ಕೆರೆಗಳ ಸಮಗ್ರ ಅಭಿವೃದ್ಧಿಗೆ ಒತ್ತು
Team Udayavani, May 14, 2020, 11:07 AM IST
ಹೊಳಲ್ಕೆರೆ: ತಾಲೂಕಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ದೊರೆತಿದ್ದು ಎಲ್ಲಾ ಕೆರೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿರುವ ಪಟ್ಟಣದ ಐತಿಹಾಸಿಕ ಹೊನ್ನಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸಾಕಷ್ಟು ಕೆರೆಗಳಿದ್ದು ಕೋಡಿ ದುರಸ್ತಿ, ಒತ್ತುವರಿ ತೆರವು, ಜಾಲಿ ತೆರವು, ಹೂಳು ತೆಗೆಯುವುದು, ಏರಿ ಪಿಚ್ಚಿಂಗ್ ಮಾಡಲಾಗುವುದು. ಹೊಳಲ್ಕೆರೆ ಪಟ್ಟಣದ ಮೂರು ಕೆರೆಗಳ ಅಭಿವೃದ್ಧಿಗೆ 3.5 ಕೋಟಿ ರೂ. ಅನುದಾನ ನೀಡಲಾಗಿದೆ. ಕೆಂಚಾಪುರ ಕೆರೆಗೆ 1 ಕೋಟಿ, ಮಾಳೇನಹಳ್ಳಿ ಹೊಸ ಕೆರೆ ನಿರ್ಮಾಣಕ್ಕೆ 2 ಕೋಟಿ, ಅರೆಹಳ್ಳಿ ಹೊಸ ಕೆರೆಗೆ 2 ಕೋಟಿ, ದಾಸರಹಳ್ಳಿಯ ಅಂಜನಾಪುರದ ಕೆರೆಗೆ 2 ಕೋಟಿ, ಹುಳೆಮಳಲಿ ಕೆರೆಗೆ 1 ಕೋಟಿ, ಶಿವಪುರ ಕೆರೆ ಹಾಗೂ ನೀರು ತಡೆಗೆ ಗೋಡೆ ಕಟ್ಟಲು 2 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ್, ವಿಜಯ, ಕೆ.ಸಿ. ರಮೇಶ್, ಬಸವರಾಜ್ ಯಾದವ್, ಮುರುಗೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