ದಲಿತ ಸಮಾಜಕ್ಕೆ ವೇದವ್ಯಾಸ್‌ ಕಾಮತ್‌ ರಿಂದ 40 ಕೋ.ರೂ.ಅನುದಾನ


Team Udayavani, May 3, 2023, 3:50 PM IST

1-s-dsdsa

ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತ ಸಮಾಜಕ್ಕೆ ಶಾಸಕ ವೇದವ್ಯಾಸ ಕಾಮತ್‌ ಅವರ ಕೊಡುಗೆ ಅಪಾರವಾಗಿದ್ದು ಅವರನ್ನು ಮತ್ತೂಮ್ಮೆ ಜನಸೇವೆಗೆ ಅನುವು ಮಾಡಿಕೊಡಬೇಕಿದೆ ಎಂದು ಬಿಜೆಪಿಯ ಮಂಗಳೂರು ದಕ್ಷಿಣ ಮಂಡಲ ಎಸ್‌ಸಿ ಮೋರ್ಚಾದ ಮಾಜಿ ಅಧ್ಯಕ್ಷ ಉಮಾನಾಥ ಅಮೀನ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದವ್ಯಾಸ ಕಾಮತ್‌ ಅವರ ಅವಧಿಯಲ್ಲಿ ನಗರ ವ್ಯಾಪ್ತಿಯ ದಲಿತ ಕಾಲೋನಿ, ಅಂಬೇಡ್ಕರ್‌ ಭವನ, ಕುದ್ಮುಲ್‌ ರಂಗರಾವ್‌ ಭವನ, ಪೌರ ಕಾರ್ಮಿಕರ ಕಟ್ಟಡ ಹಾಗೂ ದೈವಸ್ಥಾನಗಳಿಗೆ ಹರಿದು ಬಂದಿರುವ ಸುಮಾರು 40 ಕೋಟಿ ರೂ. ದೊಡ್ಡ ಮೊತ್ತದ ಅನುದಾನಗಳ ಬಗ್ಗೆ ವಿವರಿಸಿದರು.

ಅತ್ತಾವರದಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ 2.50 ಕೋಟಿ ರೂ., ದೇರೆಬೈಲ್‌ನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಮೇಲ್ಛಾವಣಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗೆ 40 ಲಕ್ಷ ರೂ., ಅತ್ತಾವರ ಬಾಬುಗುಡ್ಡೆಯ ಕುದ್ಮುಲ್‌ ರಂಗರಾವ್‌ ಅವರ ಸಮಾಧಿ ಬಳಿ ಪ್ರವಾಸಿತಾಣ ಹಾಗೂ ಅಭಿವೃದ್ಧಿಗೆ 3 ಕೋಟಿರೂ., ಮಹಾಕಾಳಿ ಪಡ್ಪುವಿನ ಪೌರ ಕಾರ್ಮಿಕರ ಕಟ್ಟಡ ಕಾಮಗಾರಿಗೆ 3.10 ಕೋಟಿ ರೂ. ಸೇರಿದಂತೆ ಕ್ಷೇತ್ರದ ಹಲವು ದೈವಸ್ಥಾನಗಳು, ಅಂಬೇಡ್ಕರ್‌ ಭವನ ಹಾಗೂ ಕುದ್ಮುಲ್‌ ರಂಗರಾವ್‌ ಭವನಗಳ ಅಭಿವೃದ್ಧಿಗೆ ವೇದವ್ಯಾಸ ಕಾಮತ್‌ ಅನುದಾನ ಒದಗಿಸಿದ್ದಾರೆ ಎಂದು ಅವರು ಹೇಳಿದರು.

ವೇದವ್ಯಾಸ ಕಾಮತ್‌ ಅವರ ಮುತುವರ್ಜಿಯಿಂದ ಕಳೆದ ಬಾರಿ ರಾಜ್ಯ ಸರಕಾರ ಹಾಗೂ ಮಹಾನಗರ ಪಾಲಿಕೆಯಿಂದ 25ಕ್ಕೂ ಅಧಿಕ ದಲಿತ ಕಾಲನಿಗಳ ಅಭಿವೃದ್ದಿಗೆ 40 ಕೋಟಿ ರೂ.ಗಳ ಅನುದಾನ ದೊರಕಿದೆ. ಕಳೆದ ಬಾರಿಯಂತೆ ಈ ಬಾರಿಯೂ ವೇದವ್ಯಾಸ ಕಾಮತ್‌ ಅವರು, ನಾಮಪತ್ರ ಸಲ್ಲಿಕೆಗೂ ಮುನ್ನ ದಲಿತೋದ್ಧಾರಕ, ಸಾಮಾಜಿಕ ಕ್ರಾಂತಿಕಾರಿ, ಕುದ್ಮುಲ್‌ ರಂಗರಾಯರ ಸಮಾಧಿಗೆ ತೆರಳಿ ಗೌರವ ಸಲ್ಲಿಸಿ ಆದರ್ಶ ಮೆರೆದಿದ್ದಾರೆ ಎಂದರು.

