ಚಿತ್ರದುರ್ಗ ಮಾಜಿ ಸಂಸದ ಚಂದ್ರಪ್ಪ ಮನೆ ಮೇಲೆ ಪೊಲೀಸ್ ದಾಳಿ
Team Udayavani, Nov 7, 2019, 6:15 PM IST
ಚಿಕ್ಕಮಗಳೂರು: ಚಿತ್ರದುರ್ಗ ಮಾಜಿ ಸಂಸದ ಚಂದ್ರಪ್ಪ ಅವರು ವಿವಿಧ ಕಾಮಗಾರಿಗಳ ಸಲುವಾಗಿ ಸರ್ಕಾರದ ವತಿಯಿಂದ ತರಿಸಿದ್ದ ಪೈಪುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
ಈ ದೂರಿನನ್ವಯ ಲಕ್ಕವಳ್ಳಿ ಪೊಲೀಸರು ಚಂದ್ರಪ್ಪ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ ಮತ್ತು ಗ್ರಾಮದಲ್ಲಿನ ಅವರ ತೋಟದ ಮನೆಯನ್ನೂ ಪರಿಶೀಲಿಸಿದ್ದಾರೆ.
ಚಂದ್ರಪ್ಪ ಅವರು ತಮ್ಮ ತವರು ಗ್ರಾಮದ ಮನೆಯಲ್ಲಿ ಲೋಡುಗಟ್ಟಲೆ ಪಿ.ವಿ.ಸಿ ಪೈಪ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. , ಅದೇ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲೂ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಬೀಗ ಹಾಕಿ ಚಂದ್ರಪ್ಪ ಕುಟುಂಬಸ್ಥರು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.