ಬಿಂದುಮಾಧವರಲ್ಲಿತ್ತು ಸಮತ್ವ ಮನೋಭಾವ

„ಅಧ್ಯಾತ್ಮ ಲೋಕದ ವಿಸ್ಮಯವನ್ನು ತರ್ಕದ ಮೂಲಕ ವಿಮರ್ಶೆ ಮಾಡಲಾಗದು: ಡಾ| ಲೋಕೇಶ್‌ ಅಗಸನಕಟ್ಟೆ

Team Udayavani, Jul 27, 2021, 6:18 PM IST

27-12

ಚಿತ್ರದುರ್ಗ: ಎಲ್ಲವನ್ನೂ ಪರರಿಗಾಗಿ ತ್ಯಾಗ ಮಾಡಿದ, ಸರ್ವಸಂಗ ಪರತ್ಯಾಗಿ ಬೆಲಗೂರು ಬಿಂದು ಮಾಧವ ಶರ್ಮಾ ಗುರುಗಳು ಎಂದು ಹಿರಿಯ ಸಾಹಿತಿ ಡಾ| ಲೋಕೇಶ್‌ ಅಗಸನಕಟ್ಟೆ ಅಭಿಪ್ರಾಯಪಟ್ಟರು. ಅಖೀಲ ಭಾರತೀಯ ಸಾಹಿತ್ಯ ಪರಿಷತ್ತಿನ ಚಿತ್ರದುರ್ಗ ಜಿಲ್ಲಾ ಘಟಕದಿಂದ ಭಾನುವಾರ ರಾತ್ರಿ ಆನ್‌ಲೈನ್‌ ಮೂಲಕ ಆಯೋಜಿಸಿದ್ದ ಅವಧೂತ ಪರಂಪರೆ-ಸರಣಿ ಉಪನ್ಯಾಸ ಮಾಲಿಕೆಯ ಎರಡನೇ ಕಂತಿನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಮನುಷ್ಯನ ಆತ್ಮವಿಕಾಸದ ಹಾದಿಯಲ್ಲಿ ಸಿದ್ದ ಪರಂಪರೆ, ನಾಥ ಪರಂಪರೆ, ಅವಧೂತ ಪರಂಪರೆಗಳು ಹೇಗೆ ಕೆಲಸ ಮಾಡಿವೆ ಎನ್ನುವುದನ್ನು ಒಳ ಹೊಕ್ಕು ನೋಡಿದಾಗ ಮಾತ್ರ ಗೊತ್ತಾಗುತ್ತದೆ. ಹೊರಗಿನಿಂದ ನೋಡಿದಾಗ ಇದೊಂದು ವಿಲಕ್ಷಣ ಜಗತ್ತು ಅನ್ನಿಸುತ್ತದೆ. ಹೀಗೆ ಭಾವಿಸುವವರ ಅಜ್ಞಾನದ ಬಗ್ಗೆ ಮರುಕವಿದೆ. ಸಿದ್ಧ, ಸಾಧಕರು, ಅವಧೂತರ ನೆಲೆ ಚಿತ್ರದುರ್ಗ. ಹಿರಿಯ ಸಾಹಿತಿ ಕಣಜನಹಳ್ಳಿ ನಾಗರಾಜ್‌ ಜಿಲ್ಲೆಯ ಅವಧೂತರ ಬಗ್ಗೆ ಮೊದಲ ಬಾರಿಗೆ ಕೃತಿ ರಚಿಸಿದ್ದಾರೆ ಎಂದರು.

ಸಾಧನೆ ಮಾಡಲು ಹಿಮಾಲಯಕ್ಕೆ ಹೋಗಬೇಕಿಲ್ಲ. ಇಲ್ಲಿಯೇ ಇದ್ದು ಸಾಧನೆ ಮಾಡಬಹುದು ಎನ್ನುವ ನಿಲುವು ಬಿಂದುಮಾಧವರಲ್ಲಿತ್ತು. ಅಧ್ಯಾತ್ಮ ಲೋಕದ ವಿಸ್ಮಯಗಳನ್ನು ತರ್ಕದ ಮೂಲಕ ವಿಮರ್ಶೆ ಮಾಡಲು ಆಗುವುದಿಲ್ಲ. ಹಠಯೋಗಿಗಳು, ಅವಧೂತರಿಗೆ ದೂರದರ್ಶಿತ್ವ ಇರುತ್ತದೆ ಎನ್ನುವುದು ಬಿಂದುಮಾಧವರ ವಿಚಾರದಲ್ಲಿ ನನಗೆ ಅನುಭವಕ್ಕೆ ಬಂದಿದೆ ಎಂದರು. ಯೋಗ, ಧ್ಯಾನದ ಮೂಲಕ ನಮ್ಮೊಳಗಿರುವ ನಾನು ಎಂಬ ಅಹಂಕಾರ ತೊರೆದು, ನಾನು ಎಲ್ಲರಿಗಾಗಿ ಇದ್ದೇನೆ ಎನ್ನುವ ವಿಶ್ವಪ್ರಜ್ಞೆ ಉಳ್ಳವರು ಅಷ್ಟ ಶಕ್ತಿಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಬಿಂದುಮಾಧವ ಗುರುಗಳು ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದರೂ ಸಾಮಾನ್ಯ ಜೀವನ ನಡೆಸುತ್ತಿದ್ದರು. ಬೆಳಗ್ಗೆ ಎದ್ದು ಬೈಕಿನಲ್ಲಿ ತೋಟಕ್ಕೆ ಹೋಗಿ ಹಾಲು ತರುತ್ತಿದ್ದರು.

