ಬ್ಯಾಂಕ್‌ಗಳಿಗೆ 10 ರೂ. ನಾಣ್ಯ “ಹೊರೆ’!


Team Udayavani, Nov 22, 2021, 1:24 PM IST

ಬ್ಯಾಂಕ್‌ಗಳಿಗೆ 10 ರೂ. ನಾಣ್ಯ “ಹೊರೆ’!

ಮಹಾನಗರ: ಹತ್ತು ರೂ. ಮುಖಬೆಲೆಯ ನಾಣ್ಯಗಳ ಚಲಾವಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಕೆಲವರು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಕೆಲವು ಬ್ಯಾಂಕ್‌ಗಳಲ್ಲಿ ನಾಣ್ಯಗಳ ರಾಶಿ ಬಿದ್ದಿದೆ.

“10 ರೂ. ನಾಣ್ಯ ಚಲಾವಣೆಗೆ ಯಾವುದೇ ಹಿಂಜರಿಕೆ ಬೇಡ’ ಎಂದು ಈಗಾಗಲೇ ಆರ್‌ಬಿಐ, ಎಲ್ಲ ಬ್ಯಾಂಕ್‌ಗಳು, ಜಿಲ್ಲಾಡಳಿತಗಳು ಸ್ಪಷ್ಟವಾಗಿ ತಿಳಿಸಿವೆ. ಆದರೂ ಕೆಲವರು ತಮ್ಮಲ್ಲಿರುವ ನಾಣ್ಯಗಳನ್ನು ಮರಳಿಸುತ್ತಿರುವುದರಿಂದ ಬ್ಯಾಂಕ್‌ಗಳಿಗೆ ಹೊರೆಯಾಗಿ ಪರಿಣಮಿ ಸಿದೆ. ಇದರಿಂದ ನೋಟಿನ ಬದಲು ನಾಣ್ಯಗಳ ಚಲಾವಣೆಗೆ ಹೆಚ್ಚು ಆದ್ಯತೆ ನೀಡಲು ಮುಂದಾಗಿರುವ ಸರಕಾರದ ಉದ್ದೇಶ ಈಡೇರಿಕೆಗೆ ತೊಡಕಾಗಿದೆ.

ಇನ್ನೊಬ್ಬರತ್ತ ಬೆರಳು!:

10 ರೂ. ನಾಣ್ಯ ನಿರಾಕರಿಸುವವರು ಸ್ಪಷ್ಟ ಕಾರಣ ನೀಡುತ್ತಿಲ್ಲ. ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಹೊರಿಸುತ್ತಾರೆ. ಕೆಲವು ಖಾಸಗಿ ಬಸ್‌ಗಳ ನಿರ್ವಾಹಕರೂ ನಾಣ್ಯವನ್ನು ನಿರಾಕರಿಸುತ್ತಾರೆ. ಪ್ರಶ್ನಿಸಿದರೆ “ನಾವು ಯಾರಿಗೆ ಕೊಡುವುದು? ಅಂಗಡಿಯವರೂ ಸ್ವೀಕರಿಸುತ್ತಿಲ್ಲ’ ಎನ್ನುತ್ತಾರೆ. ಅಂಗಡಿಯವರಲ್ಲಿ ಪ್ರಶ್ನಿಸಿದಾಗ “ನಾವು ಸ್ವೀಕರಿಸುತ್ತೇವೆ. ಆದರೆ ಗ್ರಾಹಕರು ಸ್ವೀಕರಿಸುವುದಿಲ್ಲ’ ಎಂದುತ್ತರಿಸುತ್ತಾರೆ. ಹೊಟೇಲ್‌, ಹಾಲಿನ ಬೂತ್‌ಗಳಲ್ಲಿಯೂ ಈ ಸಮಸ್ಯೆ ಎದುರಾಗಿದೆ.

