ನಿಗದಿತ ಬೆಲೆಗಾಗಿ ಭತ್ತ ಬೆಳೆಗಾರರ ಕನವರಿಕೆ
ಪ್ರಸಕ್ತ ವರ್ಷ ಬೇಸಿಗೆಯಲ್ಲಿ ಉತ್ತಮ ಇಳುವರಿ ಬಂದಿದ್ದರೂ ಭತ್ತಕ್ಕಿಲ್ಲ ಬೆಲೆ
Team Udayavani, May 3, 2020, 5:30 PM IST
ಸಾಂಧರ್ಭಿಕ ಚಿತ್ರ
ಕುರುಗೋಡು: ಪ್ರಸಕ್ತ ವರ್ಷ ಬೇಸಿಗೆಯ ಸಾಲಿನ ಭತ್ತದ ಬೆಳೆಯ ಇಳುವರಿ ಉತ್ತಮವಾಗಿದ್ದು, ನಿಗದಿತ ಬೆಲೆ ದಿನೇ-ದಿನೇ ಕುಸಿಯುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಈ ಭಾಗದ ರೈತರ ಪ್ರಮುಖ ಬೆಳೆಯಾಗಿರುವ ಭತ್ತ ಕಳೆದ ಮೂರು ವರ್ಷಗಳಿಂದ ಬೆಂಬಲಿತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಭತ್ತ ಉತ್ತಮ ಇಳುವರಿ ಇದ್ದರೂ ಬೆಲೆಯಲ್ಲಿ ಇಳಿಮುಖೀವಾಗಿ ರೈತರ ಮುಖದಲ್ಲಿ ಸಂತಸ ತೊರದಂತಾಗಿದೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಇಲ್ಲದ ಕಾರಣ ರೈತರು ಆರ್ಥಿಕ ಬಿಕ್ಕಟ್ಟಿನ ಒಳಗಾಗಿದ್ದಾರೆ.
ಭತ್ತ ನಾಟಿ ಮಾಡಿದಾಗಿನಿಂದ ಕಟಾವುಗೆ ಬರುವ ತನಕ ಅತಿ ಹೆಚ್ಚು ಖರ್ಚು ಭರಿಸಿದರೂ ಅದಕ್ಕೆ ಪ್ರತಿಯಾಗಿ ತಕ್ಕಂತೆ ಬೆಲೆ ದೊರೆಯದ ಪರಿಣಾಮ ರೈತರ ಸ್ಥಿತಿ ಚಿಂತಾಜನಕವಾಗಿದೆ.
ಕೇಂದ್ರ ಸರಕಾರ ಭತ್ತಕ್ಕೆ ಕ್ವಿಂಟಲ್ಗೆ 1,815 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ ಪ್ರಸಕ್ತ ಮಾರುಕಟ್ಟೆಯಲ್ಲಿ ದಲ್ಲಾಳಿಗಳು 215 ರೂ. ಕಡಿಮೆ ಮಾಡಿದ್ದು, 1,600 ರೂ. ವರೆಗೆ ಭತ್ತವನ್ನು ರೈತರಿಂದ ಖರೀದಿ ಮಾಡಲು ಮುಂದಾಗಿದ್ದಾರೆ.
ಕುರುಗೋಡು ವ್ಯಾಪ್ತಿಯಲ್ಲಿ ಗೆಣಿಕೆಹಾಳ್, ಗುತ್ತಿಗನೂರು, ಓರ್ವಾಯಿ, ಮುಷ್ಟಗಟ್ಟಿ, ಸಿಂದಿಗೇರಿ, ಕ್ಯಾದಿಗೆಹಾಳ್, ಎಚ್. ವೀರಾಪುರ, ಮಣ್ಣೂರು, ಸೂಗೂರು ಭಾಗದಲ್ಲಿ ಬೇಸಿಗೆಯಲ್ಲಿ ಅತಿ ಹೆಚ್ಚು ಭತ್ತ ನಾಟಿ ಮಾಡಿದ್ದಾರೆ. ಬೆಳೆ ಕಟಾವು ಕೊನೆ ಹಂತದಲ್ಲಿ ಸಾಗಿದ್ದು, ಹಲವಾರು ರೈತರು ಒಕ್ಕಲು ಮಾಡಿದ್ದಾರೆ. ಉತ್ತಮ ದರಕ್ಕಾಗಿ ಕನವರಿಸುತ್ತಿದ್ದಾರೆ.
ಒಂದು ಎಕರೆ ಭತ್ತ ನಾಟಿ ಮಾಡಿ ಬೆಳೆದು ಮಾರಾಟ ಮಾಡುವವರೆಗೆ ರೈತರಿಗೆ ಕನಿಷ್ಠ 30 ರಿಂದ 40 ಸಾವಿರ ವೆಚ್ಚವಾಗುತ್ತದೆ. ಖರೀದಿದಾರ ಹಾಗೂ ಮಧ್ಯವರ್ತಿಗಳಿಂದ ಬೆಲೆ ಕುಸಿತಗೊಂಡು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ರಾಜ್ಯ ಸರಕಾರ ತಕ್ಷಣ ಭತ್ತಕ್ಕೆ ಸೂಕ್ತ ದರ ನಿಗದಿ ಮಾಡಬೇಕು.
ಮುಷ್ಟಗಟ್ಟಿ ಭೀಮನಗೌಡ,
ತುಂಗಭದ್ರಾ ರೈತ ಸಂಘದ ತಾಲೂಕು ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!