

Team Udayavani, May 29, 2020, 3:52 PM IST
ತರೀಕೆರೆ: ಅರಣ್ಯ ಇಲಾಖೆ ಇಟ್ಟ ಬೋನಿಗೆ ಬಿದ್ದ ಚಿರತೆ
ತರೀಕೆರೆ: ಅಮೃತಾಪುರ ಬಳಿಯ ವಿಠಲಾಪುರ ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.
ಹಲವಾರು ದಿನಗಳಿಂದ ಈ ಭಾಗದಲ್ಲಿ ಬೀಡುಬಿಟ್ಟಿದ್ದ ಚಿರತೆ ಜನ-ಜಾನುವಾರುಗಳಿಗೆ ತೊಂದರೆ ಉಂಟು ಮಾಡಿರಲಿಲ್ಲ. ಆದರೆ ನಾಯಿಗಳನ್ನು ಬೇಟೆಯಾಡುತ್ತಿತ್ತು. ಇದನ್ನರಿತ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಠಲಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೋನು ಇರಿಸಲಾಗಿತ್ತು. ಇದೀಗ ಬೋನಿಗೆ ಚಿರತೆ ಬಿದ್ದಿರುವುದರಿಂದ ಅಮೃತಾಪುರ ಹೋಬಳಿ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ಕತ್ತಲಾಗುತ್ತಿದ್ದಂತೆ ಗ್ರಾಮಗಳತ್ತ ಮುಖ ಮಾಡುತ್ತಿದ್ದ ಚಿರತೆ ಸಾಕು ಪ್ರಾಣಿಗಳನ್ನು ಹೊತ್ತೂಯುತ್ತಿತ್ತು. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಸಮತಳ, ಕುಂಟಿನಮಡು, ನೇರಲಕೆರೆ, ಅಮೃತಾಪುರ, ನಾಗೇನಹಳ್ಳಿ ಭಾಗದಲ್ಲಿ ಚಿರತೆ ಸಂಚರಿಸುತ್ತಿತ್ತೆಂದು ಗ್ರಾಮಸ್ಥರು ತಿಳಿಸಿದ್ದಾರೆ.
Ad
Chikkamagaluru: ಹೃದಯಾಘಾತದಿಂದ 50ರ ಗೃಹಿಣಿ ಸಾ*ವು
Chikkamagaluru: ಪ್ರವಾಸಕ್ಕೆ ಬಂದಿದ್ದ 30 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ
ಧೈರ್ಯವಿದ್ದರೆ ಮಸೀದಿ, ಚರ್ಚ್ ವಶಕ್ಕೆ ಪಡೆಯಲಿ: ತೇಜಸ್ವಿ ಸೂರ್ಯ ಸವಾಲು
ಡಿ.ಕೆ.ಶಿವಕುಮಾರ್ಗೆ ಶಾಸಕರ ಬೆಂಬಲ ಇಲ್ಲ ಎಂದಿರುವುದು ದೊಡ್ಡ ಅವಮಾನ: ಸಿ.ಟಿ.ರವಿ
Kadur: ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆದು ನವಿಲು ಸಾ*ವು… ಬಸ್ಸಿನ ಗಾಜು ಪೀಸ್ ಪೀಸ್
You seem to have an Ad Blocker on.
To continue reading, please turn it off or whitelist Udayavani.