ಭಕ್ತರ ಜೊತೆ ಮಾತನಾಡುತ್ತಿದ್ದರು. ಬೆಲಗೂರಿಗೆ ಬರುವ ಭಕ್ತರಿಗೆ ಸಂತೃಪ್ತಿಯಾಗುವಷ್ಟು ಊಟ ಬಡಿಸುವುದು ಅವರಿಗೆ ಪ್ರೀತಿಯ ಕೆಲಸವಾಗಿತ್ತು. ಭಕ್ತರ ಸಂಕಟವನ್ನು ತಮ್ಮದು ಎಂದು ಭಾವಿಸಿದವರು ಎಂದು ಸ್ಮರಿಸಿದರು. ಅವಧೂತರ ಪವಾಡಗಳು ಲೌಕಿಕದ ಜನರಿಗೆ ಕಾಗಕ್ಕ, ಗುಬ್ಬಕ್ಕನ ಕಥೆಗಳಂತೆ ಕಾಣಿಸುತ್ತವೆ. ಅಷ್ಟ ಸಿದ್ಧಿ ಪಡೆದುಕೊಂಡಿದ್ದ ಗುರುಗಳು ಆಂಜನೇಯನನ್ನು ಒಲಿಸಿಕೊಂಡಿದ್ದರು. ಹನುಮನೇ ನಿಜವಾದ ಮೊತ್ತ ಮೊದಲ ಅವಧೂತ ಎನ್ನಬಹುದು ಎಂದು ಅಗಸನಕಟ್ಟೆ ಹೇಳಿದರು.

ನಮ್ಮ ಪೂರ್ವಾಗ್ರಹದ ಕಾರಣಕ್ಕೆ ಅವರ ಒಡನಾಟ ಸಿಗಲು ತಡವಾಯಿತು. ಒಂದಿಷ್ಟು ವರ್ಷ ಮೊದಲು ಅವರ ಸಂಪರ್ಕ ಸಿಕ್ಕಿದ್ದರೆ ಇನ್ನೂ ಒಂದಿಷ್ಟು ಕೃತಿಗಳನ್ನು ರಚನೆ ಮಾಡಬಹುದಿತ್ತು. ಸಮತ್ವದ ಮನೋಭಾವ ಬಿಂದುಮಾಧವರಲ್ಲಿತ್ತು. ಅವರು ಬೋಧಕರಲ್ಲ, ಸಾಧಕರು. ಬಾಳಿ ತೋರಿಸಿದವರು ಎಂದು ತಿಳಿಸಿದರು.

ಅಭಾಸಾಪ ಜಿಲ್ಲಾಧ್ಯಕ್ಷ ಯೋಗೀಶ್‌ ಸಹ್ಯಾದ್ರಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ| ರವಿಕಿರಣ್‌ ನಿರ್ವಹಣೆ ಮಾಡಿದರು. ಉಪನ್ಯಾಸಕ ದೊಡ್ಡಯ್ಯ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಕೆಂಚವೀರಪ್ಪ ವಂದಿಸಿದರು. ಅಭಾಸಾಪ ಜಿಲ್ಲಾ ಗೌರವಾಧ್ಯಕ್ಷ ಕಣಜನಹಳ್ಳಿ ನಾಗರಾಜ್‌, ಶಿವಮೊಗ್ಗ ವಿಭಾಗ ಸಂಯೋಜಕ ಶ್ರೀಹರ್ಷ ಹೊಸಳ್ಳಿ, ಕೊಳಾಳು ಕೆಂಚಪ್ಪ ಮತ್ತಿತರರು ಭಾಗವಹಿಸಿದ್ದರು.

ಟಾಪ್ ನ್ಯೂಸ್

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.