ಪರಿಸರ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ಅಗತ್ಯ
Team Udayavani, Apr 25, 2022, 4:49 PM IST
ಚಿತ್ರದುರ್ಗ: ಪರಿಸರ ಉಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ ಎಂದು ಭೂಮಿಗೀತ ಸಂಸ್ಥೆಯ ಮಿಠಾಯಿ ಮುರುಗೇಶ್ ತಿಳಿಸಿದರು.
ನಗರದ ಚಂದ್ರವಳ್ಳಿ ಪ್ರದೇಶದಲ್ಲಿರುವ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಸ್ಯಾಕ್ ಅಥ್ಲೆಟಿಕ್ ಅಕಾಡೆಮಿಯ ಕ್ರೀಡಾಪಟುಗಳಿಗೆ ಹಮ್ಮಿಕೊಂಡಿದ್ದ ಪರಿಸರ ಅಧ್ಯಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರೀಡಾಪಟುಗಳು ಹಾಗೂ ಮಕ್ಕಳಿಗೆ ಜೋಗಿಮಟ್ಟಿ ವನ್ಯಜೀವಿಧಾಮ ಪರಿಸರದ ಮಹತ್ವದ ಕುರಿತು ತಿಳಿಸಿದ ಮುರುಗೇಶ್, ಚಾರಣ ಮಾಡುವ ಸ್ಥಳ ಹಾಗೂ ಅನುಭವಗಳು, ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಬಗ್ಗೆ ತಿಳಿಸಿಕೊಟ್ಟರು.
ಪರಿಸರದಲ್ಲಿ ಪ್ರಾಣಿಗಳ ಆಹಾರ ಸರಪಳಿ ಹೇಗಿರುತ್ತದೆ, ಇಲ್ಲಿರುವ ಪ್ರತಿ ಜೀವಿಯೂ ತನ್ನದೇ ಆದ ಮಹತ್ವದ ಕಾರ್ಯವನ್ನು ಹೊಂದಿರುತ್ತದೆ. ಪ್ರಾಣಿಗಳ ಆಹಾರ ಸರಪಳಿಯನ್ನು ಮನುಷ್ಯ ತನ್ನ ದುರಾಸೆಯಿಂದ ಧಕ್ಕೆ ಮಾಡಿ ಅರಣ್ಯವನ್ನು ಸಂಪೂರ್ಣ ನಾಶ ಮಾಡಿದರೆ ಅದು ಇನ್ನೊಂದು ಜೀವಿಯ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಹೀಗೆ ಪ್ರಾಣಿ ಪಕ್ಷಿಗಳು ವಿನಾಶ ಹೊಂದಿದರೆ ಪರಿಸರದಲ್ಲಿ ಏರುಪೇರು ಉಂಟಾಗಿ ಅದು ಮಾನವ ಸಂಕುಲವೇ ವಿನಾಶದ ಹಂತ ತಲುಪುತ್ತದೆ ಎಂದು ಎಚ್ಚರಿಸಿದರು.
ಜೋಗಿಮಟ್ಟಿ ವನ್ಯಧಾಮದಲ್ಲಿ ಕಂಡು ಬರುವ ವನ್ಯಜೀವಿಗಳು ಹಾಗೂ ಪಕ್ಷಿಗಳ ಕೀಟಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಒದಗಿಸಲಾಯಿತು. ಪರಿಸರ ಅಧ್ಯಯನ ಶಿಬಿರದಲ್ಲಿ 150 ಮಕ್ಕಳು ಭಾಗವಹಿಸಿದ್ದರು. ಸ್ಯಾಕ್ ಅಕಾಡೆಮಿಯ ಸತೀಶ್ ಕುಮಾರ್, ಕರಿಬಸಯ್ಯ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