ಗೋಷ್ಠಿಯಲ್ಲಿ ಮಾಜಿ ಮೇಯರ್‌ ಪ್ರವೀಣ್‌ ಅಂಚನ್‌, ಮೋರ್ಚಾದ ಪ್ರಮುಖರಾದ ಪ್ರಸನ್ನ ದಡ್ಡಲಕಾಡು, ಗೀತಾ ಭವಾನಿಶಂಕರ್‌, ಪ್ರಜ್ವಲ್‌ ಚಿಲಿಂಬಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

delta

Goa: ಕ್ಯಾಸಿನೊ ಆಪರೇಟರ್ ಡೆಲ್ಟಾ ಕಾರ್ಪ್‍ಗೆ GST ಬಾಕಿ ಕುರಿತು ನೋಟಿಸ್

Politics: 32 ಎಎಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಪ್ರತಾಪ್ ಸಿಂಗ್ ಬಾಜ್ವಾ

Politics: 32 ಆಪ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಕೇಜ್ರಿವಾಲ್ ಗೆ ಬಾಜ್ವಾ ಸಂದೇಶ

karwar

Karwar; ಶೀಘ್ರದಲ್ಲೇ ಕಾರವಾರ ಬಳಿ‌ ಹೆದ್ದಾರಿ ಟನಲ್ ಪುನರಾರಂಭ ಸಾಧ್ಯತೆ

Asian Games: ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದ ಭಾರತ

Asian Games: ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದ ಭಾರತ

11-vitla

Kasaragodu: ಬಸ್‌- ಪಿಕಪ್‌ ಢಿಕ್ಕಿ : ಗಂಭೀರ ಗಾಯಗೊಂಡಿದ್ದ ಪಿಕಪ್ ಚಾಲಕ ಸಾವು

ಯೋಧನನ್ನು ಥಳಿಸಿ PFI ಎಂದು ಬರೆದ ಪ್ರಕರಣಕ್ಕೆ ಟ್ವಿಸ್ಟ್!ತನಿಖೆಯಲ್ಲಿ ನಿಜಾಂಶ ಬಯಲು

tdy-11

UDUPI: ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ; 25.45 ಲ.ರೂ. ಮೌಲ್ಯದ ಸೊತ್ತು ವಶ

ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ; 25.45 ಲ.ರೂ. ಮೌಲ್ಯದ ಸೊತ್ತು ವಶ

Panambur ಬೇಡಿಕೆ ಈಡೇರಿಕೆ ಭರವಸೆ: ಲಾರಿ ಮುಷ್ಕರ ಮುಂದೂಡಿಕೆ

Panambur ಬೇಡಿಕೆ ಈಡೇರಿಕೆ ಭರವಸೆ: ಲಾರಿ ಮುಷ್ಕರ ಮುಂದೂಡಿಕೆ

Fraud Case ಆನ್‌ಲೈನ್‌ ಉದ್ಯೋಗ ಆಮಿಷ: ವಂಚನೆ

Fraud Case ಆನ್‌ಲೈನ್‌ ಉದ್ಯೋಗ ಆಮಿಷ: ವಂಚನೆ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

delta

Goa: ಕ್ಯಾಸಿನೊ ಆಪರೇಟರ್ ಡೆಲ್ಟಾ ಕಾರ್ಪ್‍ಗೆ GST ಬಾಕಿ ಕುರಿತು ನೋಟಿಸ್

Bagalkote: ಬಸ್‌ ನಿಲ್ದಾಣ ಬಂತು- ಮೂಗು ಮುಚ್ಚಿಕೊಳ್ಳಿ!

Bagalkote: ಬಸ್‌ ನಿಲ್ದಾಣ ಬಂತು- ಮೂಗು ಮುಚ್ಚಿಕೊಳ್ಳಿ!

Politics: 32 ಎಎಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಪ್ರತಾಪ್ ಸಿಂಗ್ ಬಾಜ್ವಾ

Politics: 32 ಆಪ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಕೇಜ್ರಿವಾಲ್ ಗೆ ಬಾಜ್ವಾ ಸಂದೇಶ

karwar

Karwar; ಶೀಘ್ರದಲ್ಲೇ ಕಾರವಾರ ಬಳಿ‌ ಹೆದ್ದಾರಿ ಟನಲ್ ಪುನರಾರಂಭ ಸಾಧ್ಯತೆ

Ramanagara: ಬಿಡದಿ ಸ್ಮಾರ್ಟ್‌ಸಿಟಿ ಯೋಜನೆಗೆ ಬಾಲಗ್ರಹಣ

Ramanagara: ಬಿಡದಿ ಸ್ಮಾರ್ಟ್‌ಸಿಟಿ ಯೋಜನೆಗೆ ಬಾಲಗ್ರಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.