ಕೊಟ್ಟಿಗೆಹಾರ : ಭಾರೀ ಮಳೆಗೆ ಭದ್ರಾ ನದಿಯಲ್ಲಿ ತೇಲಿ ಬಂತು ಮಹಿಳೆಯ ಮೃತದೇಹ
Team Udayavani, Jul 17, 2022, 5:51 PM IST
ಕೊಟ್ಟಿಗೆಹಾರ : ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ ಈ ವೇಳೆ ಭದ್ರಾ ನದಿಯಲ್ಲಿ ಮಹಿಳೆಯ ಮೃತದೇಹವೊಂದು ತೇಲಿಬಂದಿದ್ದು ಸ್ಥಳೀಯ ಯುವಕರ ತಂಡ ಮೇಲಕ್ಕೆತ್ತಿದೆ.
ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆ ಗ್ರಾಮದಲ್ಲಿರುವ ಭದ್ರಾ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ತೇಲಿ ಬಂದಿದೆ, ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ಗುರುತು ಸಿಗದಂತಾಗಿದೆ.
ಮಹಿಳೆಯ ಮೃತದೇಹವನ್ನು ಧರ್ಮಸ್ಥಳ ವಿಪತ್ತು ತಂಡ ಹಾಗೂ ಸ್ಥಳೀಯರ ಸಹಕಾರದಿಂದ ಮೇಲಕ್ಕೆತ್ತಲಾಯಿತು.
ಮಹಿಳೆಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಾಗಿದ್ದು, ನದಿಯಲ್ಲಿ ಮೃತದೇಹಗಳು ತೇಲಿ ಬರುತ್ತಿರೋದ್ರಿಂದ ಜನರಲ್ಲಿ ಆತಂಕ ಹೆಚ್ಚಾಗತೊಡಗಿದೆ .
ಇದನ್ನೂ ಓದಿ : ಸಂಕೇಶ್ವರ: ಗೋವಾದಿಂದ ಅಕ್ರಮ ಸಾರಾಯಿ ಸಾಗಾಟ; ಲಾರಿ ಸಹಿತ ಆರೋಪಿ ವಶಕ್ಕೆ