರುವ ಶ್ವಾನಗಳು ಕೊನೆಯುಸಿರೆಳೆಯುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಈ ವೈರಸ್ ಬರದಂತೆ ತಡೆಯಲು 700 ರಿಂದ 800 ರೂ. ಚುಚ್ಚುಮದ್ದು ಕೊಡಿಸಬೇಕು. ಇದು ದುಬಾರಿ ಚುಚ್ಚುಮದ್ದು ಆಗಿದ್ದು ಸರ್ಕಾರದಿಂದ ಉಚಿತವಾಗಿ ನೀಡಲು ಸಾಧ್ಯವಾಗುತ್ತಿಲ್ಲ. ಚುಚ್ಚುಮದ್ದು ಹಣ ಕೊಟ್ಟು ಖರೀದಿಸಬೇಕಾಗಿದೆ. ಫಾರ್ವೋ ವೈರಸ್ ಕಾಣಿಸಿಕೊಂಡ ಶ್ವಾನಗಳು ಅನಾರೋಗ್ಯಕ್ಕೆ ತುತ್ತಾಗಿ ನರಳಿ ಸಾಯುತ್ತಿವೆ.
ಈ ರೋಗ ಕಾಣಿಸಿಕೊಳ್ಳುವ ಶ್ವಾನಗಳಿಗೆ ವಾರಗಟ್ಟಲೆ ಡ್ರಿಪ್ಸ್ ಹಾಕಬೇಕಾಗುತ್ತದೆ. ನಾಯಿಮರಿಗಳಲ್ಲಿ ಈ ಸೋಂಕು ಕಾಣಿಸಿಕೊಂಡರೆ ಉಳಿಯುವುದು ಕಷ್ಟವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇಂಜೆಕ್ಷನ್ ಕೊಡಿಸಿದರೂ ವೈರಸ್ ಕಾಣಿಸಿಕೊಳ್ಳುತ್ತದೆ. ಈ ವೈರಸ್ ತಗಲುವುದರಿಂದ ಶ್ವಾನಗಳು ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತವೆ.
ಈ ವೇಳೆ ಶ್ವಾನಗಳಿಗೆ ಹಾಲು ಮತ್ತು ಅನ್ನ ಕೊಡುವ ಬದಲು ಒಳ್ಳೆಯ ಪೌಷ್ಟಿಕ ಆಹಾರಗಳನ್ನು ನೀಡಬೇಕಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್ ತಿಳಿಸಿದರು.
ಫಾರ್ವೋ ವೈರಲ್ ಗ್ಯಾಂಟ್ರೋ ಯಂಟರೈಡಿಸ್ ಚುಚ್ಚುಮದ್ದು ಸರ್ಕಾರದಿಂದ ಉಚಿತವಾಗಿ ಸರಬರಾಜಾಗುತ್ತಿಲ್ಲ. 700 ರಿಂದ 800 ರೂ. ವ್ಯಯಿಸಿ ಶ್ವಾನ ಮಾಲೀಕರು ಖರೀದಿಸಿ ವರ್ಷಕ್ಕೊಂದು ಬಾರಿ ಶ್ವಾನಕ್ಕೆ ಕೊಡಿಸಬೇಕು. ಡಾ| ಗುರುಪ್ರಸಾದ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು