Kedarnath: ಗುಡ್ಡಕುಸಿತ, ಮಳೆಯಿಂದ ಕೇದಾರನಾಥ ಬಳಿ ಸಿಲುಕಿದ ಚಿತ್ರದುರ್ಗ ಮಹಿಳೆಯರು
Team Udayavani, Aug 15, 2023, 11:09 AM IST
ಚಿತ್ರದುರ್ಗ: ವಿಪರೀತ ಮಳೆ ಹಾಗೂ ಗುಡ್ಡ ಕುಸಿತಕ್ಕೆ ತುತ್ತಾಗಿರುವ ಉತ್ತರಾಖಂಡ ರಾಜ್ಯದ ಕೇದಾರನಾಥ ಬಳಿ ಚಿತ್ರದುರ್ಗ ಮೂಲದ ಪ್ರವಾಸಿಗರು ಸಿಲುಕಿರುವ ಮಾಹಿತಿ ಲಭ್ಯವಾಗಿದೆ.
ಕಳೆದ ವಾರ 40 ಜನರ ತಂಡದೊಂದಿಗೆ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದರು. ಈಗ ಕೇದಾರನಾಥ ಬಳಿ ವಿಪರೀತ ಮಳೆಯಿದ್ದು ಅಲ್ಲದೆ ಗುಡ್ಡ ಕುಸಿತವಾಗಿದ್ದು, ಕೇದಾರನಾಥದಿಂದ 30 ಕಿ.ಮೀ ದೂರದಲ್ಲಿ ಅನೇಕರು ಸಿಲುಕಿದ್ದಾರೆ.
ಚಿತ್ರದರ್ಗದ ಬಿಜೆಪಿ ಮುಖಂಡರಾದ ರತ್ನಮ್ಮ, ಅಂಬಿಕಾ, ಗೀತಾ ಮತ್ತಿತರರು ನಡುವೆಯೇ ಸಿಲುಕಿದ್ದು, ಕೇದಾರನಾಥ ತಲುಪಲು ಆಗದೇ ವಾಪಾಸು ಬರಲಾಗದ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.
ಸಂಕಷ್ಟಕ್ಕೆ ಸಿಲುಕಿರುವ ಎಲ್ಕರನ್ನೂ ಆದಷ್ಟು ಶೀಘ್ರ ಸುರಕ್ಷಿತವಾಗಿ ವಾಪಸ್ ಕರೆಸಲು ಸರ್ಕಾರಕ್ಕೆ ಕುಟುಂಬದವರು ಮನವಿ ಮಾಡಿದ್ದಾರೆ.