ಮನವೊಲಿಕೆ :

ವಾಪಸಾಗುತ್ತಿರುವ ನಾಣ್ಯಗಳನ್ನು ಮತ್ತೆ ಚಲಾವಣೆಗೆ ಬರುವಂತೆ ಮಾಡು ವುದು ಬ್ಯಾಂಕ್‌ ಅಧಿಕಾರಿಗಳಿಗೆ ಸವಾಲಾ ಗಿದ್ದು, ವ್ಯಾಪಾರಸ್ಥರು, ಗ್ರಾಹಕರ ಮನವೊಲಿ ಸುತ್ತಿದ್ದಾರೆ. ಮುಂದೆ ಬ್ಯಾಂಕ್‌ಗಳ ಶಾಖಾ ಮಟ್ಟದಲ್ಲಿ “ನಾಣ್ಯ ಮೇಳ’ ನಡೆಸಿ ಜನರಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸಿ ಹೆಚ್ಚು ಹೆಚ್ಚು ಚಲಾವಣೆಗೆ ಬರುವಂತೆ ಮಾಡಲು ನಿರ್ಧರಿಸಿದ್ದಾರೆ.

20 ರೂ.ಗೆ ತೊಡಕಿಲ್ಲ:

ಈಗ ಚಲಾವಣೆಗೆ ಬಂದಿರುವ 20 ರೂ. ನಾಣ್ಯಗಳನ್ನು ಯಾರೂ ನಿರಾಕರಿಸುತ್ತಿಲ್ಲ. ಆದರೆ 10 ರೂ. ಬಗ್ಗೆ ಯಾಕೋ ಕೆಲವರಲ್ಲಿ ಸಂದೇಹ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ಬ್ಯಾಂಕ್‌ಗೆ ವಾಪಸಾಗುತ್ತಿರುವ 10 ರೂ. ನಾಣ್ಯಗಳ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ತಿಳಿವಳಿಕೆಯುಳ್ಳ ಜನರು ಇತರರಿಗೆ ಮಾಹಿತಿ ನೀಡಿ ಗೊಂದಲ ಸರಿಪಡಿಸುವ ಆವಶ್ಯಕತೆ ಇದೆ ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿಗಳು.

ನಿರಾಕರಣೆ ಸಲ್ಲದು:

ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ 10 ರೂ. ನಾಣ್ಯಗಳನ್ನು ನಿರಾಕರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ಗಳ ನಿರ್ವಾಹಕರಿಗೆ 10 ರೂ. ನಾಣ್ಯ ಸ್ವೀಕರಿಸಬಾರದು ಎಂದು ನಾವು ಸೂಚನೆ ನೀಡಿಲ್ಲ ಎಂದು ಬಸ್‌ ಮಾಲಕರು ಸ್ಪಷ್ಟಪಡಿಸಿದ್ದಾರೆ. ಹೊಟೇಲ್‌ಗ‌ಳಲ್ಲೂ ನಿರಾಕರಿಸಬಾರದು ಎಂದು ಮಾಲಕರಿಗೆ ಸೂಚಿಸಲಾಗಿದೆ ಎಂದು ಸಂಘದವರು ತಿಳಿಸಿದ್ದಾರೆ.

10 ರೂ. ಮುಖಬೆಲೆಯ 10 ವಿನ್ಯಾಸದ ನಾಣ್ಯಗಳಿದ್ದು, ಎಲ್ಲವೂ ಇತರ ನಾಣ್ಯಗಳಂತೆಯೇ ಮಾನ್ಯತೆ ಹೊಂದಿವೆ. ರಿಸರ್ವ್‌ ಬ್ಯಾಂಕ್‌ ಕೂಡ ಸ್ಪಷ್ಟೀಕರಣ ನೀಡಿದೆ. ಜನರಿಗೆ ಯಾರೂ ತಪ್ಪು ಮಾಹಿತಿ ನೀಡಬಾರದು. ಹೆಚ್ಚು ಬಾಳಿಕೆಗಾಗಿ, ನೋಟಿನ ಕಾಗದಗಳಿಗೆ ಮರಗಳ ಬಳಕೆ ಕಡಿಮೆ ಮಾಡುವುದು ಮೊದಲಾದ ಉದ್ದೇಶದಿಂದ ನಾಣ್ಯಗಳನ್ನು ಮುದ್ರಿಸಲಾಗುತ್ತದೆ. ಇವೆಲ್ಲವೂ ಲೀಗಲ್‌ ಟೆಂಡರ್‌ ಕರೆನ್ಸಿಗಳು.ಪ್ರವೀಣ್‌ ಎಂ.ಪಿ.,  ದ.ಕ. ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌

-ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.